ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕ ರಾಜಕಾರಣದಲ್ಲಿ ಅತ್ಯಂತ ಹಿರಿಯರು. ಅವರಿಗೆ ದಶಕಗಳ ರಾಜಕೀಯ ಅನುಭವ ಇದೆ. ವಯಸ್ಸೂ ಇದೆ. ಪಕ್ಷದಲ್ಲಿ ಯಾರನ್ನೇ ಆದರೂ ಶಿಸ್ತಿನ ಹಾದಿಯಲ್ಲಿ ನಡೆಸುವ ಸಂಪೂರ್ಣ ಅಧಿಕಾರ ಮತ್ತು ಅರ್ಹತೆ ಅವರಿಗಿದೆ. ಅದನ್ನು ಪ್ರಶ್ನಿಸುವ ಯೋಗ್ಯತೆ ಬಿಜೆಪಿಯವರಿಗೆ ಇಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರಿಗೆ ತಮ್ಮ ಪಕ್ಷದ ಬಗ್ಗೆ ಇರುವ ಚಿಂತೆಗಿಂತ ಮಲ್ಲಿಕಾರ್ಜುನ ಖರ್ಗೆ ಏನು ಹೇಳುತ್ತಾರೆ ಎಂಬುದರ ಬಗ್ಗೆ ಹೆಚ್ಚು ಚಿಂತೆಯಿದೆ. ತಮ್ಮ ಶಾಸಕರು ಬಿಜೆಪಿಗೆ ನಿಷ್ಠರಾಗಿದ್ದಾರೆ ಎಂಬುದಕ್ಕೆ ಪ್ರಮಾಣ ಮಾಡಿಸಲು ಪಕ್ಷದ ಅಧ್ಯಕ್ಷರು ಎಲ್ಲರನ್ನೂ ದೇವಸ್ಥಾನಕ್ಕೆ ಕರೆದೊಯ್ಯಬೇಕಾದ ಪರಿಸ್ಥಿತಿ ಬಂದಿದ್ದರೆ, ಅವರ ಆತ್ಮವಿಶ್ವಾಸದ ಮಟ್ಟವನ್ನು ಊಹಿಸಬಹುದು. ಆದರೆ ಒಂದು ಮಾತು ಹೇಳಬೇಕೆಂದರೆ, ರಾಮನ ಹೆಸರಿನಲ್ಲಿ ಲೂಟಿ ಮಾಡಿದವರು ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಸತ್ಯವನ್ನು ಹೇಳುತ್ತಾರೆಯೇ?” ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರಾಗಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಯಾರನ್ನಾದರೂ — ಅವರು ಮುಖ್ಯಮಂತ್ರಿ ಆಗಿರಲಿ, ಮಾಜಿ ಮುಖ್ಯಮಂತ್ರಿ ಆಗಿರಲಿ, ಎನ್ಎಸ್ಯುಐ ಸದಸ್ಯರಾಗಿರಲಿ ಅಥವಾ ಯುವ ಕಾರ್ಯಕರ್ತರಾಗಿರಲಿ — ತರಾಟೆಗೆ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಅವರಿಗೆ ಇದೆ. ಇದರಲ್ಲಿ ಯಾವುದೇ ಬೇಧವಿಲ್ಲ. ಅವರ ಹಿರಿಯತೆ ಮತ್ತು ಸ್ಥಾನಮಾನಕ್ಕೆ ತಕ್ಕಂತೆ ಪಕ್ಷದಲ್ಲಿ ಶಿಸ್ತು ಕಾಪಾಡುವ ಅಧಿಕಾರ ಅವರಿಗೆ ಇದೆ.
ಮತ್ತು ಅದರಿಂದ ಯಾರೂ ಬೇಸರಪಡುವುದಿಲ್ಲ. ನಮ್ಮ ಪಕ್ಷದವರೇ ಈ ವಿಷಯದ ಬಗ್ಗೆ ಚಿಂತಿಸದಿರುವಾಗ, ಬಿಜೆಪಿಗೆ ಏಕೆ ಚಿಂತೆ? ಅವರು ತಮ್ಮದೇ ಪಕ್ಷದ ಬಗ್ಗೆ ಗಮನಹರಿಸಬೇಕು ಎಂದರು.