ಛಲವಾದಿ ನಾರಾಯಣಸ್ವಾಮಿ 
ರಾಜಕೀಯ

ನಮ್ಮ ಪ್ರಧಾನಿ ನರೇಂದ್ರ ಮೋದಿ 'ಸರೆಂಡರ್' ಅಲ್ಲ, 'ಧುರಂದರ್': ಛಲವಾದಿ ನಾರಾಯಣಸ್ವಾಮಿ

ಗೆಲುವಿನ ಸಂದರ್ಭದಲ್ಲಿ ಹೇಗಿರಬೇಕು ಎಂಬುದನ್ನು ಕೂಡ ನಾಯಕರು ಅರ್ಥ ಮಾಡಿಕೊಳ್ಳಬೇಕು. ಆಪರೇಷನ್ ಸಿಂಧೂರ್ ಮೂಲಕ ಮೋದಿ ಅವರು ಗೆಲುವು ಪಡೆದರು‌. ಆದರೆ, ಸಿದ್ದರಾಮಯ್ಯ ಆರ್​ಸಿಬಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ 11 ಜನರ ಸಾವಿಗೆ ಕಾರಣರಾದರು ಎಂದು ಆರೋಪಿಸಿದರು.

ಬೆಂಗಳೂರು: ಕಾಂಗ್ರೆಸ್‌ನವರು ಪ್ರಧಾನಿ ಮೋದಿ ಅವರನ್ನು ನರೇಂದರ್ ಅಲ್ಲ, ಸರೆಂಡರ್ ಅಂತ ಟೀಕಿಸುತ್ತಾರೆ. ಆದರೆ, ನಮ್ಮ ಪ್ರಧಾನಿ ಸರೆಂಡರ್ ಅಲ್ಲ, ಅವರು 'ಧುರಂದರ್', ಎಲ್ಲಿ, ಯಾವಾಗ, ಹೇಗೆ ಪಾಠ ಕಲಿಸಬೇಕೋ ಅಲ್ಲಿ ಕಲಿಸುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಅಧಿಕಾರ ನಡೆಸುವವರಿಗೆ ಸಂಯಮ ಬಹಳ ಮುಖ್ಯ ಯಾವ ಸಂದರ್ಭದಲ್ಲಿ ನಮಗೆ ಕಷ್ಟ ಬರುತ್ತದೆಯೋ ಆಗ ಸಂಯಮವಾಗಿರಬೇಕು. ಗೆಲುವಿನ ಸಂದರ್ಭದಲ್ಲಿ ಹೇಗಿರಬೇಕು ಎಂಬುದನ್ನು ಕೂಡ ನಾಯಕರು ಅರ್ಥ ಮಾಡಿಕೊಳ್ಳಬೇಕು. ಆಪರೇಷನ್ ಸಿಂಧೂರ್ ಮೂಲಕ ಮೋದಿ ಅವರು ಗೆಲುವು ಪಡೆದರು‌. ಆದರೆ, ಸಿದ್ದರಾಮಯ್ಯ ಆರ್​ಸಿಬಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ 11 ಜನರ ಸಾವಿಗೆ ಕಾರಣರಾದರು ಎಂದು ಆರೋಪಿಸಿದರು.

ಅದು ನಮ್ಮ ಧುರಂದರ್ ಪ್ರಧಾನಿ ಅವರಲ್ಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಅದಕ್ಕೆ ಮೋದಿಯವರು ಧುರಂದರ್ ಅಲ್ಲ ದುರಂತರ್ ಎಂದು ಸಚಿವರಾದ ಎಂ.ಬಿ. ಪಾಟೀಲ್, ಭೈರತಿ ಸುರೇಶ್ ತಿರುಗೇಟು ನೀಡಿದರು.

ಬಜೆಟ್ ಕೊರತೆಯನ್ನು ಕಡಿಮೆ ಮಾಡುವಲ್ಲಿ ವಿಫಲರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾರಾಯಣಸ್ವಾಮಿ ಟೀಕಿಸಿದರು. "17 ಬಾರಿ ಬಜೆಟ್ ಮಂಡಿಸುವ ಅವಕಾಶ ಸಿಕ್ಕಿದ್ದರೂ, ಸಿದ್ದರಾಮಯ್ಯ ಅವರದ್ದು ಕೊರತೆಯ ಬಜೆಟ್‌ಗಳಾಗಿವೆ. ರಾಜ್ಯದ ಸಾಲ 16,000 ಕೋಟಿ ದಾಟಿದೆ. ಹಣಕಾಸಿನ ಶಿಸ್ತು ಇಲ್ಲ. ತೆರಿಗೆ ಸಂಗ್ರಹದಲ್ಲಿನ ಇಳಿಕೆಯಿಂದಾಗಿ ಆದಾಯ ಕುಸಿದಿದೆ ಎಂದಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಸರ್ಕಾರದಿಂದ ಅನ್ಯಾಯವಾಗುತ್ತಿದ್ದರೂ, ಯಾರೂ ಇದರ ಬಗ್ಗೆ ಹೋರಾಡುತ್ತಿಲ್ಲ. ಅಂಬೇಡ್ಕರ್ ಹೆಸರಿನ ಸಂಘಟನೆಗಳು ಎಲ್ಲರ ವಿರುದ್ಧ ಹೋರಾಡಬೇಕು. ಈ ರೀತಿ ಅನ್ಯಾಯವಾದಾಗ, ಕೆಲವು ಸಂಘಟನೆಗಳು ಮೌನವಾಗಿರುತ್ತವೆ, ಅಂತಹ ಜನರನ್ನು ಪ್ಯಾಕೇಜ್ ಸಂಸ್ಥೆಗಳು ಎಂದು ಕರೆಯಬಹುದು.

ಸಾಮಾಜಿಕ ನ್ಯಾಯಕ್ಕಾಗಿ ಮುಖ್ಯಮಂತ್ರಿಗಳು ಬ್ಯಾಟಿಂಗ್

ಸರ್ಕಾರವು ವೈಚಾರಿಕತೆ ಮತ್ತು ಸಮಾನತೆಯನ್ನು ಉತ್ತೇಜಿಸುವ ಕಾನೂನುಗಳು ಮತ್ತು ಯೋಜನೆಗಳನ್ನು ತರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ, ನಮ್ಮ ಸರ್ಕಾರ SCP/TSP ಯೋಜನೆಯನ್ನು ತಂದಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ಮತ್ತು ಬಡ್ತಿಗಳಲ್ಲಿ ಮೀಸಲಾತಿ ನೀಡಲಾಯಿತು. ಇಂತಹ ಉತ್ತಮ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ" ಎಂದು ಅವರು ಹೇಳಿದರು ಮತ್ತು ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಗೆ ಬಿಗ್ ಶಾಕ್: 'ಮರುಎಣಿಕೆ' ಫಲಿತಾಂಶಕ್ಕೆ ಸುಪ್ರೀಂ ತಡೆ; ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ, ಜೀವರಾಜ್ ಕಥೆ ಏನು?

Indian Stock Market: ಮುಗಿಯದ ಮಧ್ಯ ಪ್ರಾಚ್ಯ ಯುದ್ಧ, Sensex 1300 ಅಂಕ ಕುಸಿತ, 6 ಲಕ್ಷ ಕೋಟಿ ರೂ ನಷ್ಟ

TCS ಕಾರ್ಪೋರೆಟ್ ಜಿಹಾದ್ ಪ್ರಕರಣ: ಆರೋಪಿ Nida Khanಗೆ ನ್ಯಾಯಾಂಗ ಬಂಧನ!

VIDEO: ಖಜಾನೆ ಖಾಲಿ ಹೇಳಿಕೆ ಬೆನ್ನಲ್ಲೇ ನಿಕಟಪೂರ್ವ ಸಿಎಂ ಸ್ಟಾಲಿನ್ ಭೇಟಿ ಮಾಡಿದ ನೂತನ CM ವಿಜಯ್

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

SCROLL FOR NEXT