ಸಚಿವ ಪ್ರಿಯಾಂಕ್ ಖರ್ಗೆ  
ರಾಜಕೀಯ

'ಬಿಜೆಪಿ ವಿತರಿಸುವ ಕೇಸರಿ ಶಾಲು ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಲೈಸೆನ್ಸ್: ಯುವ ಸಮುದಾಯದ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್'

ಹಗರಣ ಮಾಡಿದವರು ಬಿಜೆಪಿ ಸೇರಬೇಕು ಮತ್ತು ಬಿಜೆಪಿ ಸೇರಿದ ಮೇಲೆ ಹಗರಣ ಮಾಡಬೇಕು, ಈ ಎರಡಕ್ಕೂ ಕ್ಲೀನ್ ಚಿಟ್ ಮತ್ತು ಲೈಸೆನ್ಸ್ ಕೊಡುವ ಏಜೆನ್ಸಿ ರೀತಿಯಾಗಿದೆ ಬಿಜೆಪಿ.

ಬೆಂಗಳೂರು: 'ಬಿಜೆಪಿ ಕಚೇರಿಯಲ್ಲಿ ವಿತರಿಸುವ ಕೇಸರಿ ಶಾಲು ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಲೈಸೆನ್ಸ್ ಇದ್ದಹಾಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು. ಬಿಜೆಪಿಯ ಕೊಡುಗೆ ಇಲ್ಲದೆ ದೇಶದಲ್ಲಿ ಯಾವ ಹಗರಣಗಳೂ ಪೂರ್ಣಗೊಳ್ಳುವುದಿಲ್ಲ. ಡ್ರಗ್ಸ್ ಪೆಡ್ಲಿಂಗ್ ನಿಂದ ಹಿಡಿದು, PSI ಹಗರಣದಿಂದ ಹಿಡಿದು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೋರಿಕೆಯವರೆಗೆ, ಎಲ್ಲದರಲ್ಲೂ ದೇಶದ ಯುವ ಸಮುದಾಯದ ಕನಸುಗಳ ಮೇಲೆ, ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಲೇ ಇದೆ ಬಿಜೆಪಿ ಎಂದಿದ್ದಾರೆ.

ಹಗರಣ ಮಾಡಿದವರು ಬಿಜೆಪಿ ಸೇರಬೇಕು ಮತ್ತು ಬಿಜೆಪಿ ಸೇರಿದ ಮೇಲೆ ಹಗರಣ ಮಾಡಬೇಕು, ಈ ಎರಡಕ್ಕೂ ಕ್ಲೀನ್ ಚಿಟ್ ಮತ್ತು ಲೈಸೆನ್ಸ್ ಕೊಡುವ ಏಜೆನ್ಸಿ ರೀತಿಯಾಗಿದೆ ಬಿಜೆಪಿ. ಭವಿಷ್ಯದ ಕನಸುಗಳನ್ನು ಹೊತ್ತ ದೇಶದ ಸುಮಾರು 23 ಲಕ್ಷಕ್ಕೂ ಅಧಿಕ ಯುವ ಸಮುದಾಯದ ಬದುಕಿಗೆ ಕೊಳ್ಳಿ ಇಟ್ಟಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿರುವುದು ಬಿಜೆಪಿಯ ಮುಖಂಡರು ಎಂಬ ಸತ್ಯ ಹೊರಬಿದ್ದಿದೆ.

ದಿನೇಶ್ ಬಿವಾಲ್ ಮತ್ತು ಮಂಗಿಲಾಲ್ ಬಿವಾಲ್ ಸಹೋದರರು ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಗಳು, ಮತ್ತು ಇವರಿಗೆ ಬಿಜೆಪಿಯ ದೊಡ್ಡ ನಾಯಕರ ಸಂಪರ್ಕವೂ ಇದೆ. ಅಂದಹಾಗೆ ಮತ್ತೊಂದು ವಿಷಾದದ ಸಂಗತಿ ಎಂದರೆ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಮುಖ್ಯಸ್ಥನ ಹೆಸರು ವ್ಯಾಪಂ ಹಗರಣದಲ್ಲೂ ಕೇಳಿಬಂದಿತ್ತು ಎಂದಿದ್ದಾರೆ. ಬಿಜೆಪಿಗೆ ಅಧಿಕಾರ ಕೊಡುವುದೆಂದರೆ ಕಳ್ಳರ ಕೈಗೆ ಖಜಾನೆಯ ಕೀಲಿ ಕೊಟ್ಟಂತೆ" ಎನ್ನುವುದು ನಿರಂತರವಾಗಿ ಸಾಬೀತಾಗುತ್ತಲೇ ಇದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ CM ಆಯ್ಕೆ ಕಗ್ಗಂಟು: ವಿಡಿ ಸತೀಶನ್ ಅಥವಾ ಕೆಸಿ ವೇಣುಗೋಪಾಲ್? ಎಲ್ಲಾ ಸಸ್ಪೆನ್ಸ್ ಗಳಿಗೆ ಇಂದು ಅಂತಿಮ ತೆರೆ!

ಮೋದಿ ಮಿತವ್ಯಯ ಸೂತ್ರ ನಾವೂ ಪಾಲಿಸುತ್ತೇವೆ: ಬೆಂಗಾವಲು ವಾಹನ ಕಡಿತಕ್ಕೆ ಆರ್‌.ಅಶೋಕ್ ನಿರ್ಧಾರ!

ದ್ವಿರಾಷ್ಟ್ರ ಸಿದ್ದಾಂತದ ಸಾವರ್ಕರ್ ವೀರ: ದೇಶ ಇಬ್ಭಾಗ ಮಾಡಿದ ಜಿನ್ನಾ ಜಾತ್ಯಾತೀತ; ಸಂಘಪರಿವಾರದ ದೇಶದ್ರೋಹದ ವ್ಯಾಖ್ಯಾನ ಬದಲಾಗಿದೆಯೇ?

'ನಿಮ್ಮನ್ನು ಅಹಿಂದ ಚಾಂಪಿಯನ್ ಮಾಡಿದ್ದು ಯಾರು ಅನ್ನೋದನ್ನು ಮರೆತಿದ್ದೀರಾ? ನಮ್ಮ ಪಕ್ಷದಿಂದ ರಾಜಕೀಯವಾಗಿ ಬೆಳೆದು, ತಿಂದುಂಡು ದ್ರೋಹ'

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೂ ಮುನ್ನ ರಷ್ಯಾದ ಸೆರ್ಗೆಯ್ ಲಾವ್ರೊವ್ ಜೊತೆ ಜೈಶಂಕರ್ ಮಹತ್ವದ ಸಭೆ!

SCROLL FOR NEXT