ಯದುವೀರ್ ಒಡೆಯರ್  
ರಾಜಕೀಯ

ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿಕೆಗೆ ಪ್ರತಿಭಟನೆ ನಡೆಸಿದ್ದು: ಮುಸ್ಲಿಮರ ವಿರುದ್ಧ ಎಂಬಂತೆ ಬಿಂಬಿಸಬೇಡಿ; ಸಂಸದ ಯದುವೀರ್ ಸ್ಪಷ್ಟನೆ

ಚುನಾವಣೆ ಸಮಯದಲ್ಲಿ ಮಹಾರಾಜರು ಬೀದಿಗೆ ಬರುತ್ತಾರೆಯೇ? ಅರಮನೆಯಲ್ಲಿ ಕೂರುತ್ತಾರೆ ಎಂದು ಹೇಳುತ್ತಿದ್ದರು. ಆದರೆ, ಈಗ ಹೋರಾಟಕ್ಕೆ ಬಂದರೆ ಈ ರೀತಿ ಹೇಳುತ್ತಾರೆ. ಇದು ಅವರ ಇಬ್ಬಗೆ ನೀತಿ ಎಂದು ದೂರಿದರು.

ಮೈಸೂರು: ಜನರ ಧ್ವನಿಯಾಗಿ ಮತ್ತು ಧರ್ಮ ರಕ್ಷಣೆಗಾಗಿ ಹೋರಾಟ ನಡೆಸುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ. ಅಸಂವಿಧಾನಿಕ ನಡವಳಿಕೆ ವಿರುದ್ಧ ಪ್ರತಿಭಟಿಸುವಾಗ ಪೊಲೀಸರ ವಶಕ್ಕೆ ಒಳಗಾಗಲು ನಾನು ಎಂದಿಗೂ ಹಿಂಜರಿಯುವುದಿಲ್ಲ. ಧಾರ್ಮಿಕ ಶಿಷ್ಟಾಚಾರ ಪಾಲಿಸಿಯೇ ಗಣೇಶೋತ್ಸವದ ಹೋರಾಟದಲ್ಲಿ ಭಾಗವಹಿಸಲಾಗಿದೆ ಎಂದು ಸಂಸದ ಯದುವೀರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹಾರಾಜರನ್ನೂ ಬಿಜೆಪಿ ಬೀದಿಗೆ ತಂದಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಸಮಯದಲ್ಲಿ ಮಹಾರಾಜರು ಬೀದಿಗೆ ಬರುತ್ತಾರೆಯೇ? ಅರಮನೆಯಲ್ಲಿ ಕೂರುತ್ತಾರೆ ಎಂದು ಹೇಳುತ್ತಿದ್ದರು. ಆದರೆ, ಈಗ ಹೋರಾಟಕ್ಕೆ ಬಂದರೆ ಈ ರೀತಿ ಹೇಳುತ್ತಾರೆ. ಇದು ಅವರ ಇಬ್ಬಗೆ ನೀತಿ ಎಂದು ದೂರಿದರು.

ನಾನು ಜನರ ಪರ ಹೋರಾಟಕ್ಕೆ ಸದಾ ಬರುತ್ತೇನೆ. ಈ ಹಿಂದೆ ಮುಡಾ ಹಗರಣ ವಿಚಾರದಲ್ಲೂ ನಾನು ಹೋರಾಟ ಮಾಡಿದ್ದೇನೆ. ಪೊಲೀಸರು ವಶಕ್ಕೆ ಪಡೆದಿರುವುದು, ಇದರಲ್ಲಿ ಹೊಸದೇನು ಇಲ್ಲ. ಧರ್ಮದ ಹೋರಾಟಕ್ಕೆ ಸಾವಿರಾರು ಜನರು ಪ್ರಾಣ ಕೊಟ್ಟಿದ್ದಾರೆ. ನಾವು ಕೂಡ ಜನರ ಪರ ಹೋರಾಟ ಮಾಡುತ್ತೇವೆ ಎಂದರು.

ಮಸೀದಿಯ ಮುಂದೆ ಮೆರವಣಿಗೆಗೆ ಅವಕಾಶ ನೀಡದಿರುವ ಕುರಿತು ಟಿ. ನರಸೀಪುರದ ಇನ್ಸ್‌ಪೆಕ್ಟರ್ ನೀಡಿದ ಹೇಳಿಕೆಯನ್ನು ಖಂಡಿಸಲು ಬಿಜೆಪಿ ಪ್ರತಿಭಟನೆ ನಡೆಸಿತೇ ಹೊರತು, ಅದು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ಹೇಳಿದರು. ಈ ಪ್ರತಿಭಟನೆಯನ್ನು ಮುಸ್ಲಿಂ ಸಮುದಾಯದ ವಿರುದ್ಧ ನಡೆಸಿದ ಪ್ರತಿಭಟನೆ ಎಂದು ಬಿಂಬಿಸಬಾರದು ಎಂದು ಅವರು ಹೇಳಿದರು.

ಟಿ. ನರಸೀಪುರ ಪೊಲೀಸ್ ಠಾಣೆಯ ಬಳಿ ನಡೆದ ಪ್ರತಿಭಟನೆಯ ವೇಳೆ ಗಣೇಶ ಮೂರ್ತಿಗಳನ್ನು ಹೊತ್ತೊಯ್ಯುವಾಗ ಬಿಜೆಪಿ ನಾಯಕರು ಪಾದರಕ್ಷೆ ಧರಿಸಿದ್ದರ ಕುರಿತಾದ ಟೀಕೆಗೆ ಪ್ರತಿಕ್ರಿಯಿಸಿದ ಸಂಸದರು, "ಪೂಜೆಗಾಗಿ ಪ್ರತಿಷ್ಠಾಪಿಸಲಾದ ಮೂರ್ತಿಗಳಿಗೆ ಆ ರೀತಿ ಗೌರವ ನೀಡಲಾಗುತ್ತದೆ. ಆದರೆ, ಪ್ರತಿಭಟನಾಕಾರರು ಹೊತ್ತೊಯ್ದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರಲಿಲ್ಲ. ಹೀಗಾಗಿ, ಇದು ವಿವಾದದ ವಿಷಯವಲ್ಲ. ನಾವು ಬೀದಿಯಲ್ಲಿ ಪ್ರತಿಭಟಿಸುವಾಗ ಪಾದರಕ್ಷೆ ಧರಿಸಿದ್ದೆವು," ಎಂದು ಹೇಳಿದರು.

"ಶಾಂತಿ ಸಭೆಯಲ್ಲಿ ಪೊಲೀಸರ ಹೇಳಿಕೆಯನ್ನು ಸರ್ಕಾರ ಸಮರ್ಥಿಸಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಪೊಲೀಸ್ ಇನ್ಸ್‌ಪೆಕ್ಟರ್ ಅನುಚಿತ ಹೇಳಿಕೆಯನ್ನು ನೀಡಿದ್ದರು. ಅಂತಹ ಹೇಳಿಕೆಗಳನ್ನು ಸಮರ್ಥಿಸಿಕೊಂಡರೆ ಜನರ ಅಭಿಪ್ರಾಯ ಏನಾಗಬಹುದು?" ಎಂದು ಅವರು ಪ್ರಶ್ನಿಸಿದರು. ಪಕ್ಷದ ಪ್ರತಿಭಟನೆಯು ಪೊಲೀಸ್ ಇನ್ಸ್‌ಪೆಕ್ಟರ್ ಅವರ ಹೇಳಿಕೆಯ ವಿರುದ್ಧವಾಗಿತ್ತೇ ಹೊರತು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧವಾಗಿರಲಿಲ್ಲ ಎಂದು ಸಂಸದರು ಪ್ರತಿಪಾದಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’