ಕಲೆ 
ಪದ್ಯ ಪರಿಷೆ

ಕವನ ಸುಂದರಿ: ತೇಜಶ್ರೀ: ಚಿಟ್ಟೆಗಳನರಳಿಸಿತು ಹೂಬಳ್ಳಿ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ 


ಚಿಟ್ಟೆಗಳನರಳಿಸಿತು ಹೂಬಳ್ಳಿ

ಜೋತು ಬಿದ್ದ ಗೊಂಚಲು
ಹೂಗೊಂಚಲೊಳಗೆ ದುಂಬಿಗಳೆಲ್ಲ
ತುಂಬಿ ಹಾಡುತ್ತ

 

ಸಂಗೀತ ಕೇಳಿ
ಆರೋಹಣ ಅವರೋಹಣದ ಆಲಾಪ!
ಎಷ್ಟು ಕಾಲದ ರಿಯಾಜು ಇದು
ಇಷ್ಟೆಲ್ಲ ರಾಗಗಳ ಮೈದುಂಬಿಕೊಂಡು

 

ನಿಡಿನಿಡಿದು ಕೈಯಿ ಮೈಯಿ ಚಾಚುತ್ತ
ಮುನ್‌ಮುಂದಕ್ಕೆ ಬಳ್ಳಿ ಲೋಕ ಮುಟ್ಟುವ ಪರಿಯೇನು!
ಎಲೆ ಎಲೆ! ಪಚ್ಚೆ ಎಸಳು ಬಿರಿದು ಹಿಗ್ಗುವುದೇನು!
ಪುಷ್ಪವತಿಯೇ ಹುಲುಸೇನು!

 

ತುಂತುಂ ತುಂಬಿ ಹೂಗಳ ತುಂಬಿ
ಮುಖವೊಡ್ಡಿ ಪುಷ್ಪರಸವ ಈಡಾಡಿ
ಹೊಸಸೃಷ್ಟಿಯ ಹೊತ್ತು ಹಾರುವುದೇನು!

 

ಚಿಟ್ಟೆದುಂಬಿಭ್ರಮರಗಳ ಅರಳಿಸಿದ ಹೂಬಳ್ಳಿಯೇ
ನೋಡು
ನೀನೇ ಅರಳಿಸಿರುವ ಈ ಕವಿತೆಯನ್ನೂ.

 



ಎಂ.ಎ.(ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ಕವಯಿತ್ರಿ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ‌ರುವ ಶ್ರೇಯ ಅವರದು. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು ಕವನ ಸಂಕಲನಗಳು, ಕವಿ ರವೀಂದ್ರ, ಬೆಟ್ಟದ ಮೇಲಿನ ಬೆಳಕು ಕೃತಿಗಳನ್ನು ಅವರು ಹೊರತಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT