ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ಗಳನ್ನು ದ್ವೇಷ ಬಿತ್ತಲು ದುರ್ಬಳಕೆ ಮಾಡಲಾಗುತ್ತಿದೆ: ಸರ್ಕಾರ

ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಹಾಗು ಹಲವಾರು ಸನ್ನಿವೇಶಗಳಲ್ಲಿ

ನವದೆಹಲಿ: ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಹಾಗು ಹಲವಾರು ಸನ್ನಿವೇಶಗಳಲ್ಲಿ ದೇಶದಲ್ಲಿ ಪರಸ್ಪರ ದ್ವೇಷ ಬಿತ್ತಲು ಬಳಸಲಾಗುತ್ತಿದೆ ಎಂದು ಸರ್ಕಾರ ಇಂದು ಹೇಳಿದೆ.

"ಟ್ವಿಟರ್, ಫೇಸ್ ಬುಕ್, ಬ್ಲಾಗ್, ಇಮೇಲ್, ವಾಟ್ಸ್ ಆಪ್ ಗಳನ್ನು ದುರ್ಬಳಕೆ ಮಾಡಿ ದೇಶದಲ್ಲಿ ದ್ವೇಷದ ಪ್ರಚಾರಕ್ಕೆ ಬಳಸುತಿರುವುದು ಸರ್ಕಾರದ ಗಮನಕ್ಕೆ ಆಗಾಗ ಬಂದಿದೆ" ಎಂದು ಗೃಹ ಸಚಿವಾಲಯ ರಾಜ್ಯ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಹಲವಾರು ಅಂತರ್ಜಾಲ ತಾಣಗಳಲ್ಲಿ ಹಾಗೂ ಬೇರೆ ದೇಶಗಳು ನಡೆಸುವ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಿಸುವ, ಹಾನಿಕಾರಕ ಹಾಗು ದ್ವೇಷಪೂರಿತ ಬರಹಗಳು ಇರುವ ಹಲವು ಉದಾಹರಣೆಗಳು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಚೌಧರಿ ತಿಳಿಸಿದ್ದಾರೆ.

ಆದರೆ ಸರ್ಕಾರ ಸಾಮಾಜಿಕ ಜಾಲತಾಣಗಳ ಬರಹಗಳನ್ನು ನಿಯಂತ್ರಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ (ಮಧ್ಯಸ್ಥಗಾರ ಸಲಹಾಸೂತ್ರಗಳು) ೨೦೧೧ರ ನಿಯಮಗಳು ವಿಭಾಗ ೭೯ರ ಅಡಿ ತಮ್ಮ ಸೇವೆಯ ಬಳಕೆದಾರರಿಗೆ ಯಾವುದೇ ಹಾನಿಕಾರಕ, ಆಕ್ಷೇಪಣೀಯ ಮಾಹಿತಿಯನ್ನು ಅಪ್ರಾಪ್ತರಿಗೆ ಹಾನಿ ಮಾಡುವ ಅಥವಾ ಕಾನೂನುಬಾಹಿರ ಮಾಹಿತಿಗಳನ್ನು ಅಪ್ಲೋಟ್ ಮಾಡುವುದು, ಹೋಸ್ಟ್ ಮಾಡುವುದು, ಪ್ರಕಟಿಸಿವುದು, ತಿದ್ದುವುದು, ಹಂಚಿಕೊಳ್ಳುವುದನ್ನು ಮಾಡದಂತೆ ತಿಳಿಸುವುದು ಮಧ್ಯಸ್ಥಗಾರರ ಕೆಲಸ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT