ಸೌರವಿಮಾನ 
ವಿಜ್ಞಾನ-ತಂತ್ರಜ್ಞಾನ

ಭಾರತಕ್ಕೆ ಬಂದಿಳಿದ ಸೌರವಿಮಾನ

ಇಂಧನ ಬಳಸದೇ ಕೇವಲ ಸೌರ ಶಕ್ತಿಯಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಜರ್ಲೆಂಡ್‌ ನ "ಸೋಲಾರ್‌ ಇಂಪಲ್ಸ್‌' ವಿಮಾನವು...

ಅಹಮದಾಬಾದ್‌: ಇಂಧನ ಬಳಸದೇ ಕೇವಲ ಸೌರ ಶಕ್ತಿಯಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಜರ್ಲೆಂಡ್‌ ನ "ಸೋಲಾರ್‌ ಇಂಪಲ್ಸ್‌' ವಿಮಾನವು ಮಂಗಳವಾರ ರಾತ್ರಿ ಗುಜರಾತಿನ ಅಹಮದಾಬಾದ್‌ಗೆ ಬಂದಿಳಿಯಿತು.

ಸೋಲಾರ್ ಶಕ್ತಿಯಿಂದ ಬಾನಂಗಳಕ್ಕೆ ನೆಗೆಯಬಲ್ಲ ಈ ‘ಸೊಲಾರ್ ವಿಮಾನ’ ಅರಬ್ ನ ಅಬುದಾಬಿಯಿಂದ ಹೊರಟು,400 ಕಿ.ಮೀ. ಕ್ರಮಿಸಿ ಮಂಗಳವಾರ ಮುಂಜಾನೆ ಓಮನ್‌ ರಾಜಧಾನಿ ಮಸ್ಕಟ್‌ಗೆ ಬಂದಿಳಿದಿತ್ತು. ನಂತರ ಭಾರತದತ್ತ ಪ್ರಯಾಣ ಬೆಳೆಸಿದ್ದ, ರಾತ್ರಿ 9 ಗಂಟೆಯ ಸುಮಾರಿನಲ್ಲಿ ಸರ್ದಾರ್‌ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ವಿಮಾನ 1465 ಕಿ.ಮೀ. ದೂರವನ್ನು 14 ತಾಸಿನಲ್ಲಿ ಪೂರೈಸಿ ನಿರೀಕ್ಷೆಗಿಂತ 2 ತಾಸು ಮುನ್ನ ಭಾರತಕ್ಕೆ ಆಗಮಿಸಿದೆ. ಸೌರಶಕ್ತಿ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಮಾನವು, ವಿಶ್ವಪರ್ಯಟನೆಗೆ ಹೊರಟಿದೆ.
ಸ್ವಿಟ್ಜರ್ಲೆಂಡ್‌ನ `ಸೋಲಾರ್ ಇಂಪಲ್ಸ್'  ಕಂಪೆನಿ  ಈ ವಿಮಾನ ರೂಪಿಸಿದ್ದು, ಸ್ವಚ್ಛ ತಂತ್ರಜ್ಞಾನಗಳಲ್ಲಿರುವ (ಕ್ಲೀನ್ ಟೆಕ್ನಾಲಜಿ) ಅವಕಾಶಗಳನ್ನು ಜಗತ್ತಿನ ಮುಂದೆ ಪ್ರಾತ್ಯಕ್ಷಿಕೆ ಮೂಲಕ ತೋರಿಸುವುದು ಈ ವಿಮಾನ ನಿರ್ಮಾಣದ ಪ್ರಮುಖ ಉದ್ದೇಶವಾಗಿದೆ.

ಜಗತ್ತನ್ನು ಸೌರ ವಿಮಾನದಲ್ಲಿ ಸುತ್ತುವುದು ಕಂಪೆನಿಯ ಮಹಾತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ 2ನೇ ಪೀಳಿಗೆಯ ಸೌರವಿಮಾನ ತಯಾರಾಗುತ್ತಿದೆ.
ಸೋಲಾರ್ ಶಕ್ತಿ ಬಳಕೆಯ ಈ ವಿಮಾನ ಒಂದು ಹನಿಯೂ ಇಂಧನ ಬಳಸದೆ ಸೌರ ಶಕ್ತಿಯಿಂದಲೇ ಹಗಲು ಮತ್ತು ರಾತ್ರಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. 72 ಮೀಟರ್ ಉದ್ದದ ರೆಕ್ಕೆ ಹೊಂದಿರುವ ಇದು ‘ಬೊಯಿಂಗ್-747’ ಅನ್ನು ಹೋಲುತ್ತದೆ. ವಿಮಾನದ ತೂಕ 2,300 ಕೆ.ಜಿ. ಇದ್ದು, ಒಂದು ಕಾರಿನ ತೂಕಕ್ಕೆ ಸಮನಾಗಿದೆ. ವಿಮಾದ ರೆಕ್ಕೆಗೆ ಅಳವಡಿಸಲಾಗಿರುವ 17,248 ಸೋಲಾರ್ ಕೋಶಗಳು ವಿಮಾನ ಚಾಲನೆಗೆ ಅಗತ್ಯ ಶಕ್ತಿಯನ್ನು ಪೂರೈಸುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT