ಸೌರವಿಮಾನ 
ವಿಜ್ಞಾನ-ತಂತ್ರಜ್ಞಾನ

ಭಾರತಕ್ಕೆ ಬಂದಿಳಿದ ಸೌರವಿಮಾನ

ಇಂಧನ ಬಳಸದೇ ಕೇವಲ ಸೌರ ಶಕ್ತಿಯಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಜರ್ಲೆಂಡ್‌ ನ "ಸೋಲಾರ್‌ ಇಂಪಲ್ಸ್‌' ವಿಮಾನವು...

ಅಹಮದಾಬಾದ್‌: ಇಂಧನ ಬಳಸದೇ ಕೇವಲ ಸೌರ ಶಕ್ತಿಯಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಜರ್ಲೆಂಡ್‌ ನ "ಸೋಲಾರ್‌ ಇಂಪಲ್ಸ್‌' ವಿಮಾನವು ಮಂಗಳವಾರ ರಾತ್ರಿ ಗುಜರಾತಿನ ಅಹಮದಾಬಾದ್‌ಗೆ ಬಂದಿಳಿಯಿತು.

ಸೋಲಾರ್ ಶಕ್ತಿಯಿಂದ ಬಾನಂಗಳಕ್ಕೆ ನೆಗೆಯಬಲ್ಲ ಈ ‘ಸೊಲಾರ್ ವಿಮಾನ’ ಅರಬ್ ನ ಅಬುದಾಬಿಯಿಂದ ಹೊರಟು,400 ಕಿ.ಮೀ. ಕ್ರಮಿಸಿ ಮಂಗಳವಾರ ಮುಂಜಾನೆ ಓಮನ್‌ ರಾಜಧಾನಿ ಮಸ್ಕಟ್‌ಗೆ ಬಂದಿಳಿದಿತ್ತು. ನಂತರ ಭಾರತದತ್ತ ಪ್ರಯಾಣ ಬೆಳೆಸಿದ್ದ, ರಾತ್ರಿ 9 ಗಂಟೆಯ ಸುಮಾರಿನಲ್ಲಿ ಸರ್ದಾರ್‌ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ವಿಮಾನ 1465 ಕಿ.ಮೀ. ದೂರವನ್ನು 14 ತಾಸಿನಲ್ಲಿ ಪೂರೈಸಿ ನಿರೀಕ್ಷೆಗಿಂತ 2 ತಾಸು ಮುನ್ನ ಭಾರತಕ್ಕೆ ಆಗಮಿಸಿದೆ. ಸೌರಶಕ್ತಿ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಮಾನವು, ವಿಶ್ವಪರ್ಯಟನೆಗೆ ಹೊರಟಿದೆ.
ಸ್ವಿಟ್ಜರ್ಲೆಂಡ್‌ನ `ಸೋಲಾರ್ ಇಂಪಲ್ಸ್'  ಕಂಪೆನಿ  ಈ ವಿಮಾನ ರೂಪಿಸಿದ್ದು, ಸ್ವಚ್ಛ ತಂತ್ರಜ್ಞಾನಗಳಲ್ಲಿರುವ (ಕ್ಲೀನ್ ಟೆಕ್ನಾಲಜಿ) ಅವಕಾಶಗಳನ್ನು ಜಗತ್ತಿನ ಮುಂದೆ ಪ್ರಾತ್ಯಕ್ಷಿಕೆ ಮೂಲಕ ತೋರಿಸುವುದು ಈ ವಿಮಾನ ನಿರ್ಮಾಣದ ಪ್ರಮುಖ ಉದ್ದೇಶವಾಗಿದೆ.

ಜಗತ್ತನ್ನು ಸೌರ ವಿಮಾನದಲ್ಲಿ ಸುತ್ತುವುದು ಕಂಪೆನಿಯ ಮಹಾತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ 2ನೇ ಪೀಳಿಗೆಯ ಸೌರವಿಮಾನ ತಯಾರಾಗುತ್ತಿದೆ.
ಸೋಲಾರ್ ಶಕ್ತಿ ಬಳಕೆಯ ಈ ವಿಮಾನ ಒಂದು ಹನಿಯೂ ಇಂಧನ ಬಳಸದೆ ಸೌರ ಶಕ್ತಿಯಿಂದಲೇ ಹಗಲು ಮತ್ತು ರಾತ್ರಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. 72 ಮೀಟರ್ ಉದ್ದದ ರೆಕ್ಕೆ ಹೊಂದಿರುವ ಇದು ‘ಬೊಯಿಂಗ್-747’ ಅನ್ನು ಹೋಲುತ್ತದೆ. ವಿಮಾನದ ತೂಕ 2,300 ಕೆ.ಜಿ. ಇದ್ದು, ಒಂದು ಕಾರಿನ ತೂಕಕ್ಕೆ ಸಮನಾಗಿದೆ. ವಿಮಾದ ರೆಕ್ಕೆಗೆ ಅಳವಡಿಸಲಾಗಿರುವ 17,248 ಸೋಲಾರ್ ಕೋಶಗಳು ವಿಮಾನ ಚಾಲನೆಗೆ ಅಗತ್ಯ ಶಕ್ತಿಯನ್ನು ಪೂರೈಸುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?