ಇಸ್ರೊ ಅಧ್ಯಕ್ಷ ಕಿರಣ್ ಕುಮಾರ್ 
ವಿಜ್ಞಾನ-ತಂತ್ರಜ್ಞಾನ

ಮುಂದಿನ ವರ್ಷ ಜಿಸ್ಯಾಟ್ 15 ಉಡಾವಣೆ: ಕಿರಣ್ ಕುಮಾರ್

ವಿಮಾನ ಹಾರಾಟ ಹಾಗೂ ಜೀವರಕ್ಷಕ ಉದ್ದೇಶಗಳ ಮಾಹಿತಿ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವ ಐಆರ್‍ಎನ್ ಎಸ್‍ಎಸ್...

ಬೆಂಗಳೂರು: ವಿಮಾನ ಹಾರಾಟ ಹಾಗೂ ಜೀವರಕ್ಷಕ ಉದ್ದೇಶಗಳ ಮಾಹಿತಿ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವ ಐಆರ್‍ಎನ್ ಎಸ್‍ಎಸ್ (ಇಂಡಿಯನ್ ರೀಸನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ-ಭಾರತೀಯ ಪ್ರಾದೇಶಿಕ ದಿಶಾದರ್ಶನ ಉಪಗ್ರಹ ವ್ಯವಸ್ಥೆ) ಭಾರತೀಯ ವೈಮಾನಿಕ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿಸಲಿದೆ ಎಂದು ಇಸ್ರೊ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ. 
ಇಸ್ರೊ ಸಂಸ್ಥೆಯಲ್ಲಿ ಗುರುವಾರ ನಡೆದ ಜಿಎನ್‍ಎಸ್‍ಎಸ್ (ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ - ಜಾಗತಿಕ ದಿಶಾದರ್ಶನ ಉಪಗ್ರಹ ವ್ಯವಸ್ಥೆ) ಬಳಕೆದಾರರ ಸಮಾವೇಶ- 2015ನ್ನು ಉದ್ದೇಶಿಸಿ ಮಾತನಾಡಿದ ಅವರು, ದಿಶಾದರ್ಶನಕ್ಕೆ ಇಂಬು ಕೊಡುವ ಒಟ್ಟು ಏಳು ಉಪಗ್ರಹಗಳ ಈ ಜಾಲಕ್ಕೆ ಇನ್ನೆರಡು ಉಪಗ್ರಹಗಳು ಸೇರ್ಪಡೆಯಾಗುವುದು ಬಾಕಿ ಇದ್ದು ಜಿಸ್ಯಾಟ್-15 ಮಾರ್ಚ್ 2016ಕ್ಕೆ ಉಡಾವಣೆಯಾದಾಗ ಗಗನ್ (ನಾಗರಿಕ ವಿಮಾನಯಾನ ಮತ್ತು ಜೀವರಕ್ಷಕ ಸೌಲಭ್ಯಗಳ ವ್ಯವಸ್ಥೆ) ಸಂಪೂರ್ಣವಾಗಲಿದೆ. ಇದರಿಂದ ನಮ್ಮ ಮಾನಗಳ ಹಾರಾಟ, ಜೀವರಕ್ಷಕ ಸೌಲಭ್ಯಗಳು ಇನ್ನಷ್ಟು ಕರಾರುವಾಕ್ಕಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲ್ಪಡಲಿವೆ ಎಂದರು. 
ನಭದಲ್ಲಿ ಉಪಗ್ರಹ ಜಾಲ:  ಆರ್‍ಎನ್ ಎಸ್‍ಎಸ್ (ಇಂಡಿಯನ್ ರೀಸನಲ್ ನ್ಯಾವಿ- ಗೇಶನ್ ಸ್ಯಾಟಲೈಟ್ ಸಿಸ್ಟಂ-ಭಾರತೀಯ ಪ್ರಾದೇಶಿಕ ದಿಶಾದರ್ಶನ ಉಪಗ್ರಹ ವ್ಯವಸ್ಥೆ) ಒಟ್ಟು ಏಳು ಉಪಗ್ರಹಗಳನ್ನು ಒಳಗೊಳ್ಳಲಿದ್ದು, ಅಂತಾರಾಷ್ಟ್ರೀಯ ಮಾನದಂಡ ಮತ್ತು ಗುಣಮಟ್ಟದ ಸೇವೆಯನ್ನು ಒದಗಿಸಲಿದೆ. ಐಆರ್‍ಎನ್‍ಎಸ್‍ಎಸ್ ವ್ಯವಸ್ಥೆಯಿಂದ ಜಗತ್ತಿನ ಮುಂದುವರಿದ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದ್ದು, ತನ್ನ ಉಪಗ್ರಹಗಳ ನಿಖರ ಮಾಹಿತಿ ವ್ಯವಸ್ಥೆಯಿಂದಾಗಿ ಎಪಿವಿ 1.0 ಪ್ರಮಾಣಪತ್ರವನ್ನೂ ಪಡೆದಿದೆ ಎಂದರು. 
ಈ ವ್ಯವಸ್ಥೆ ಮೂಲಕ, ಜಿಪಿಎಸ್ ಸಿಗ್ನಲ್ ಆಧರಿಸಿ ಇಡೀ ದೇಶಾದ್ಯಂತ ಯಾವ ವಾಹನ ಎಲ್ಲಿದೆ ಎಂಬ ನಿಖರ ಮಾಹಿತಿ ಪಡೆಯಲು ಸಾಧ್ಯ. ಇದು ಕೇವಲ ವೈಮಾನಿಕ ಕ್ಷೇತ್ರವಷ್ಟೇ ಅಲ್ಲ, ಟ್ಯಾಕ್ಸಿ, ಬಸ್, ವ್ಯಕ್ತಿ ಸೇರಿದಂತೆ ಜಿಪಿಎಸ್ ಹೊಂದಿರುವ ಪ್ರತಿಯೊಂದು ವಾಹನ, ವ್ಯಕ್ತಿಯ ಭೌಗೋಳಿಕ ಸ್ಥಾನದ ವಿವರವನ್ನು 20 ಮೀಟರ್ ವ್ಯಾಪ್ತಿಯ ನಿಖರತೆಯೊಂದಿಗೆ ನೀಡಲಿದೆ. ಶೈಕ್ಷಣಿಕ, ಕೈಗಾರಿಕೆ ಸೇರಿದಂತೆ ಒಟ್ಟು 28 ಕ್ಷೇತ್ರ ಗಳಲ್ಲಿ ಈ ಮಾಹಿತಿ ಉಪಯುಕ್ತವಾಗಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT