ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಛಿಮ್ಮಿದ ಆಸ್ಟ್ರೋಸ್ಯಾಟ್ ಉಪಗ್ರಹ 
ವಿಜ್ಞಾನ-ತಂತ್ರಜ್ಞಾನ

ಇಸ್ರೋದಿಂದ ಆಸ್ಟ್ರೋಸ್ಯಾಟ್ ಉಪಗ್ರಹ ಉಡಾವಣೆ

ಖಗೋಳಶಾಸ್ತ್ರದ ಅಧ್ಯಯನಕ್ಕೆ ಮೀಸಲಾಗಿ ಇರಿಸಲಾಗಿರುವ ದೇಶದ ಮೊದಲ ಉಪಗ್ರಹ ಆಸ್ಟ್ರೋಸ್ಯಾಟ್ ನ್ನು ಸೋಮವಾರ...

ಶ್ರೀಹರಿಕೋಟಾ: ಖಗೋಳಶಾಸ್ತ್ರದ ಅಧ್ಯಯನಕ್ಕೆ ಮೀಸಲಾಗಿ ಇರಿಸಲಾಗಿರುವ ದೇಶದ ಮೊದಲ ಉಪಗ್ರಹ ಆಸ್ಟ್ರೋಸ್ಯಾಟ್ ನ್ನು ಸೋಮವಾರ ಉಡಾವಣೆ ಮಾಡಾಲಾಗಿದೆ.

ಬಾಹ್ಯಾಕಾಶ ಸಂಶೋಧನೆಗೆ ಪೂರಕವಾಗಿರುವ ಈ ಉಪಗ್ರಹ ಸೋಮವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಛಿಮ್ಮಿದೆ. ಇದರಿಂದಾಗಿ ಆಕಾಶಕಾಯಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಲು ಭಾರತಕ್ಕೆವಿಶೇಷ ಅವಕಾಶ ಸಿಕ್ಕಿದಂತಾಗಿದೆ.

ಪಿಎಸ್ ಎಲ್ ವಿ -30 ರಾಕೆಟ್ ನಲ್ಲಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಆಸ್ಟ್ರೋಸ್ಯಾಟ್ ಮಹತ್ವದ ಉಪಗ್ರಹವನ್ನು ಉಡಾವಣೆ ಮಾಡಿದೆ.

1513 ಕೆಜಿ ತೂಕದ ಆಸ್ಟ್ರೋಸ್ಯಾಟ್ ನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಲ್ಲಿಯೇ ರೂಪಿಸಲಾಗಿದ್ದು, ಈ ಹಿಂದಿನ ಆಸ್ಟ್ರೋಸ್ಯಾಟ್ ಉಪಗ್ರಹಗಿಂತ ಈ ಉಪಗ್ರಹದಲ್ಲಿ ಹೆಚ್ಚಿನ ಸುಧಾರಣೆ ಮಾಡಲಾಗಿದೆ.

ಐದು ವರ್ಷಗಳ ಕಾಲ ಈ ಉಪಗ್ರಹ ಕಾರ್ಯನಿರ್ವಹಿಸಲಿದ್ದು, ಭೂಮಿಯಿಂದ 50 ಕಿ.ಮೀ ದೂರದಲ್ಲಿ ನೆಲಗೊಳ್ಳಲಿದೆ. ಸೌರ್ಯವ್ಯೂಹದಲ್ಲಿನ ಕಪ್ಪು ಚುಕ್ಕೆಗಳು, ನಕ್ಷತ್ರ ಪುಂಜ ಮತ್ತು ಅಲ್ಲಿನ ಶಕ್ತಿ ಕೇಂದ್ರ ಅಧ್ಯಯನಕ್ಕೆ ರೂಪಿಸಲಾಗಿರುವ ಆಸ್ಟ್ರೋಸ್ಯಾಟ್ ಉಪಗ್ರಹ ಭಾರತದ ಬಾಹ್ಯಕಾಶ ಅಧ್ಯಯನಕ್ಕೆ ಮಹತ್ವದ ಉಪಗ್ರಹವಾಗಲಿದೆ. ಇನ್ನು ಪಿಎಸ್ ಎಲ್ ವಿ-30 ಸ್ಯಾಟಲೈಟ್ ನಲ್ಲಿ ಭಾರತದ ಆಸ್ಟ್ರೋಸ್ಯಾಟ್ ಉಪಗ್ರಹ ಜೊತೆಗೆ ಇನ್ನು 6 ವಿದೇಶ ಉಪಗ್ರಹಗಳು ಉಡಾವಣೆಯಾಗಿದೆ.

ಇಂದು ಬೆಳಿಗ್ಗೆ ಉಡಾವಣೆಯಾಗಿದ್ದು, ಇದರಿಂದಾಗಿ ಇದುವರೆಗೆ ಬಾಹ್ಯಾಕಾಶ ಸಂಸ್ಥೆಆಗಸಕ್ಕೆ ಕಳುಹಿಸಿದ ವಿದೇಶಿ ಉಪಗ್ರಹಗಳ ಸಂಖ್ಯೆ50 ಆಗಿದೆ. ಕೆನಡಾ ಮತ್ತು ಇಂಡೋನೇಷ್ಯಾದಸಣ್ಣ ಉಪಗ್ರಹಗಳೂ ಕಕ್ಷೆಗೆ ಸೇರಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT