ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಛಿಮ್ಮಿದ ಆಸ್ಟ್ರೋಸ್ಯಾಟ್ ಉಪಗ್ರಹ 
ವಿಜ್ಞಾನ-ತಂತ್ರಜ್ಞಾನ

ಇಸ್ರೋದಿಂದ ಆಸ್ಟ್ರೋಸ್ಯಾಟ್ ಉಪಗ್ರಹ ಉಡಾವಣೆ

ಖಗೋಳಶಾಸ್ತ್ರದ ಅಧ್ಯಯನಕ್ಕೆ ಮೀಸಲಾಗಿ ಇರಿಸಲಾಗಿರುವ ದೇಶದ ಮೊದಲ ಉಪಗ್ರಹ ಆಸ್ಟ್ರೋಸ್ಯಾಟ್ ನ್ನು ಸೋಮವಾರ...

ಶ್ರೀಹರಿಕೋಟಾ: ಖಗೋಳಶಾಸ್ತ್ರದ ಅಧ್ಯಯನಕ್ಕೆ ಮೀಸಲಾಗಿ ಇರಿಸಲಾಗಿರುವ ದೇಶದ ಮೊದಲ ಉಪಗ್ರಹ ಆಸ್ಟ್ರೋಸ್ಯಾಟ್ ನ್ನು ಸೋಮವಾರ ಉಡಾವಣೆ ಮಾಡಾಲಾಗಿದೆ.

ಬಾಹ್ಯಾಕಾಶ ಸಂಶೋಧನೆಗೆ ಪೂರಕವಾಗಿರುವ ಈ ಉಪಗ್ರಹ ಸೋಮವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಛಿಮ್ಮಿದೆ. ಇದರಿಂದಾಗಿ ಆಕಾಶಕಾಯಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಲು ಭಾರತಕ್ಕೆವಿಶೇಷ ಅವಕಾಶ ಸಿಕ್ಕಿದಂತಾಗಿದೆ.

ಪಿಎಸ್ ಎಲ್ ವಿ -30 ರಾಕೆಟ್ ನಲ್ಲಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಆಸ್ಟ್ರೋಸ್ಯಾಟ್ ಮಹತ್ವದ ಉಪಗ್ರಹವನ್ನು ಉಡಾವಣೆ ಮಾಡಿದೆ.

1513 ಕೆಜಿ ತೂಕದ ಆಸ್ಟ್ರೋಸ್ಯಾಟ್ ನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಲ್ಲಿಯೇ ರೂಪಿಸಲಾಗಿದ್ದು, ಈ ಹಿಂದಿನ ಆಸ್ಟ್ರೋಸ್ಯಾಟ್ ಉಪಗ್ರಹಗಿಂತ ಈ ಉಪಗ್ರಹದಲ್ಲಿ ಹೆಚ್ಚಿನ ಸುಧಾರಣೆ ಮಾಡಲಾಗಿದೆ.

ಐದು ವರ್ಷಗಳ ಕಾಲ ಈ ಉಪಗ್ರಹ ಕಾರ್ಯನಿರ್ವಹಿಸಲಿದ್ದು, ಭೂಮಿಯಿಂದ 50 ಕಿ.ಮೀ ದೂರದಲ್ಲಿ ನೆಲಗೊಳ್ಳಲಿದೆ. ಸೌರ್ಯವ್ಯೂಹದಲ್ಲಿನ ಕಪ್ಪು ಚುಕ್ಕೆಗಳು, ನಕ್ಷತ್ರ ಪುಂಜ ಮತ್ತು ಅಲ್ಲಿನ ಶಕ್ತಿ ಕೇಂದ್ರ ಅಧ್ಯಯನಕ್ಕೆ ರೂಪಿಸಲಾಗಿರುವ ಆಸ್ಟ್ರೋಸ್ಯಾಟ್ ಉಪಗ್ರಹ ಭಾರತದ ಬಾಹ್ಯಕಾಶ ಅಧ್ಯಯನಕ್ಕೆ ಮಹತ್ವದ ಉಪಗ್ರಹವಾಗಲಿದೆ. ಇನ್ನು ಪಿಎಸ್ ಎಲ್ ವಿ-30 ಸ್ಯಾಟಲೈಟ್ ನಲ್ಲಿ ಭಾರತದ ಆಸ್ಟ್ರೋಸ್ಯಾಟ್ ಉಪಗ್ರಹ ಜೊತೆಗೆ ಇನ್ನು 6 ವಿದೇಶ ಉಪಗ್ರಹಗಳು ಉಡಾವಣೆಯಾಗಿದೆ.

ಇಂದು ಬೆಳಿಗ್ಗೆ ಉಡಾವಣೆಯಾಗಿದ್ದು, ಇದರಿಂದಾಗಿ ಇದುವರೆಗೆ ಬಾಹ್ಯಾಕಾಶ ಸಂಸ್ಥೆಆಗಸಕ್ಕೆ ಕಳುಹಿಸಿದ ವಿದೇಶಿ ಉಪಗ್ರಹಗಳ ಸಂಖ್ಯೆ50 ಆಗಿದೆ. ಕೆನಡಾ ಮತ್ತು ಇಂಡೋನೇಷ್ಯಾದಸಣ್ಣ ಉಪಗ್ರಹಗಳೂ ಕಕ್ಷೆಗೆ ಸೇರಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!