ಉಡಾವಣೆಗೆ ಸಿದ್ದವಾಗಿದ್ದ ಚಂದ್ರಯಾನ-2 ಚಿತ್ರ
ಬೆಂಗಳೂರು: ಭಾರತದ ಎರಡನೇ ಚಂದ್ರ ಪರಿಶೋಧನಾ ಕಾರ್ಯಾಚರಣೆಯಾದ ಬಹು ನಿರೀಕ್ಷಿತ ಚಂದ್ರಯಾನ-2 ವಿಫಲವಾಗದೆ ಮತ್ತು ಯಾವುದೇ ಅಪಾಯಗಳಿಲ್ಲದೆ ಯಶಸ್ವಿಯಾಗಬೇಕೆಂದರೆ ಜುಲೈ 20ರೊಳಗೆ ಉಡಾವಣೆಯಾಗಬೇಕು, ನಂತರ ಮುಂದೂಡಿದರೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಅಂತರಿಕ್ಷ ವಿಜ್ಞಾನಿ.
ಮೊನ್ನೆ ಸೋಮವಾರ ನಸುಕಿನ ಜಾವ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.
ಚಂದ್ರಯಾನ-1 ಉಡಾವಣೆಯಲ್ಲಿ ಕೆಲಸ ಮಾಡಿದ್ದ ಹಿರಿಯ ಅಂತರಿಕ್ಷ ವಿಜ್ಞಾನಿ ಹೇಳುವ ಪ್ರಕಾರ, ಚಂದ್ರ ವರ್ಗಾವಣೆ ಪಥವನ್ನು (ಎಲ್ಟಿಟಿ) (ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಯ ಕಡೆಗೆ ಬಾಹ್ಯಾಕಾಶ ನೌಕೆಯ ಚಲನೆ) ಆಗಸ್ಟ್ 1 ರಂದು ಪೂರ್ಣಗೊಳಿಸಬೇಕಾಗಿದೆ, ಇದನ್ನು ಟಿ + 17 ಎಂದು ಕರೆಯಲಾಗುತ್ತದೆ, ಅಥವಾ ಆರಂಭದಲ್ಲಿ ಲೆಕ್ಕಹಾಕಿದ ಜುಲೈ 15ರ ನಸುಕಿನ ಜಾವ 2 ಗಂಟೆ 51 ನಿಮಿಷದಿಂದ 17 ದಿನಗಳು ಎಂದು ಲೆಕ್ಕಾಚಾರ ಹಾಕಲಾಗುತ್ತದೆ.
ಚಂದ್ರನ ಕಕ್ಷೆಗೆ ಉಪಗ್ರಹದ ನಿಖರವಾದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜುಲೈ 15 ನಸುಕಿನ ಜಾವ 2 ಗಂಟೆ 51 ನಿಮಿಷವನ್ನು ಉಡಾವಣೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್ 6 ರಂದು ಎರಡು ಚಂದ್ರನ ಕುಳಿಗಳಾದ ಮ್ಯಾಂಜಿನಸ್ ಸಿ ಮತ್ತು ಸಿಂಪೆಲಿಯಸ್ ಎನ್ ನಡುವಿನ ಎತ್ತರದ ಬಯಲಿನಲ್ಲಿ ಯೋಜಿತ ಸ್ಥಳದಲ್ಲಿ ನಿಖರವಾಗಿ ಇಳಿಯಲು ಲ್ಯಾಂಡರ್ ವಿಕ್ರಮ್ ಗೆ ಇದು ಸಹಾಯ ಮಾಡುತ್ತದೆ.
ಚಂದ್ರನ ಸುತ್ತ ಧ್ರುವೀಯ ಕಕ್ಷೆಗೆ ಪ್ರವೇಶಿಸಲು ಟಿ +17ನ್ನು ಎಲ್ ಟಿಟಿಇ ಸಿದ್ದಪಡಿಸಿದ್ದು ಇದು ಕಕ್ಷೆಯ ಲೆಕ್ಕಾಚಾರದ ಇಂಧನ ದಕ್ಷತೆಯನ್ನು ಖಚಿತಪಡಿಸುವುದಲ್ಲದೆ, ಮಿಷನ್ ಯಶಸ್ವಿಯಾಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
ಜುಲೈ 20ರ ನಂತರ ಉಡಾವಣೆಯನ್ನು ಮುಂದೂಡಿದರೆ ಲ್ಯಾಂಡರ್ನ ಪ್ರತ್ಯೇಕತೆಯನ್ನು ವಿಳಂಬಗೊಳಿಸುತ್ತದೆ, ಜೊತೆಗೆ ಹೆಚ್ಚಿನ ಇಂಧನ ಅಗತ್ಯವಿರುತ್ತದೆ.ಇದರಿಂದ ಚಂದ್ರಯಾನ-2 ಉಪಗ್ರಹದ ಜೀವಿತಾವಧಿ ಕಕ್ಷೆಯಲ್ಲಿ ಕಡಿಮೆಯಾಗಬಹುದು. ಲ್ಯಾಂಡರ್ ಮತ್ತು ರೊಬೊಟಿಕ್ ರೋವರ್ ಕೇವಲ 14 ದಿನಗಳ ಕಾರ್ಯಾಚರಣೆ ಅವಧಿಯನ್ನು ಹೊಂದಿರುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos