ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಇಲಿಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ: ರೋಗ ನಿರೋಧಕ ಶಕ್ತಿ ಉತ್ಪತ್ತಿ- ವರದಿ

ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ -19 ನಿಯಂತ್ರಣಕ್ಕಾಗಿ ಸಂಶೋಧಕರು ಸಂಶೋಧಿಸಿರುವ ಸಂಭಾವ್ಯ ಲಸಿಕೆಯನ್ನು ಇಲಿಗಳ ಮೇಲೆ  ಪ್ರಯೋಗಿಸಲಾಗಿದೆ. ಕೊರೋನಾವೈರಸ್ ನಿಯಂತ್ರಣಕ್ಕಾಗಿ ಸಾಕಾಗುವಷ್ಟು ರೋಗ ನಿರೋಧಕ ಶಕ್ತಿಯನ್ನು ಈ ಲಸಿಕೆಯಿಂದ  ಉತ್ಪತ್ತಿ ಮಾಡಬಹುದು ಎಂಬುದು ಗೊತ್ತಾಗಿದೆ.

ನವದೆಹಲಿ: ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ -19 ನಿಯಂತ್ರಣಕ್ಕಾಗಿ ಸಂಶೋಧಕರು ಸಂಶೋಧಿಸಿರುವ ಸಂಭಾವ್ಯ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. ಕೊರೋನಾವೈರಸ್ ನಿಯಂತ್ರಣಕ್ಕಾಗಿ ಸಾಕಾಗುವಷ್ಟು ರೋಗ ನಿರೋಧಕ ಶಕ್ತಿಯನ್ನು ಈ ಲಸಿಕೆಯಿಂದ  ಉತ್ಪತ್ತಿ ಮಾಡಬಹುದು ಎಂಬುದು ಗೊತ್ತಾಗಿದೆ

ಇಲಿಗಳ ಮೇಲೆ ಈ  ಲಸಿಕೆಯನ್ನು ಪ್ರಯೋಗಿಸಿದ ಎರಡು ವಾರಗಳಲ್ಲಿ ಕೊರೋನಾವೈರಸ್, ಸಾರ್ಸ್ - Cov 2 ವಿರುದ್ಧ ಪ್ರತಿಕಾಯ( ಅಂಟಿಬಾಡಿ) ಉಂಟುಮಾಡಿದೆ ಎಂದು ಇ-ಬಯೋ ಮೆಡಿಸನ್ ಜರ್ನಲ್ ನಲ್ಲಿ ವರದಿಯೊಂದು ಪ್ರಕಟಗೊಂಡಿದೆ.

2003ರಲ್ಲಿ ಸಾರ್ಸ್- Cov ಮತ್ತು 2014ರಲ್ಲಿ ಮರ್ಸ್-ಕೋವಿ ವಿರುದ್ಧ ಇದೇ ರೀತಿಯ ಪ್ರಯೋಗ ಮಾಡಲಾಗಿತ್ತು. ಈ ಎರಡೂ ವೈರಾಣುಗಳು ಸಾರ್ಸ್- Cov-2 ಗೆ  ಹತ್ತಿರದ ಸಂಬಂಧ ಹೊಂದಿದ್ದು, ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಉಂಟುಮಾಡಲು ಸ್ಪೈಕ್ ಪ್ರೋಟೀನ್ ಎಂದು ಕರೆಯಲ್ಪಡುವ ನಿರ್ದಿಷ್ಟ ಪ್ರೋಟೀನ್ ಮುಖ್ಯವಾಗಿದೆ ಎಂಬುದನ್ನು ನಮಗೆ ತಿಳಿಸಿವೆ ಎಂಬುದಾಗಿ ಅಮೆರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ಸಹ-ಹಿರಿಯ ಲೇಖಕಿ ಆಂಡ್ರಿಯಾ ಗ್ಯಾಂಬೊಟ್ಟೊ ತಿಳಿಸಿದ್ದಾರೆ. 

ಈ ಹೊಸ ವೈರಸ್ ವಿರುದ್ಧ ಏಲ್ಲಿ  ಹೋರಾಡಬೇಕೆಂದು ನಮಗೆ ತಿಳಿದಿತ್ತು ಎಂದು ಗ್ಯಾಂಬೊಟ್ಟೊ ಹೇಳಿದ್ದಾರೆ.  ಈ ಲಸಿಕೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲ್ಯಾಬ್ ನಿರ್ಮಿತ ವೈರಲ್ ಪ್ರೊಟಿನ್ ಬಳಸಲಾಗಿದ್ದು, ಪ್ರಸ್ತುತ ಅಧ್ಯಯನದಲ್ಲಿ ಹೆಚ್ಚಿನ ಒಲವು ವ್ಯಕ್ತವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

 ಇದೇ ರೀತಿಯಲ್ಲಿ ಕೊರೋನಾ ರೋಗ ನಿಯಂತ್ರಣದ ಕಾರ್ಯಗಳು ಸಾಗುತ್ತಿದ್ದು, ಔಷಧಿಯನ್ನು ತಲುಪಿಸಲು  ಮೈಕ್ರೊನೆಡಲ್ ಅರೇ ಎಂದು ಕರೆಯಲ್ಪಡುವ ಒಂದು ಹೊಸ ವಿಧಾನವನ್ನು ಸಂಶೋಧಕರು ಬಳಸಿದ್ದಾರೆ.  ಈ ಅರೇ  ಬೆರಳ ತುದಿಯ ಗಾತ್ರದ ಸಣ್ಣ ಸೂಜಿಗಳನ್ನು ಹೊಂದಿದ್ದು, ಇದರ ಮೂಲಕ ಚರ್ಮದೊಳಗೆ ಪೊಟ್ರೀನ್ ತುಣುಕುಗಳನ್ನು ಕಳುಹಿಸಲಾಗುತ್ತದೆ. ಅಲ್ಲಿ ರೋಗನಿರೋಧಕ ಕ್ರಿಯೆಯು ಪ್ರಬಲವಾಗಿರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಸಿಡುಬು ಲಸಿಕೆಯನ್ನು ಚರ್ಮಕ್ಕೆ ತಲುಪಿಸಲು ಬಳಸುವ ಮೂಲ ಸ್ಕ್ರ್ಯಾಚ್ ವಿಧಾನವನ್ನು ನಿರ್ಮಿಸಲು ನಾವು ಇದನ್ನು ಅಭಿವೃದ್ಧಿಪಡಿಸಿದ್ದೇವೆ ಆದರೆ, ಹೈಟೆಕ್ ಆವೃತ್ತಿಯಿಂದಾಗಿ ಹೆಚ್ಚು ಪರಿಣಾಮಕಾರಿ ಮತ್ತು ರೋಗಿಯಿಂದ ರೋಗಿಗೆ ಪುನರ್ ಉತ್ಪಾದಿಸುವಂತಾಗಿದೆ ಎಂದು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ಸಹ ಹಿರಿಯ ಲೇಖಕ ಲೂಯಿಸ್ ಪೌಲ್ ತಿಳಿಸಿದ್ದಾರೆ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT