ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ 
ವಿಜ್ಞಾನ-ತಂತ್ರಜ್ಞಾನ

ವರ್ಷಾಂತ್ಯಕ್ಕೆ 'ಗಗನಯಾನ', ಕೇಂದ್ರ ಸಂಪುಟದಿಂದ Chandrayaan 4 ಅನುಮೋದನೆ: ISRO ಅಧ್ಯಕ್ಷ ಎಸ್ ಸೋಮನಾಥ್!

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, 'ಗಗನಯನಾ ಉಡಾವಣೆಗೆ ಸಿದ್ಧವಾಗಿದೆ, ಈ ವರ್ಷದ ಅಂತ್ಯದ ವೇಳೆಗೆ ನಾವು ಅದನ್ನು ಉಡಾವಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕನಸಿನ ಯೋಜನೆ ಗಗನಯಾನ ಬಹುತೇಕ ಸಿದ್ಧವಾಗಿದ್ದು, ವರ್ಷಾಂತ್ಯದಲ್ಲಿ ಉಡಾವಣೆ ನಡೆಸುವ ಸಾಧ್ಯತೆ ಇದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, 'ಗಗನಯನಾ ಉಡಾವಣೆಗೆ ಸಿದ್ಧವಾಗಿದೆ, ಈ ವರ್ಷದ ಅಂತ್ಯದ ವೇಳೆಗೆ ನಾವು ಅದನ್ನು ಉಡಾವಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಅಂತೆಯೇ ಇದೇ ವೇಳೆ ಚಂದ್ರಯಾನ 4 ಬಗ್ಗೆ ಮಾತನಾಡಿದ ಸೋಮನಾಥ್ ಅವರು, ಚಂದ್ರಯಾನ 4ಗೆ ಕೇಂದ್ರ ಸಚಿವ ಸಂಪುಟವು ಚಂದ್ರಯಾನ 4 ಯೋಜನೆಗೆ ಅನುಮೋದನೆಯನ್ನು ಘೋಷಿಸಿದೆ. ಆದ್ದರಿಂದ ಮುಂದಿನ ಕೆಲವು ತಿಂಗಳುಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿವೆ. ಇದೀಗ ನಾವು ಎಂಜಿನಿಯರಿಂಗ್ ಕಾರ್ಯ ಪೂರ್ಣಗೊಳಿಸಿ ಸಚಿವ ಸಂಪುಟ ಅನುಮೋದನೆ ಪಡೆದಿದ್ದೇವೆ. ಇದು ಅನೇಕ ಅಂಗೀಕಾರಗಳ ಮೂಲಕ ಹೋಗಬೇಕಾಗಿದೆ.

ಚಂದ್ರಯಾನ 3ರಲ್ಲಿ ನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿದಿದ್ದೆವು. ಈಗ ಚಂದ್ರನಿಂದ ಹಿಂತಿರುಗುವುದು ಮತ್ತೊಂದು ಕಾರ್ಯಾಚರಣೆಗೆ ಸಮಾನವಾಗಿದೆ. ಅಲ್ಲದೆ ನೌಕೆಯಲ್ಲಿನ ಮಾಡ್ಯೂಲ್‌ಗಳ ಸಂಖ್ಯೆ 5 ಆಗುತ್ತದೆ. ಇದಕ್ಕಾಗಿ ನಾವು ಉಡಾವಣಾ ಸಾಮರ್ಥ್ಯವನ್ನು ಹೊಂದಿಲ್ಲ, ಆದ್ದರಿಂದ ನಾವು ಎರಡು ಉಡಾವಣೆಗಳನ್ನು ಮಾಡಬೇಕಾಗಿದೆ. ಆದ್ದರಿಂದ ಆ ಯೋಜನೆ ಹೆಚ್ಚು ಸಂಕೀರ್ಣವಾಗಿದೆ ಎಂದು ಹೇಳಿದರು.

ಈ ಹಿಂದೆ ಗಗನಯಾನ ಯೋಜನೆ ಬಳಿಕ 2035ರ ಹೊತ್ತಿಗೆ ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲಿದ್ದು, 2040ರ ಹೊತ್ತಿಗೆ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆ ಇದೆ. ಅಂತೆಯೇ ಶುಕ್ರ ಮತ್ತು ಮಂಗಳ ಗ್ರಹಕ್ಕೂ ನೌಕೆ ಕಳುಹಿಸುವ ಯೋಜನೆ ಇದೆ ಎಂದು ಸೋಮನಾಥ್ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT