ಇತ್ತೀಚೆಗೆ ಸೋಲಿಗ ಸಮುದಾಯದಲ್ಲಿ ಆದ ಮದುವೆ 
ವಿಶೇಷ

ಮದುವೆಗೆ ಮುಂಚೆ ಹುಡುಗನಿಗೆ ಪರೀಕ್ಷೆ!

ನಮ್ಮ ರಾಜ್ಯದ ಬುಡಕಟ್ಟು ಜನಾಂಗದವರು ಕೆಲವು ಆಕರ್ಷಕ ಸಂಪ್ರದಾಯ ಮತ್ತು ಪದ್ಧತಿಗಳನ್ನು ಆಚರಿಸುತ್ತಾರೆ. ಕಾಡಿನಲ್ಲಿ ವಾಸಿಸುವ ಸೋಲಿಗರಲ್ಲಿ...

ಮೈಸೂರು: ನಮ್ಮ ರಾಜ್ಯದ ಬುಡಕಟ್ಟು ಜನಾಂಗದವರು ಕೆಲವು ಆಕರ್ಷಕ ಸಂಪ್ರದಾಯ ಮತ್ತು ಪದ್ಧತಿಗಳನ್ನು ಆಚರಿಸುತ್ತಾರೆ. ಕಾಡಿನಲ್ಲಿ ವಾಸಿಸುವ ಸೋಲಿಗರಲ್ಲಿ ಮದುವೆ ವಿಷಯದಲ್ಲಿ ಒಂದು ಸಂಪ್ರದಾಯವಿದೆ. ಅದೇನೆಂದರೆ ಹುಡುಗ ಯಾವ ಹುಡುಗಿಯನ್ನು ಮದುವೆಯಾಗುತ್ತಾನೆಯೋ ಆ ಹುಡುಗಿಯ ಮನೆಯಲ್ಲಿ ಮದುವೆಗೆ ಮುಂಚೆ ಕನಿಷ್ಠ 5 ವರ್ಷ ಹಾಗೂ ಗರಿಷ್ಠ 12 ವರ್ಷಗಳ ಕಾಲವಿದ್ದು ಅವರ ಮನೆಗೆಲಸ ಹಾಗೂ ಇತರ ಕಾಯಕಗಳಲ್ಲಿ ನೆರವು ನೀಡುತ್ತಿರಬೇಕು.

ಹುಡುಗ ಚೆನ್ನಾಗಿ ಕೆಲಸ ಮಾಡುತ್ತಾನೆ, ಆತ ನಮ್ಮ ಮಗಳನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಹುಡುಗಿಯ ಪೋಷಕರಿಗೆ ನಂಬಿಕೆ ಬಂದ ಮೇಲಷ್ಟೇ ಮದುವೆಯಾಗಲು ಒಪ್ಪಿಗೆ ನೀಡುತ್ತಾರೆ.

ಹುಡುಗಿಯ ಪೋಷಕರು ಮದುವೆಯಾಗುವ ಹುಡುಗನ ಮನೋಧರ್ಮ, ಗುಣ-ನಡತೆ, ಸಾಮರ್ಥ್ಯ, ಇತರರನ್ನು ಹೇಗೆ ಪ್ರೀತಿ, ವಾತ್ಸಲ್ಯ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಾನೆ ಎಂಬುದನ್ನೆಲ್ಲ ಗಮನಿಸುತ್ತಾರೆ. ಹುಡುಗ ಈ ಎಲ್ಲಾ ವಿಷಯಗಳಲ್ಲಿ ಅವರಿಗೆ ಒಪ್ಪಿಗೆಯಾದರೆ ಮಾತ್ರ ತಮ್ಮ ಹುಡುಗಿಯನ್ನು ಮದುವೆ ಮಾಡಿಕೊಡಲು ಒಪ್ಪುತ್ತಾರೆ. ಉದಾಹರಣೆಗೆ ಒಬ್ಬ ಯುವಕ ಯುವತಿಯೊಬ್ಬಳನ್ನು ಮದುವೆಯಾಗಲು ಇಚ್ಛಿಸುತ್ತಾನೆ ಎಂದಿಟ್ಟುಕೊಳ್ಳಿ. ಆಗ ಅವನು ಅವರ ಮನೆಯಲ್ಲಿ ಕೆಲಸ ಮಾಡಬೇಕು ಮತ್ತು ಅವರ ಅಗತ್ಯಗಳನ್ನು ಕೂಡ ಪೂರೈಸಬೇಕು. ಒಂದು ವೇಳೆ 5 ವರ್ಷಗಳಲ್ಲಿ ಹುಡುಗನ ಕೆಲಸ, ಗುಣ ನಡತೆ ಹುಡುಗಿಯ ಪೋಷಕರಿಗೆ ಸಮಾಧಾನ ತಂದಿಲ್ಲದಿದ್ದರೆ ಮದುವೆ ಮುಂದೂಡಲಾಗುತ್ತದೆ. ಹುಡುಗಿಯ ಮನೆಯ ಹಿರಿಯ ಸದಸ್ಯರ ಮನಸ್ಸನ್ನು ಗೆಲ್ಲಲು ಮತ್ತೆ 7 ವರ್ಷಗಳವರೆಗೆ ಕಾಯಬೇಕು.

ಸೋಲಿಗ ಸಮುದಾಯದವರ ಕುರಿತು ಸಂಶೋಧನೆ ನಡೆಸಿದ ಮತ್ತು ಆ ಸಮುದಾಯದ ಕಾರ್ಯಕ್ರಮ ಸಹಾಯಕರಾಗಿ ದುಡಿದಿರುವ ಸಿ. ಮಾದೇಗೌಡ ಅವರು ಹೇಳುವ ಪ್ರಕಾರ, ತಮ್ಮ ಮಗಳನ್ನು ಈ ಹುಡುಗ ಮದುವೆಯಾದ ನಂತರ ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಮನವರಿಕೆಯಾದ ಮೇಲಷ್ಟೇ ಮದುವೆಗೆ ಒಪ್ಪಿಗೆ ಕೊಡುತ್ತಾರೆ.

ಇನ್ನು ಕೆಲವೊಮ್ಮೆ ಇಬ್ಬರ ಮನೆಯ ಹಿರಿಯರ ಒಪ್ಪಿಗೆ ಮೇರೆಗೆ ಹುಡುಗ-ಹುಡುಗಿಯಿಬ್ಬರೂ ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಾರೆ. ಈ ಸಂಪ್ರದಾಯ ಸೋಲಿಗರಲ್ಲಿ ಈಗಲೂ ಇದೆ.ಸೋಲಿಗರ ಮದುವೆ ಸಂಪ್ರದಾಯ ತುಂಬಾ ಸರಳ. ಮದುವೆ ಸಂದರ್ಭದಲ್ಲಿ ಎಲೆ-ಅಡಿಕೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. 

ಕರ್ನಾಟಕ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸೋಲಿಗರಿದ್ದಾರೆ. ಮೈಸೂರು, ಚಾಮರಾಜನಗರ, ವಿರಾಜಪೇಟೆ, ಸೋಮವಾರಪೇಟೆ, ಮಂಡ್ಯದ ಮುತ್ತತ್ತಿ, ಕನಕಪುರ, ತುಮಕೂರಿನ ಕುಣಿಗಲ್ ಮತ್ತು ರಾಮನಗರದಲ್ಲಿ ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT