ತಮ್ಮ ಎತ್ತು ಪರವಸಪರವೈಯೊಂದಿಗೆ ಕನ್ನಗಿ 
ವಿಶೇಷ

ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಜಲ್ಲಿಕಟ್ಟು ಪಂದ್ಯದ ಎತ್ತು

ದಷ್ಟಪುಷ್ಟವಾದ ದೇಹ, ಚೂಪಾದ ಉದ್ದವಾದ ಕೊಂಬನ್ನು ಹೊಂದಿರುವ ಎತ್ತನ್ನು ನೋಡಿದರೆ ಸಾಕು ಅದರ ಹತ್ತಿರ ಹೋಗಲು...

ನಮಕ್ಕಲ್(ತಮಿಳುನಾಡು): ದಷ್ಟಪುಷ್ಟವಾದ ದೇಹ, ಚೂಪಾದ ಉದ್ದವಾದ ಕೊಂಬನ್ನು ಹೊಂದಿರುವ ಎತ್ತನ್ನು ನೋಡಿದರೆ ಸಾಕು ಅದರ ಹತ್ತಿರ ಹೋಗಲು ಜನ ಭಯಪಡುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಇಂತಹ ಎತ್ತನ್ನು ತನ್ನ ಮಕ್ಕಳಂತೆಯೇ ಸಾಕಿ ಸಲಹುತ್ತಿದ್ದಾರೆ. ಅಲ್ಲದೆ ತಮಿಳುನಾಡು ರಾಜ್ಯದ ಪೊಂಗಲ್ ಸಮಯದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಈ ಎತ್ತು ಭಾಗವಹಿಸುತ್ತದೆ.

ತಮಿಳುನಾಡು ರಾಜ್ಯದ ಕೊಲ್ಲಿ ಬೆಟ್ಟದ ತಪ್ಪಲಾದ ಅಲಂಗನಾಥಮ್ ಕೆಜಕೊಂಬೈ ಎಂಬಲ್ಲಿ 35 ವರ್ಷದ ಮಹಿಳೆ ಕನ್ನಗಿ ಎಂಬುವವರು ಜಮೀನನ್ನು ಹೊಂದಿದ್ದಾರೆ. ಇವರ ಹತ್ತಿರ ಒಂದು ಎತ್ತು ಇದೆ. ಪರವಸಪರವೈ ಅಂತ ಅದರ ಹೆಸರು. ಅದನ್ನು ಕನ್ನಗಿ ಮನೆಯವರು 'ಅಮ್ಮ ಮಾಡು' ಎಂದು ಪ್ರೀತಿಯಿಂದ ಕರೆಯುತ್ತಾರೆ. ನೋಡಲು ತುಂಬಾ ಕ್ರೂರಿಯಂತೆ ಕಂಡರೂ ಸಾಧು ಸ್ವಭಾವದ ಪ್ರಾಣಿ ಎನ್ನುತ್ತಾರೆ ಕನ್ನಗಿ. ಅವರ ಭಾಷೆ, ಹಾವಭಾವವನ್ನು ಚೆನ್ನಾಗಿ ಅನುಕರಣೆ ಮಾಡುತ್ತದಂತೆ. ನನ್ನನ್ನು ಬಿಟ್ಟರೆ ನಮ್ಮ ಮನೆಯಲ್ಲಿ ಬೇರೆ ಯಾರಿಗೂ ಆ ಎತ್ತನ್ನು ಮುಟ್ಟುವ ಧೈರ್ಯ ಇಲ್ಲ, ನನ್ನ ಪತಿ ಕೂಡ ಅದರ ಹತ್ತಿರ ಹೋಗುವುದಿಲ್ಲ ಎನ್ನುತ್ತಾರೆ ನಾಲ್ಕು ಮಕ್ಕಳ ತಾಯಿಯಾಗಿರುವ ಕನ್ನಗಿ.

ಕನ್ನಗಿ ಒಂಥರಾ ರಿಂಗ್ ಮಾಸ್ಟರ್ ಥರ. ಅದನ್ನು ಸುಲಭವಾಗಿ ಹೇಳಿದಂತೆ ಕೇಳಿಸುತ್ತಾರೆ. ಅಷ್ಟೇ ಪ್ರೀತಿಯಿಂದ ಎತ್ತನ್ನು ಆರೈಕೆ ಮಾಡುತ್ತಾರೆ. ಇಂತಿಪ್ಪ ಪರವಸಪರವೈ ಹಲವಾರು ವರ್ಷಗಳಿಂದ ಪೊಂಗಲ್ ಸಮಯದಲ್ಲಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಅಲಂಗನಾಥಮ್, ಪಲ್ಲವರಾಯನಪಟ್ಟಿ ಮತ್ತು ಚಕ್ಕಿಡಿ ಮೊದಲಾದ ಕಡೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ಈ ಬಾರಿ ನಾಡಿದ್ದು ಪೊಂಗಲ್ ಗೆ ಅಲಂಗನಾಥಮ್ ನಲ್ಲಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಲು ಕನಗಿ ಮತ್ತು ಅವರ ಪತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇವರು ಎತ್ತನ್ನು ಸಾಕಿ ಸ್ಪರ್ಧೆಗೆ ತಯಾರು ಮಾಡುತ್ತಿರುವುದನ್ನು ನೋಡಿ ಸುತ್ತಮುತ್ತಲ ನಿವಾಸಿಗಳು ಕೂಡ ಎತ್ತನ್ನು ಸಾಕಲು ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!