ಯುವತಿಗೆ ಯುವಕನ ಕೈಗಳ ಕಸಿ 
ವಿಶೇಷ

ವೈದ್ಯ ಲೋಕದ ಅಚ್ಚರಿ! ಯುವತಿಗೆ ಯುವಕನ ಕೈಗಳ ಕಸಿ

ಅಪಘಾತದಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದ ಯುವತಿಗೆ ಯುವಕನೋರ್ವನ ಕೈಗಳನ್ನು ವೈದ್ಯರು ಯಶಸ್ವಿಯಾಗಿ ಜೋಡಿಸಿದ್ದಾರೆ.

ಕೊಚ್ಚಿ: ಅಪಘಾತದಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದ ಯುವತಿಗೆ ಯುವಕನೋರ್ವನ ಕೈಗಳನ್ನು ವೈದ್ಯರು ಯಶಸ್ವಿಯಾಗಿ ಜೋಡಿಸಿದ್ದಾರೆ. 
ಉಡುಪಿಯ ಮಣಿಪಾಲ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತಿದ್ದ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರೇಯಾ ಸಿದ್ದನಗೌಡ ಕಳೆದ ವರ್ಷ ನಡೆದ ರಸ್ತೆ ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಳು. ಆದರೆ ಈಗ ಕೇರಳದ ಕೊಚ್ಚಿ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ವೈದ್ಯರು ಯುವತಿಗೆ ಯುವಕನ ತೋಳುಗಳನ್ನು ಕಸಿ ಮಾಡಿ ಜೋಡಿಸಿದ್ದಾರೆ.
ಪುಣೆಯ ಟಾಟಾ ಮೋಟರ್ಸ್ ಕಂಪೆನಿಯ ಹಿರಿಯ ವ್ಯವಸ್ಥಾಪಕ ಫಕೀರಗೌಡ ಮತ್ತು ಸುಮಾ ನುಗ್ಗಿಹಳ್ಳಿ ದಂಪತಿಯ ಪುತ್ರಿ ಶ್ರೇಯಾ ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಹಿಂದಿನ ವರ್ಷದಲ್ಲಿ ಒಮ್ಮೆ ಪುಣೆಯಿಂದ ಮಣಿಪಾಲಕ್ಕೆ ಬಸ್‍ನಲ್ಲಿ ಬರುತ್ತಿದ್ದಾಗ ಬಸ್ ಅಪಘಾತಕ್ಕೀಡಾಗಿತ್ತು. ಶ್ರೇಯಾ ಬಸ್ ನ  ಕೆಳಗಡೆ ಸಿಲುಕಿದ್ದಳು. ಅಪಘಾತದ ಕಾರಣ ಆಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದರು.
ಕೈಗಳ ದಾನ 
ಕೇರಳದ ಎರ್ನಾಕುಲಂನ ರಾಜಗಿರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸಚಿನ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಚಿನ್ ಅವರ ಮೆದುಳು ನಿಷ್ಕ್ರಿಯವಾಯಿತು. 
ಆ ಸಂದರ್ಭದಲ್ಲಿ ಕೈಗಳ ಮರು ಜೋದನೆ ಅಥವಾ ಕೈಗಳ ಕಸಿ ಶಸ್ತ್ರಚಿಕಿತ್ಸೆ ಕುರಿತು ವೈದ್ಯರು ಸಚಿನ್ ಪೋಷಕರಲ್ಲಿ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿನ್ ಪೋಷಕರು ಕೈಗಳನ್ನು ದಾನ ನೀದಲು ಅನುಮತಿಸಿದರು.ಇದೀಗ ಸಚಿನ್ ಅವರ ಕೈಗಳನ್ನು ಶ್ರೇಯಾಗೆ ಯಶಸ್ವಿಯಾಗಿ ಜೋಡಿಸಲಾಗಿದೆ. 
ಶ್ರೇಯಾ ದೇಹವು ಕಸಿ ಮಾಡಿದ ಕೈಗಳಿಗೆ ಒಗ್ಗಿದೆ. ಶ್ರೇಯಾಳಲ್ಲಿ  ಉತ್ತಮ ಚೇತರಿಕೆ ಲಕ್ಷಣಗಳು ಕಂಡುಬರುತ್ತಿವೆ. ಪ್ರಸ್ತುತ ಶ್ರೇಯಾಳ ಬೆರಳುಗಳು, ಮಣಿಕಟ್ಟುಗಳು ಹಾಗೂ ಭುಜಗಳ ಚಲನೆ ಸಾಧ್ಯವಾಗುತ್ತಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಶ್ರೇಯಾಳ ಕೈಗಳು ಶೇ.85 ರಷ್ಟು ಸುಧಾರಣೆ ಆಗಲಿದೆ ಎಂದು ವೈದ್ಯರು ಹೇಳಿದ್ದಾರೆ.
ಇದುವರೆಗೆ ಇಂತಹ 9 ಕಸಿಗಳು ವಿಶ್ವದಾದ್ಯಂತ ನಡೆದಿವೆ. ಆದರೆ ಏಷ್ಯಾದಲ್ಲಿ ಇಂತಹಾ ಒಂದು ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲಬಾರಿಯಾಗಿದೆ. ಹುಡುಗನ ತೋಳುಗಳನ್ನು ಯುವತಿಯೊಬ್ಬಳಿಗೆ ಜೋಡಿಸಿರುವುದು ಇದೇ ಪ್ರಥಮ ಎನ್ನಲಾಗಿದೆ.
ಡಾ. ಸುಬ್ರಹ್ಮಣ್ಯ ಅಯ್ಯರ್ ನೇತೃತ್ವದ 20 ವೈದ್ಯರ ತಂಡ ದೊಡನೆ 16 ಅರವಳಿಕೆ ತಜ್ಞರು ಸೇರಿ ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲು ಸುಮಾರು 13 ಗಂಟೆಗಳ ಕಾಲ ಹಿಡಿದಿದೆ.
"ಅವಳು (ಶ್ರೇಯಾ)  ಇಲ್ಲಿನ ವೈದ್ಯರ ಜೊತೆ ಚೆನ್ನಾಗಿ ಹೊಂದಿಕೊಂಡಿದ್ದಾಳೆ. ವೈದ್ಯರಿಗೂ ಅವಳ ವೈದ್ಯಕೀಯ ಮೆಡಿಕಲ್ ಹಿಸ್ಟರಿ ಗೊತ್ತು. ಹೀಗಾಗಿ ಅವರೂ ಅವರಿಗೆ ಹೆಚ್ಚು ಸಹಕಾರ ನೀಡುತ್ತಾ ಬಂದಿದ್ದಾರೆ. ಇನ್ನು ಮುಂದೆ ನಿರ್ಣಾಯಕ ದಿನಗಳು ಅವಳಿಗೆ ಎದುರಾಗಲಿವೆ, ಆದರೆ ನಾವು ಅವಳೊಂದಿಗೆ ಸಹಜ ರೀತಿಯಲ್ಲಿಯೇ ವರ್ತಿಸುತ್ತೇವೆ" ಶ್ರೇಯಾಳ ತಾಯಿ ಸುಮಾ ತಿಳಿಸಿದ್ದಾರೆ. 
ಒಟ್ಟಾರೆ  ವೈದ್ಯಲೋಕದಲ್ಲಿ ಅಚ್ಚರಿ ಎನ್ನವಹುದಾದ ಶಸ್ತ್ರಚಿಕಿತ್ಸೆಯೊಂದು ಯಶಸ್ವಿಯಾಗಿ ಪೂರೈಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT