ಪೂರ್ಣಚಂದ್ರ ತೇಜಸ್ವಿ 
ವಿಶೇಷ

ಪೂರ್ಣಚಂದ್ರ ತೇಜಸ್ವಿ 80ನೇ ಜನ್ಮದಿನ: ಪರಿಸರದ ಕಥೆ ಹೇಳಿದ ಮಹಾಸಾಹಿತಿಯ ನೆನೆಯುತ್ತಾ...

"ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ" ಇದು ಕನ್ನಡದ ಪ್ರಖ್ಯಾತ ಸಾಹಿತಿ ಕೆ.ಪಿ. ಪೂರ್ಣ್ಚಂದ್ರ ತೇಜಸ್ವಿಯವರ ಮಾತು.

"ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ" ಇದು ಕನ್ನಡದ ಪ್ರಖ್ಯಾತ ಸಾಹಿತಿ ಕೆ.ಪಿ. ಪೂಪೂರ್ಣಚಂದ್ರ ತೇಜಸ್ವಿಯವರ ಮಾತು. ಕಳೆದ ಕೆಲ ದಿನಗಳ ಹಿಂದಷ್ಟೇ ಕೊಡಗು, ಕೇರಳದಲ್ಲಿ ಸಂಭವಿಸಿದ ಪ್ರವಾಹದ ವೇಳೆ ಈ ಮಾತುಗಳ ಅರ್ಥ ನಮಗಾಗಿದೆ.
ತಮ್ಮ ಸಾಹಿತ್ಯದ ಮೂಲಕ ಪರಿಸರ ಹಾಗೂ ಮಾನವ ಸಂಬಂಧಗಳ ನಡುವಿನ ಎಳೆಗಳನ್ನು ತೋರಿಸಿಕೊಟ್ಟಿದ್ದ ತೇಜಸ್ವಿ ಇಂದು ನಮ್ಮೊಂದಿಗಿದ್ದಿದ್ದರೆ ಎಂಭತ್ತು ಭರ್ತಿಯಾಗುತ್ತಿತು. ಈ ಸಮಯದಲ್ಲಿ ಅವರ ವ್ಯಕ್ತಿತ್ವದ ಒಂದು ಚಿಕ್ಕ  ಪರಿಚಯ ಮಾಡಿಕೊಡುವ ಜತೆಗೆ ಇಂದು ಅವರ ಜನ್ಮದಿನದ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮದ ಕಿರು ಮಾಹಿತಿ ನೀಡುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.
ಇಂದಿನ ಮಾನವನ ದುರಾಸೆ, ರಾಜಕೀಯ ಲಾಭಕೋರತನದ ಕುರಿತು ಅವರು ಅಂದು ಆಡಿದ್ದ ಮಾತುಗಳು ಇಂದೂ ಪ್ರಸ್ತುತವಾಗಿದೆ. ಸಾಹಿತ್ಯ, ಕೃಷಿ, ಪರಿಸರ ಕಾಳಜಿ, ವಿಜ್ಞಾನ, ಮಾನವ ಶಾಸ್ತ್ರ ಮುಂತಾದುವುಗಳ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ತೇಜಸ್ವಿ ಬದುಕಿದ್ದು ಸಹ ದಟ್ಟ ಹಸಿರಿನ ಕಾಡುಗಳ ನಡುವೆಯೇ. 
ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ 08-09-1932೮ರಂದು ಜನಿಸಿದ ಪೂರ್ಣಚಂದ್ರ ತೇಜಸ್ವಿ ಅವರ ತಂದೆ ಖ್ಯಾತ ಸಾಹಿತಿ, ರಾಷ್ಟ್ರಕವಿ ಕುವೆಂಪು, ತಾಯಿ ಹೇಮಾವತಿ.ಮೈಸೂರಿನಲ್ಲಿ  ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿ ವ್ಯಾಸಂಗ ಮಾಡಿದ್ದ ಇವರು ತಂದೆ ವಿಖ್ಯಾತ ಪ್ರಾದ್ಯಾಪಕ, ಸಾಹಿತಿಗಳಾಗಿದ್ದರೂ ತಾವು ಸರ್ಕಾರಿ ಹುದ್ದೆಯನ್ನಾಗಲಿ, ಶಿಕ್ಷಕ ವೃತ್ತಿಯನ್ನಾಗಲಿ ಬಯಸದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಾಫಿ ಎಸ್ಟೇಟ್ ಮಾಲೀಕರಾಗಿ ಸ್ವತಂತ್ರ ಜೀವನ ಸಾಗಿಸಿದ್ದರು. ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿ ಇದ್ದ ಇವರಿಗೆ ಮಲೆನಾಡಿನ ಜೀವನ ಅತ್ಯಂತ ಸುಖವಾಗಿ ಒಗ್ಗಿತ್ತು. ಇವರು ಹಲವು  ರೈತ ಚಳವಳಿಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇವರ ಪತ್ನಿ ರಾಜೇಶ್ವರಿ (ಇವರೀಗ ಮೂಡಿಗೆರೆಯ ತೇಜಸ್ವಿ ಅವರ ನಿವಾಸ "ನಿರುತ್ತರ" ದಲ್ಲಿದ್ದಾರೆ.) ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣಿತರಾಗಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ಆಗಿ ಹೋದ ನವೋದಯ, ನವ್ಯ, ನವ್ಯೋತ್ತರ ಯಾವ ಪಂಥಕ್ಕೆ ಸೇರದೆ ಅದೆಲ್ಲಾ ಕಾಲಘಟ್ಟದಲ್ಲಿ ತಮ್ಮ ಬದುಕಲ್ಲಿ ಅನುಭವಕ್ಕೆ ಬಂದ ಘಟನೆಗಳನ್ನೇ ಆಧರಿಸಿ ಕೃತಿಗಳನ್ನು ರಚಿಸುತ್ತಾ ಸಾಗನ್ನಡ ದ ಪೂರ್ಣಚಂದ್ರ ತೇಜಸ್ವಿ ನಿಸರ್ಗ ಹಾಗೂ ಬದುಕಿನ ಎಲ್ಲ ಮಗ್ಗುಲುಗಳನ್ನು ಅನ್ವೇಷಿಸುತ್ತಾ ಸಾಗಿದರು. ಸಮಾಜವಾದಿ ಚಿಂತಕ, ಚಿಕಿತ್ಸಕ ಬುದ್ಧಿಯಿಂದ ನೋಡುವ ಇವರ ಗುಣ ಕೆಲವೊಮ್ಮೆ ಕೆಲವರಿಗೆ "ಅತಿ" ಎನಿಸಿದ್ದೂ ಇತ್ತು. ಆದರ ಆಧುನಿಕ ಕಾಲಘಟ್ಟಕ್ಕೆ ಹೊಂದುವ ಇವರ ಚಿಂತನೆಗಳನ್ನು ಮಾತ್ರ ಯಾರೂ ನಿರಾಕರಿಸುವುದು ಸಾಧ್ಯವಾಗಿಅಲಿಲ್ಲ.
ಅಬಚೂರಿನ ಪೋಸ್ಟಾಫೀಸು, ಕಿರಿಗೂರಿನ ಗಯ್ಯಾಳಿಗಳು. ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಅಣ್ಣನ ನೆನಪು, ಮಿಸ್ಸಿಂಗ್ ಲಿಂಕ್ಸ್, ಮಿಲೇನಿಯಂ ಸರಣಿ ಕೃತಿಗಳು, ಸಹಜಕೃಷಿ, ಪರಿಸರದ ಕಥೆಗಳು, ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು. ಫ್ಲೈಯಿಂಗ್ ಸಾಸರ್ಸ್‌ (ಭಾಗ ೧-೨), ಕನ್ನಡ ನಾಡಿನ ಹಕ್ಕಿಗಳು, ಮಾಯಾಲೋಕ ೧ ಹೀಗೆ ಅನೇಕ ಕೃಉತಿಗಳನ್ನು ಕನ್ನಡಕ್ಕೆ ನೀಡಿರುವ ಇವರ ಸಾಹಿತ್ಯದಲ್ಲಿ ಪರಿಸರ ಪ್ರೇಮವಿದೆ, ವಿಜ್ಞಾನದ ವಿಸ್ಮಯವೂ ಇದೆ.
ಇವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ - ಇವುಗಳು ಚಲನಚಿತ್ರವಾಗಿ ರಾಷ್ಟ್ರ ಮನ್ನಣೆ ಗಳಿಸಿವೆ. ಚಿದಂಬರ ರಹಸ್ಯ ಕಾದಂಬರಿಗೆ ರಾಜ್ಯ, ಕಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಸಂದಿದೆ.ಿಷ್ಟೇ ಅಲ್ಲದೆ ಪ<ಪ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ  ಸೇರಿ ಅನೇಕ ಪುರಸ್ಕಾರಗಳಿಗೆ ತೇಜಸ್ವಿ ಭಾಜನರಾಗಿದ್ದರು.
ಪ್ರಖ್ಯಾತ ಸಾಹಿತಿ, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬಾಳಿದ್ದ ಪೂರ್ಣಚಂದ್ರ ತೇಜಸ್ವಿ 2007ರ ಏಪ್ರಿಲ್ 5ರಂದು ನಿಧನರಾದರು
ತೇಜಸ್ವಿ ಜನ್ಮದಿನದ ಕಾರ್ಯಕ್ರಮಗಳು
ಇಂದು (ಸೆಪ್ಟೆಂಬರ್ 08) ಅವರ 80ನೇ ಜನ್ಮದಿನವಾಗಿದ್ದು ಈ ಸಂದರ್ಭ ಬೆಂಗಳೂರು, ಮೈಸೂರು ಸೇರಿ ರಾಜ್ಯಾದ್ಯಂತ ನಾನಾ ಕಾರ್ಯಕ್ರಮಗಳು ಆಯೋಜನೆಯಾಗಿದೆ. ಇದರ ಕಿರು ಮಾಹಿತಿ ಮುಂದೆ ನೀಡಲಾಗಿದೆ-
  • ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ 08-09-2018 ರ ಶನಿವಾರ ವಿಶ್ವಪಥ ಕಲಾಸಂಗಮ ಹವ್ಯಾಸಿ  ರಂಗತಂಡವು ತೇಜಸ್ವಿಯವರ ಪ್ರಸಿದ್ಧ ಕೃತಿ "ಪರಿಸರದ ಕತೆ" ಕೃತಿಯನ್ನಾಧರಿಸಿದ "ಎಂಗ್ಟನ ಪುಂಗಿ" ನಾಟಕ ಪ್ರದರ್ಶಿಸಲಿದ್ದು ಬೆಂಗಳೂರು ಬಸವೇಶ್ವರನಗರದಲ್ಲಿರುವ ಕೆ.ಇ.ಎ.ಪ್ರಭಾತ್ ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ನಾಟಕ ಇದೆ.
  • ಭಾನುವಾರ 09-092018ರಂದು ಬೆಳಿಗ್ಗೆ 7:30 ಗಂಟೆಗೆ ಸಾಹಿತ್ಯ ವನ, ವಿ.ಸಿ. ಮನೆ ಹತ್ತಿರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ "ಅರಿವಿನ ಕೃಷಿ" (ತೇಜಸ್ವಿ ಓದು - ಅವರ ಪುಸ್ತಕಗಳನ್ನು ಓದುವ ಮೂಲಕ ತೇಜಸ್ವಿಯವರನ್ನು ಸ್ಮರಿಸುವ ಕಾರ್ಯಕ್ರಮ) ಇದೆ
  • ಶನಿವಾರ, ಸೆಪ್ಟೆಂಬರ್ 08, 2018, ಮಧ್ಯಾಹ್ನ 3.30ಕ್ಕೆ  ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಂಗಳೂರಲ್ಲಿ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
  • ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತೇಜಸ್ವಿ-80 ಎರಡು ದಿನಗಳ ಸಾಹಿತ್ಯ ಕಾರ್ಯಕ್ರಮ ಸೆ.8, 9ರಂದು ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ನಡೆಯಲಿದೆ. 
  • ತೇಜಸ್ವಿ ಅವರ ಹುಟ್ಟಿದ ದಿನದ ಪ್ರಯುಕ್ರ ಕರ್ವಾಲೋ ಕಾದಂಬರಿ ಬಗ್ಗೆ, "ಮೂರರ ಮುಂದೆ ಏಳು ಸೊನ್ನೆ" ಎನ್ನುವ ವಿಷಯದ  ಕುರಿತು ಚಾರಣ ಹಾಗೂ ಚರ್ಚೆ ಕಾರ್ಯಕ್ರಮವನ್ನು ಹಾವೇರಿಯ ರಾಣಿಬೆನ್ನೂರಿನಲ್ಲಿ ಆಯೋಜಿಸಲಾಗಿದೆ.08 ಸೆಪ್ಟೆಂಬರ್ 2018ರ ಮಧ್ಯಾಹ್ನ 3 ಗಂಟೆಯಿಂದ ಭಾನುವಾರ 09 ಸೆಪ್ಟೆಂಬರ್ 2018ರ ಬೆಳಗ್ಗೆ 9 ಗಂಟೆಯವರೆಗೆ ಈ ಚಾರಣ ಚರ್ಚೆ ನಡೆಯಲಿದೆ.  ಇದು ಉಚಿತವಾಗಿದ್ದು ಮುಂಚಿತವಾಗಿ ರಿಜಿಸ್ಟರ್ ಮಾಡಿಸಿಕೊಂಡವರಿಗೆ ಪ್ರವೇಶವಿದೆ.
  • ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಅಂಗವಾಗಿ ಕೊಟ್ಟಿಗೆಹಾರದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಪ್ಟೆಂಬರ್ 08, 2018ಬೆಳಿಗ್ಗೆ 10ಕ್ಕೆ ಕೊಟ್ಟಿಗೆಹಾರದ ಏಕಲವ್ಯ ವಸತಿಶಾಲೆಯ  ಮಕ್ಕಳಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ.
 
-ರಾಘವೇಂದ್ರ ಅಡಿಗ ಎಚ್ಚೆನ್.
raghavendraadiga1000@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT