ವಿನೂತನ ಕಲ್ಪನೆ: ಬೀದಿ ನಾಯಿಗಳಿಗೆ ಆಶ್ರಯವಾದ ಟಿವಿ ಬಾಕ್ಸ್ ಗಳು! 
ವಿಶೇಷ

ವಿನೂತನ ಕಲ್ಪನೆ: ಬೀದಿ ನಾಯಿಗಳಿಗೆ ಆಶ್ರಯವಾದ ಟಿವಿ ಬಾಕ್ಸ್ ಗಳು!

ಟಿವಿಯನ್ನು ಹಲವು ಬಾರಿ, ಹಲವು ಮಂದಿ ಮೂರ್ಖರ ಪೆಟ್ಟಿಗೆ ಎಂದೇ ಹೇಳುವುದುಂಟು ಆದರೆ ಅದರಿಂದ ಆಗಿರುವ ಉಪಯೋಗಗಳು ಮಾತ್ರ ಹಲವಾರಿವೆ.

ಗುವಾಹಟಿ: ಟಿವಿಯನ್ನು ಹಲವು ಬಾರಿ, ಹಲವು ಮಂದಿ ಮೂರ್ಖರ ಪೆಟ್ಟಿಗೆ ಎಂದೇ ಹೇಳುವುದುಂಟು ಆದರೆ ಅದರಿಂದ ಆಗಿರುವ ಉಪಯೋಗಗಳು ಮಾತ್ರ ಹಲವಾರಿವೆ.

ಅಸ್ಸಾಂ ನ ಶಿವಸಾಗರ್ ಟೌನ್ ನಲ್ಲಿ ಓರ್ವ ಯುವಕ ಇದನ್ನು ಸಾಧಿಸಿ ತೋರಿಸಿದ್ದು, ನಾಯಿಗಳಿಗೆ ಚಳಿಯಾಗದಿರಲಿ ಎಂದು ತ್ಯಾಜ್ಯಕ್ಕೆ ಹಾಕಿದ್ದ ಟಿವಿ ಬಾಕ್ಸ್ ಗಳಿಂದ ನಾಯಿಗಳಿಗೆ ಗೂಡು ಮಾಡಿದ್ದಾರೆ. 

"ಸಾಕು ಪ್ರಾಣಿಗಳಿಗೆ ಎಲ್ಲಾ ರೀತಿಯ ಸೌಲಭ್ಯವೂ ಸಿಗಲಿದೆ, ಆದರೆ ಬೀದಿ ನಾಯಿಗಳಿಗೆ ಮಾತ್ರ ಆಹಾರದಿಂದ ಹಿಡಿದು ಆಶ್ರಯದವರೆಗೂ ಸಮಸ್ಯೆಯೇ. ಈ ರೀತಿಯ ಬೀದಿ ನಾಯಿಗಳಿಗಾಗಿ ನಾನು ಏನಾದರೂ ಮಾಡಬೇಕು ಎನಿಸಿತು, ಆಗಲೇ ಈ ಟಿವಿ ಬಾಕ್ಸ್ ಗಳಿಂದ ಆಶ್ರಯವನ್ನು ಕಲ್ಪಿಸಿದೆ. ದಿ ಕೆನಲ್ ನ ತಯಾರಕ 32 ವರ್ಷದ ಅಭಿಜಿತ್ ಡೊವಾರಾಹ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.

ಕೆಲವೇ ವರ್ಷಗಳ ಹಿಂದೆ ಅಭಿಜಿತ್ ಅವರ ಸಹೋದರ ಮನೆಗೆ ನಾಯಿ ಮರಿ ತಂದಿದ್ದರು. ಈ ಬಳಿಕ ನಾಯಿಗಳ ಬಗ್ಗೆ ಅಭಿಜಿತ್ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದಾರೆ.

ಅಭಿಜಿತ್ ನ ಈ ಪ್ರಾಣಿಪ್ರಿಯ ಕೆಲಸಗಳನ್ನು ಗುರುತಿಸಿರುವ ಅನೇಕ ಸಮಾನ ಮನಸ್ಕರು, ಪಶುವೈದ್ಯರೊಬ್ಬರು ಅಭಿಜಿತ್ ಜೊತೆ ಕೈ ಜೋಡಿಸಿದ್ದಾರೆ ಸ್ಥಳೀಯರು ಅಭಿಜಿತ್ ನ್ನು ಕಸದಿಂದ ಉಪಯೋಗವಾಗುವಂತಹ ವಸ್ತುಗಳನ್ನು ತಯಾರಿಸುವ ಹೊಸತನನ್ನು ಸೃಷ್ಟಿಸುವವನೆಂದೇ ಗುರುತಿಸುತ್ತಾರೆ.

ಈ ಹಿಂದೆ ಮಹಿಳೆಯರ ರಕ್ಷಣೆಗಾಗಿ ಟಾರ್ಚ್ ನ್ನು ತಯಾರಿಸಿದ್ದಷ್ಟೇ ಅಲ್ಲದೇ, ಪ್ಯಾಂಡಮಿಕ್ ಅವಧಿಯಲ್ಲಿ ಸ್ಯಾನಿಟೈಸೇಷನ್ ಗೂ ಗ್ಯಾಡ್ಜೆಟ್ ಗಳನ್ನು ಕಂಡು ಹಿಡಿದಿದ್ದರು.

ಕಳೆದ 5 ವರ್ಷಗಳ ಅವಧಿಯಲ್ಲಿ ನಾನು ಕಸದಿಂದ 50 ಕ್ಕೂ ಹೆಚ್ಚು ಬಳಕೆಯ ವಸ್ತುಗಳನ್ನು ತಯಾರಿಸಿದ್ದೇನೆ, ಆದ್ದರಿಂದ ಜನರು ವಸ್ತುಗಳನ್ನು ತ್ಯಾಜ್ಯಕ್ಕೆ ಹಾಕುವ ಬದಲು ನನ್ನ ಬಳಿ ನೀಡುತ್ತಾರೆ. ನನ್ನ 2 ರೂಮ್ ನಲ್ಲಿ 7 ಟಿವಿ ಸೆಟ್ ಗಳಿದ್ದವು. ಇದರಿಂದ ನಾಯಿಗಳಿಗೆ ಆಶ್ರಯ ನೀಡುವ ಆಲೋಚನೆ ಬಂದಿತ್ತು ಎಂದು ಅಭಿಜಿತ್ ಹೇಳುತ್ತಾರೆ. ಅಭಿಜಿತ್ ನ ಕೆಲಸಗಳನ್ನು ಶಿವಸಾಗರ್ ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಐ ಅಝರ್ ಅಲಿ ಕೂಡ ಗುರುತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT