ಆಯಿಶಾ ನಾಜಿಯಾ 
ವಿಶೇಷ

ಫೀಫಾ ಸ್ನಾತಕೋತ್ತರ ಕ್ರೀಡಾ ಕಾರ್ಯಕ್ರಮ: ಭಾರತದಿಂದ ಆಯ್ಕೆಯಾದ ಏಕೈಕ ಮಹಿಳೆ ಕೇರಳದ ಆಯಿಷಾ ನಾಜಿಯಾ

ಅಂಡರ್-17 ಫೀಫಾ ವರ್ಲ್ಡ್ ಕಪ್, ರಾಷ್ಟ್ರೀಯ ಪಂದ್ಯಗಳು, ಇಂಡಿಯನ್ ಸೂಪರ್ ಲೀಗ್ ಮತ್ತು ಎನ್ ಬಿಎ ಇಂಡಿಯಾ ಗೇಮ್ಸ್ ಗಳು ಸೇರಿದಂತೆ ಹಲವು ಕ್ರೀಡಾ ಕಾರ್ಯಕ್ರಮಗಳನ್ನು ನಿರ್ವಹಿಸಿದ ಆಯಿಷಾ ನಾಜಿಯಾ ಕ್ರೀಡಾ ನಿರ್ವಹಣಾ ಸಂಸ್ಥೆಗಳಿಗೆ ಅಪರಿಚಿತರೇನಲ್ಲ.

ಕೊಚ್ಚಿ: ಅಂಡರ್-17 ಫೀಫಾ ವರ್ಲ್ಡ್ ಕಪ್, ರಾಷ್ಟ್ರೀಯ ಪಂದ್ಯಗಳು, ಇಂಡಿಯನ್ ಸೂಪರ್ ಲೀಗ್ ಮತ್ತು ಎನ್ ಬಿಎ ಇಂಡಿಯಾ ಗೇಮ್ಸ್ ಗಳು ಸೇರಿದಂತೆ ಹಲವು ಕ್ರೀಡಾ ಕಾರ್ಯಕ್ರಮಗಳನ್ನು ನಿರ್ವಹಿಸಿದ ಆಯಿಷಾ ನಾಜಿಯಾ ಕ್ರೀಡಾ ನಿರ್ವಹಣಾ ಸಂಸ್ಥೆಗಳಿಗೆ ಅಪರಿಚಿತರೇನಲ್ಲ.

ಫೀಫಾ ಪ್ರಾಯೋಜಿತ, ಸ್ನಾತಕೋತ್ತರ ಕ್ರೀಡಾ ಕಾರ್ಯನಿರ್ವಹಣಾ ಕಾರ್ಯಕ್ರಮ, ಫೀಫಾ ಮಾಸ್ಟರ್, ಡಿ ಮಾಂಟ್ ಫೋರ್ಟ್ ವಿಶ್ವವಿದ್ಯಾಲಯದ ಸಂಘಟನಾ ಪ್ರಾಯೋಜಕತ್ವ, ಇಟಲಿಯ ಬೊಕ್ಕೊನಿ ಶಾಲಾ ನಿರ್ವಹಣಾ ಎಸ್ ಡಿಎ ಮತ್ತು ಸ್ವಿಡ್ಜರ್ಲ್ಯಾಂಡ್ ನ ನೌಶಟೆಲ್ ವಿಶ್ವವಿದ್ಯಾಲಯಕ್ಕೆ ವಿಶ್ವದಾದ್ಯಂತದಿಂದ ಆಯ್ಕೆಯಾದ 32 ಪ್ರತಿನಿಧಿಗಳಲ್ಲಿ ಆಯಿಷಾ ಕೂಡ ಒಬ್ಬರು.

ಕೇರಳದ ಕೋಝಿಕ್ಕೋಡು ಮೂಲದ 26 ವರ್ಷದ ಆಯಿಷಾ ಕ್ರೀಡಾ ಮಾನವಿಕತೆ, ಇತಿಹಾಸ, ನಿರ್ವಹಣೆ ಮತ್ತು ಕಾನೂನು ಅಂತರಾಷ್ಟ್ರೀಯ ಮಾಸ್ಟರ್ ಕೋರ್ಸ್‌ಗೆ ಆಯ್ಕೆಯಾದ ಏಕೈಕ ಭಾರತೀಯ ಮಹಿಳೆ.ಆಟಕ್ಕಿಂತ ಹೆಚ್ಚಾಗಿ, ಆಯಿಷಾ ಅವರ ವ್ಯವಸ್ಥಾಪಕ ಅಂಶಗಳೆಂದರೆ - ಆಟಗಾರರು, ತೀರ್ಪುಗಾರರು, ತಪಾಸಣೆ ಮತ್ತು ಪ್ರತಿ ಪಂದ್ಯವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು.

ಆಯಿಷಾ ಇಂಡಿಯನ್ ಆಯಿಲ್-ಅದಾನಿ ಗ್ಯಾಸ್, ಕೊಚ್ಚಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನನಗೆ ಆಸಕ್ತಿಯಿರುವ ಕ್ರೀಡಾಕೂಟವಿದ್ದಾಗಲೆಲ್ಲಾ, ಕೆಲಸಕ್ಕೆ ವಿರಾಮ ತೆಗೆದುಕೊಳ್ಳುತ್ತಿದ್ದೆ. ಕಂಪನಿಯು ನನ್ನ ಉತ್ಸಾಹದ ಬಗ್ಗೆ ತಿಳಿದಿರುವುದರಿಂದ, ಅವರು ನನ್ನನ್ನು ಪ್ರೋತ್ಸಾಹಿಸಿದರು. ನನ್ನ ಉತ್ಸಾಹವನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ಯಲು, ನಾನು ನಂತರ ನನ್ನ ಕೆಲಸವನ್ನು ಬಿಟ್ಟುಬಿಟ್ಟೆ ಎಂದು ಆಯಿಷಾ ಹೇಳುತ್ತಾರೆ. 2016ರಲ್ಲಿ ಕೇರಳ ವಿಶ್ವವಿದ್ಯಾಲಯಕ್ಕೆ ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ರ್ಯಾಂಕ್ ಗಳಿಸಿದ್ದರು.

ಮೆರಿಟ್ ಸ್ಕಾಲರ್ ಷಿಪ್ ನಲ್ಲಿ ಓದಿದ್ದ ಆಯಿಷಾಗೆ ವಿಶ್ವವಿದ್ಯಾಲಯದ ಕೋರ್ಸ್ ಶುಲ್ಕದಲ್ಲಿ ಕಡಿತವಿತ್ತು. ಈ ವರ್ಷ, 700 ಕ್ಕೂ ಹೆಚ್ಚು ಅರ್ಜಿದಾರರ ಗುಂಪಿನಿಂದ ಆಯಿಷಾರನ್ನು ಆಯ್ಕೆ ಮಾಡಲಾಗಿದೆ. ಮೂರು-ಮಾಡ್ಯೂಲ್ ಕಾರ್ಯಕ್ರಮವನ್ನು ಯುರೋಪಿನ ಮೂರು ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುವುದು. ಇದಕ್ಕಾಗಿ, ನಾನು ಇನ್ನೂ 28 ಲಕ್ಷವನ್ನು ಸಂಗ್ರಹಿಸಬೇಕಾಗಿದೆ ಎಂದು ಆಯಿಷಾ ಹೇಳುತ್ತಾರೆ. ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಕೋರ್ಸ್‌ಗಾಗಿ, ಯುವಕರು ಈಗ ಅನುದಾನ ಕೋರಿ ಅರ್ಜಿ ಹಾಕಿದ್ದಾರೆ.

ಆಯಿಷಾ ಅವರು ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಕೋರ್ಸ್‌ನಿಂದ ಪಡೆಯುವ ಮಾನ್ಯತೆಯನ್ನು ಬಳಸಿಕೊಳ್ಳಲು ಬಯಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT