ತಿರುವನಂತಪುರ: ಕೇರಳದ ಅಂಧ ಮಹಿಳೆ ಗೀತಾ ಸಲೀಶ್ ಗೃಹೋತ್ಪನ್ನ ತಯಾರಿ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಅವರು 13ನೇ ವರ್ಷದಲ್ಲಿಯೇ ಅನುವಂಶೀಯತೆ ಕಾಯಿಲೆಯಿಂದಾಗಿ ದೃಷ್ಟಿಯನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ: ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ
ಒಟ್ಟಾಪಲಂ ನಿವಾಸಿಯಾಗಿರುವ ಗೀತಾ ಇಂದು ಗೃಹೋತ್ಪನ್ನ ವಸ್ತುಗಳ ತಯಾರಿ ಮೂಲಕ ಸ್ವಾವಲಂಬನೆಯ ಪಾಠವನ್ನು ಸಾರುತ್ತಿದ್ದಾರೆ. ಕೇರಳದ ಸಾಂಪ್ರದಾಯಿಕ ಖಾದ್ಯ, ತಿನಿಸುಗಳನ್ನು ಮಾರುತ್ತಿದ್ದಾರೆ. ಅವರು ತಮ್ಮದೇ ಸ್ವಂತ ಬ್ರ್ಯಾಂಡ್ ಅನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ನಂತರ ಶ್ವಾಸಕೋಶದ ಸಮಸ್ಯೆಗೆ ಒಳಗಾಗಿ 65 ದಿನ 'ಇಸಿಎಂಒ'ನಲ್ಲಿದ್ದು ಸಾವನ್ನು ಗೆದ್ದು ಬಂದ 12 ವರ್ಷದ ಬಾಲಕ!
ಗೀತಾ ಅವರ ಬ್ರ್ಯಾಂಡ್ ಹೆಸರು 'ಗೀತಾಸ್ ಹೋಮ್ ಟು ಹೋಮ್'. ಗೀತಾ ಅವರು ಉದ್ಯಮಿಯಾಗಿ ಬೆಳೆಯಲು ಕಾರಣವಾಗಿದ್ದು ಕೊರೊನಾ ಸಾಂಕ್ರಾಮಿಕ ಎನ್ನುವುದು ಅಚ್ಚರಿಯ ಸಂಗತಿ.
ಇದನ್ನೂ ಓದಿ: ಕೇರಳದ ಬಾಲಕನಿಗೆ ಸಂಕಷ್ಟ; ಮಾನಸಿಕ ಒತ್ತಡದಿಂದ ಪಾರಾಗಲು ನೆರವಾಯ್ತು ಪಠ್ಯದಲ್ಲಿದ್ದ ಸುಧಾಮೂರ್ತಿ ಅವರ ಉಪಾಖ್ಯಾನಗಳು!
ಬಿಎ ವ್ಯಾಸಂಗ ಮಾಡಿರುವ ಗೀತಾ ಪತಿಯ ಜೊತೆಗೂಡಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರು ತಯಾರಿಸುವ ಕುರ್ಕು ಮೀಲ್, ಮಂಜಲ್ ವರಕಿಯತು ಮತ್ತಿತರ ಕೇರಳದ ಸ್ವಾದಿಷ್ಟ ತಿನಿಸುಗಳಿಗೆ ದೇಶದೆಲ್ಲೆಡೆಯಿಂದ ಬೇಡಿಕೆ ಇದೆ.
ಇದನ್ನೂ ಓದಿ: ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ