ಸುಶೀಲಾ 
ವಿಶೇಷ

ಕರ್ನಾಟಕ-ಕೇರಳ ಗಡಿಯಲ್ಲಿನ ಬುಡಕಟ್ಟು ಜನಾಂಗದವರಿಗೆ ಭರವಸೆಯ ಬೆಳಕು ಈ ಕೊರೋನಾ ವಾರಿಯರ್!

ರಾಜ್ಯದ ಆರೋಗ್ಯ ವ್ಯವಸ್ಥೆ ಹಾಗೂ ಬುಡಕಟ್ಟು ಜನರ ನಡುವೆ ಸಂಪರ್ಕದ ಸೇತುವೆಯಾಗಿರುವ ಈ ಕೊರೋನಾ ವಾರಿಯರ್'ಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಭಾರೀ ಬೇಡಿಕೆಯಿದೆ. ಈ ಭಾಗದಲ್ಲಿ ಯಾರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾದರೂ ಮೊದಲು ಇಲ್ಲಿನ ಜನರಿಗೆ ನೆನಪಾಕುವುದೇ ಈ ವ್ಯಕ್ತಿ.

ಮೈಸೂರು: ರಾಜ್ಯದ ಆರೋಗ್ಯ ವ್ಯವಸ್ಥೆ ಹಾಗೂ ಬುಡಕಟ್ಟು ಜನರ ನಡುವೆ ಸಂಪರ್ಕದ ಸೇತುವೆಯಾಗಿರುವ ಈ ಕೊರೋನಾ ವಾರಿಯರ್'ಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಭಾರೀ ಬೇಡಿಕೆಯಿದೆ. ಈ ಭಾಗದಲ್ಲಿ ಯಾರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾದರೂ ಮೊದಲು ಇಲ್ಲಿನ ಜನರಿಗೆ ನೆನಪಾಕುವುದೇ ಈ ವ್ಯಕ್ತಿ... ಹೀಗಾಗಿ ಇಲ್ಲಿನ ಜನರಿಗೆ ಈ ಕೊರೋನಾ ವಾರಿಯರ್ ಭರವಸೆಯ ದಾರಿದೀಪವಾಗಿದ್ದಾರೆ. 

ಆಶಾ ಕಾರ್ಯಕರ್ತೆಯಾಗಿರುವ 32 ವರ್ಷದ ಮಹಿಳೆ ಸುಶೀಲಾ ಆವರು ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಕುಗ್ರಾಮ ಗೋಲುರು, ಬಾಲ್ಲೆ ಮತ್ತು ಆನೆಮಾಲಾ ಪ್ರದೇಶದಲ್ಲಿ ಕೊರೋನಾ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರ ಪರಿಶ್ರಮದಿಂದಾಗಿ ಈ ಭಾಗದಲ್ಲಿ ಕೊರೋನಾದಿಂದ ಮುಕ್ತವಾಗಿದೆ. 

ಸುಶೀಲಾ ಕೂಡ ಕುಗ್ರಾಮವಾಗಿರುವ ಗೋಲುರು ನಿವಾಸಿಯಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಪ್ರತೀ ತಿಂಗಳೂ ಸರ್ಕಾರ ನೀಡುವ 1 ಲೀಟರ್ ಸೀಮೆಎಣ್ಣೆಯಲ್ಲೇ ಸಂಜೆ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿ ಕಾಲ ಕಳೆಯುತ್ತಿದ್ದಾರೆ. 

ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಕೂಡ ಸುಶೀಲಾ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಪ್ರಾಣಿಗಳು ನಡೆದಾಡದ ಸಮಯ ನೋಡಿಕೊಂಡು ಬಿಸಿಲಿರಲಿ, ಮಳೆಯಿರಲಿ 15-20 ಕಿಮೀ ನಡೆದುಕೊಂಡು ಹೋಗಿ ಪ್ರತೀ ಮನೆಗೂ ಭೇಟಿ ನೀಡಿ, ಜನರ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ, ಗರ್ಭೀಣಿ ಮಹಿಳೆಯರ ಆರೋಗ್ಯ ತಪಾಸಣೆ ಹಾಗೂ ಮಕ್ಕಳಿಗೆ ಸೂಕ್ತ ಸಮಯಕ್ಕೆ ಲಸಿಕೆ ಹಾಕಿಸುವ ಕೆಲಸವನ್ನು ನಿಭಾಯಿಸುತ್ತಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರಿಗೆ ಅರ್ಧರಾತ್ರಿಯಲ್ಲಿ ಪ್ರಸವದ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಟೋರಿಕ್ಷಾದ ವ್ಯವಸ್ಥೆ ಮಾಡಿ ಮಹಿಳೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯುವಂತೆ ಮಾಡಿದ್ದಾರೆ. 

ತಮ್ಮ ಮೊಬೈಲ್ ಫೋನ್ ಚಾರ್ಜ್ ಮಾಡಿಕೊಳ್ಳಲು ಸುಶೀಲಾ ಅವರು 10 ಕಿಮೀ ನಡೆದುಕೊಂಡು ಹೋಗುತ್ತಾರೆ. ನೆರೆ ಗ್ರಾಮಕ್ಕೆ ತೆರಳುವ ಅವರು ಅಲ್ಲಿರುವ ಮತ್ತೊಬ್ಬರು ಆಶಾ ಕಾರ್ಯಕರ್ತೆಯೊಬ್ಬ ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಾರೆ. ಸುಶೀಲಾ ಅವರು ಇದೀಗ ಅಲ್ಲಿನ ಜನರಿಗೆ ಅಮ್ಮರಾಗಿ ಹೋಗಿದ್ದು, ಅಲ್ಲಿನ ಜನರು ಅವರನ್ನು ಸುಶೀಲಮ್ಮ ಎಂದೇ ಕರೆಯುತ್ತಾರೆ. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಇಂತಹ ಕೊರೋನಾ ವಾರಿಯರ್ ಗಳ ಕಾರ್ಯ ಶ್ಲಾಘನೀಯವಾದದ್ದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT