ನಾಗ್ಪುರ: ಪೊಲಿಸರಿಗೆ ಶರಣಾಗಿದ್ದ ನಕ್ಸಲ್ ಮಹಿಳೆಯರು, ಸ್ವಂತ ಉದ್ಯಮ ಶುರುಮಾಡಿ ಸ್ವಾವಲಂಬನೆಗೆ ಮಾದರಿಯಾಗಿರುವ ಘಟನೆ ಮಹಾರಾಷ್ಟ್ರದ ಗಡ್ ಚಿರೋಲಿ ಎಂಬಲ್ಲಿ ನಡೆದಿದೆ.
ಕೆಲ ಸಮಯದ ಹಿಂದೆ ಸುಮಾರು 10 ಮಂದಿ ನಕ್ಸಲ್ ಮಹಿಳೆಯರು ಪೊಲೀಸರಿಗೆ ಶರಣಾಗಿದ್ದರು. ಹೊಸ ಬದುಕು ಕಟ್ಟಿಕೊಳ್ಳಲು ತವಕ ವ್ಯಕ್ತಪಡಿಸಿದ್ದ ಅವರಿಗೆ ಪೊಲೀಸ್ ಇಲಾಖೆ ನೆರವು ನೀಡಿತ್ತು.
ಶರಣಾಗತ ನಕ್ಸಲ್ ಮಹಿಳೆಯರಿಗೆ ಫಿನೈಲ್ ತಯಾರಕ ತರಬೇತಿಯನ್ನು ಪೊಲೀಸರೇ ಒದಗಿಸಿದರು. ಅಲ್ಲದೆ ಉದ್ದಿಮೆ ಪ್ರಾರಂಭಿಸಲು ಅಗತ್ಯ ಆರ್ಥಿಕ ನೆರವನ್ನೂ ನೀಡಿದ್ದಾರೆ.
ಇದನ್ನೂ ಓದಿ: ಆರ್ ಎಸ್ಎಸ್ ಅನ್ನು ನಕ್ಸಲರಿಗೆ ಹೋಲಿಸಿದ ಛತ್ತೀಸ್ಗಢ ಸಿಎಂ, ನಾಗಪುರದಿಂದ ಸ್ಥಳೀಯ ಕಾರ್ಯಕರ್ತರ ನಿಯಂತ್ರಣ
ಪೊಲೀಸರ ಸಹಕಾರದಿಂದಾಗಿ ಇಂದು ನಕ್ಸಲ್ ಮಹಿಳೆಯರು ಸ್ವಂತ ಫಿನೈಲ್ ತಯಾರಕ ಘಟಕ ಸ್ಥಾಪಿಸಿ ಹೊಸ ಬದುಕು ಕಂಡುಕೊಂಡಿದ್ದಾರೆ.
ಕೇರಳ: ಕರ್ನಾಟಕದ ನಕ್ಸಲ್ ನಾಯಕರಾದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನ!
ನಕ್ಸಲ್ ನಂಟು ಪ್ರಕರಣ: ಪತ್ರಕರ್ತ ವಿಠಲ ಮಲೆಕುಡಿಯ, ಆತನ ತಂದೆ ಲಿಂಗಣ್ಣ ಮಲೆಕುಡಿಯ ಖುಲಾಸೆ
ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿ: ಸಹಾಯಕ ಕಮಾಂಡೆಂಟ್ ಸೇರಿ ಇಬ್ಬರು ಐಟಿಬಿಪಿ ಸಿಬ್ಬಂದಿ ಹುತಾತ್ಮ
ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಿದ್ದ ಐಟಿಬಿಪಿ ಶ್ವಾನಪಡೆ ಈಗ ಛತ್ತೀಸ್ ಘಡದಲ್ಲಿ ನಕ್ಸಲ್ ಕಾರ್ಯಾಚರಣೆಗೆ ನಿಯೋಜನೆ!
ಛತ್ತೀಸಗಢ: ತಲೆಗೆ 3 ಲಕ್ಷ ರೂ. ಬಹುಮಾನ ಹೊತ್ತಿದ್ದ ನಕ್ಸಲ್ ಎನ್ ಕೌಂಟರ್ ನಲ್ಲಿ ಬಲಿ, ಶಸ್ತ್ರಾಸ್ತ್ರ ವಶ