ಅನ್ನೆ ಮತ್ತು ಮೈಕ್ ಹೊವಾರ್ಡ್ 
ವಿಶೇಷ

10.5 ವರ್ಷ, 65 ರಾಷ್ಟ್ರ: ಕೇರಳಕ್ಕೆ ಆಗಮಿಸಿದ ಅಮೆರಿಕ ದಂಪತಿಯ ಹನಿಮೂನ್ ಪ್ರವಾಸಕ್ಕೆ ಕೊನೆಯೇ ಇಲ್ಲ!

ಸಾಮಾನ್ಯವಾಗಿ ಹನಿಮೂನ್ ಟ್ರಿಪ್ ಎಷ್ಟು ದಿನಗಳವರೆಗೆ ಇರುತ್ತದೆ? ಕೆಲವು ದಿನ ಅಂತಾ ಉತ್ತರ ಬರಬಹುದು. ಆದರೆ, ಅಮೆರಿಕದ ದಂಪತಿ 10.5 ವರ್ಷಗಳಿಂದಲೂ ಹನಿಮೂನಿ ಪ್ರವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು 64 ರಾಷ್ಟ್ರಗಳನ್ನು ಸುತ್ತಾಡಿದ್ದಾರೆ.

ಕೊಚ್ಚಿ: ಸಾಮಾನ್ಯವಾಗಿ ಹನಿಮೂನ್ ಟ್ರಿಪ್ ಎಷ್ಟು ದಿನಗಳವರೆಗೆ ಇರುತ್ತದೆ? ಕೆಲವು ದಿನ ಅಂತಾ ಉತ್ತರ ಬರಬಹುದು. ಆದರೆ, ಅಮೆರಿಕದ ದಂಪತಿ 10.5 ವರ್ಷಗಳಿಂದಲೂ ಹನಿಮೂನಿ ಪ್ರವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು 64 ರಾಷ್ಟ್ರಗಳನ್ನು ಸುತ್ತಾಡಿದ್ದಾರೆ.

2012ರಲ್ಲಿ ಮದುವೆಯಾದ ನ್ಯೂಯಾರ್ಕ್ ನ ಅನ್ನೆ ಮತ್ತು ಮೈಕ್  ಹೊವಾರ್ಡ್ ಸದ್ಯಕ್ಕಂತೂ ಹನಿಮೂನ್ ಸ್ಥಗಿತಗೊಳಿಸಲು ಯೋಚನೆ ಮಾಡಿಲ್ಲ. ಪ್ರಯಾಣ ಅವರ ಜೀವನದ ಭಾಗವಾಗಿಬಿಟ್ಟಿದೆ. ಆರಂಭದಲ್ಲಿ ಯುರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕ ರಾಷ್ಟ್ರಗಳಿಗೆ ತೆರಳಿದ ಈ ದಂಪತಿಗೆ ಭಾರತ 65ನೇ ರಾಷ್ಟ್ರವಾಗಿದೆ. ಕೇರಳದಿಂದ ಅವರು ಭಾರತ ಸುತ್ತಲೂ ಆರಂಭಿಸಿದ್ದಾರೆ. 

ಭೂತಾನ್ ನಿಂದ ಬಂದಿದ್ದಾಗಿ ತಿಳಿಸಿದ ಮೈಕ್, ನ್ಯೂಜೆರ್ಸಿಯಲ್ಲಿ ವಾಲಿಬಾಲ್ ಆಡುತ್ತಿದ್ದಾಗ ಅನ್ನೆ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದರು. ದಂಪತಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ. 15 ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ಬೇರೆ ಬೇರೆಯಾಗಿ ಭಾರತಕ್ಕೆ ಬಂದಿದ್ದಾಗಿ ಅನ್ನೆ ಹೇಳುತ್ತಾರೆ. ಭಾರತದಲ್ಲಿ ಯಾರೊಬ್ಬರು ಕೇರಳದಿಂದ ಪ್ರವಾಸ ಆರಂಭಿಸುವುದಾಗಿ ಈ ದಂಪತಿ ಹೇಳುತ್ತಾರೆ.

ಕೇರಳ ಪ್ರವಾಸಿಗರ ಪಾಲಿಗೆ ಭಾರತದ ಮುಖ್ಯದ್ವಾರವಾಗಿದೆ. ಕೇರಳ ಇತರ ಪ್ರದೇಶಗಳಿಂದ ಆಹ್ಲಾದಕರವಾಗಿದೆ ಎಂದು ಮೈಕ್ ಹೇಳುತ್ತಾರೆ. ಇವರು ಅನ್ನೇ ಅವರೊಂದಿಗೆ ಎರಡು ಪುಸ್ತಕಗಳನ್ನು ರಚಿಸಿದ್ದಾರೆ. ಕೇರಳದಲ್ಲಿ ದೊರೆಯುವ ತರಹೇವಾರಿ ಭಕ್ಷ್ಯಗಳು ತಮ್ಮನ್ನು ಆಕರ್ಷಿಸಿವೆ ಎಂದು ಮೈಕ್ ಹೇಳುತ್ತಾರೆ. ಈ ದಂಪತಿ ಕೇರಳದಲ್ಲಿ ಎರಡೂವರೆ ವಾರಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. 

ಗೋವಾ, ಮುಂಬೈ ನಂತರ ಕ್ರೊಯೇಶಿಯಾಕ್ಕೆ ಪ್ರಯಾಣ:  ಸ್ಥಳೀಯ ಬಸ್ ಗಳಲ್ಲಿ ತೆರಳುತ್ತೇವೆ, ಸ್ಥಳೀಯ ಆಹಾರ ಸೇವಿಸುತ್ತಾ, ಇಲ್ಲಿನ ನಿವಾಸಿಗಳೊಂದಿಗೆ ಸಂವಾದ ನಡೆಸುತ್ತೇವೆ. ಇದರಿಂದ ವೆಚ್ಚ ಕಡಿಮೆಯಾಗುವುದು ಮಾತ್ರವಲ್ಲದೇ, ಜನರೊಂದಿಗೆ ಸಂಪರ್ಕಕ್ಕೆ ಸಾಧ್ಯವಾಗಲಿದೆ. ಸ್ಥಳಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳುವುದನ್ನು ನಂಬುವುದಕ್ಕಿಂತಲೂ ವಾಸ್ತವವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಅನ್ನೆ ಹೇಳಿದರು.

 ಗೋವಾ ಮತ್ತು ಮುಂಬೈ ಈ ದಂಪತಿಯ ಮುಂದಿನ ಸ್ಥಳವಾಗಿದೆ. ಅಲ್ಲಿಂದ ಅವರು 66 ನೇ ರಾಷ್ಟ್ರ ಕ್ರೊಯೇಶಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT