ಯಲ್ಲಾಪುರದಲ್ಲಿ ಹೊಸ ಏಡಿ ಪತ್ತೆ 
ವಿಶೇಷ

ಯಲ್ಲಾಪುರದಲ್ಲಿ ಹೊಸ ಏಡಿ ಪತ್ತೆ, ಇದು ದೇಶದ 75ನೇ ಪ್ರಭೇದ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ‘ದ್ವಿವರ್ಣ’ ಎಂಬ ಹೊಸ ಜಾತಿಯ ಏಡಿ ಪ್ರಭೇದ ಪತ್ತೆಯಾಗಿದ್ದು, ಕಾಕತಾಳೀಯವೆಂಬಂತೆ, ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ದಿನವಾದ ಆಗಸ್ಟ್ 15ರಂದು ಈ ದ್ವಿವರ್ಣಕ್ಕೆ...

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ‘ದ್ವಿವರ್ಣ’ ಎಂಬ ಹೊಸ ಜಾತಿಯ ಏಡಿ ಪ್ರಭೇದ ಪತ್ತೆಯಾಗಿದ್ದು, ಕಾಕತಾಳೀಯವೆಂಬಂತೆ, ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ದಿನವಾದ ಆಗಸ್ಟ್ 15ರಂದು ಈ ದ್ವಿವರ್ಣಕ್ಕೆ ವೈಜ್ಞಾನಿಕವಾಗಿ ದೇಶದ 75ನೇ ಏಡಿ ಪ್ರಬೇಧ ಎಂಬ ಮನ್ನಣೆ ಸಿಕ್ಕಿದೆ.

ಯಲ್ಲಾಪುರ ಸಮೀಪದ ಪುಟ್ಟ ಹಳ್ಳಿಯ ವನ್ಯಜೀವಿ ಉತ್ಸಾಹಿ ಹಾಗೂ ಛಾಯಾಗ್ರಾಹಕ ಗೋಪಾಲ ಕೃಷ್ಣ ಹೆಗಡೆ ಹಾಗೂ ಕದ್ರಾ ಮೂಲದ ಫಾರೆಸ್ಟ್ ಗಾರ್ಡ್ ಪರಶುರಾಮ ಭಜಂತ್ರಿ ಅವರು ಭರೆಯ ಅರಣ್ಯದಲ್ಲಿ ಈ ವಿಶಿಷ್ಟ, ಆಕರ್ಷಕ ಬಣ್ಣಗಳ ಸಿಹಿನೀರಿನ ಏಡಿಯನ್ನು ಪತ್ತೆ ಹಚ್ಚಿದ್ದಾರೆ. 

ಆವಿಷ್ಕಾರವಾದ ಒಂದು ವರ್ಷದ ನಂತರ, ಬಿಳಿ ತಲೆ ಮತ್ತು ನೇರಳೆ ದೇಹವನ್ನು ಹೊಂದಿರುವ ಡ್ಯುಯಲ್-ಟೋನ್ ಏಡಿಗೆ ಘಟಿಯಾನ ದ್ವಿವರ್ಣ ಎಂದು ಹೆಸರಿಸಲಾಗಿದೆ. 

ಸ್ಥಳೀಯ ತಜ್ಞರ ಪ್ರಕಾರ, ಏಡಿಯು ಪಶ್ಚಿಮ ಘಟ್ಟಗಳ ಕಲ್ಲಿನ ಹೊರಪದರದ ಜಲಮೂಲಗಳ ನಡುವೆ ವಾಸಿಸುತ್ತದೆ. "ಇದು ವಿಶಿಷ್ಟವಾದ ಏಡಿಗಳಲ್ಲಿ ಒಂದಾಗಿದೆ" ಎಂದು ಹೆಗ್ಡೆ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ಅಪರೂಪದ ಏಡಿಯನ್ನು ಪತ್ತೆಹಚ್ಚಿದ್ದಕ್ಕಾಗಿ ಭಾರತೀಯ ಭೌಗೋಳಿಕ ಸಮೀಕ್ಷೆಯಿಂದ ಹೆಗಡೆ ಮತ್ತು ಭಜಂತ್ರಿ ಅವರಿಗೆ ‘ನಾಗರಿಕ ವಿಜ್ಞಾನಿಗಳು’ ಎಂಬ ಬಿರುದು ಪ್ರದಾನ ಮಾಡಲಾಗಿದೆ.

ಸುಮಾರು 3 ಇಂಚು ಉದ್ದ ಮತ್ತು 2 ಇಂಚು ಅಗಲವಿರುವ ಈ ದ್ವಿವರ್ಣ ಏಡಿ ಪಾಚಿ ಮತ್ತು ಸಣ್ಣಪುಟ್ಟ ಹುಳುಗಳನ್ನು ಸೇವಿಸುತ್ತದೆ, ಜೂನ್ 30, 2021 ರಂದು ನಾವು ಮೊದಲ ಬಾರಿಗೆ ಏಡಿಯನ್ನು ನೋಡಿದ್ದೇವೆ ಎಂದು ಹೆಗ್ಡೆ ಮತ್ತು ಭಜಂತ್ರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT