ಸಾಂದರ್ಭಿಕ ಚಿತ್ರ 
ವಿಶೇಷ

ಬಿಹಾರ: ತನ್ನ ಜೀಬಿನಿಂದ ಹಣ ನೀಡಿ ವೃದ್ಧರೊಬ್ಬರ ಬಾಕಿ ಸಾಲ ತೀರಿಸಿದ ಜಿಲ್ಲಾ ನ್ಯಾಯಾಧೀಶ!

ಬಿಹಾರದ ಜಿಲ್ಲಾ ನ್ಯಾಯಾಧೀಶರೊಬ್ಬರು, ವಯೋವೃದ್ಧರೊಬ್ಬರ ದುಸ್ಥಿತಿ ಕಂಡು ಮರುಗಿದ್ದು, ಅವರ ಬಾಕಿ ಸಾಲವನ್ನು ತೀರಿಸಿದ್ದಾರೆ. ಕೇಂದ್ರ ಬಿಹಾರದ ಜೆಹಾನಾಬಾದ್ ನಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಈ ಮಾನವೀಯ ಘಟನೆ ನಡೆದಿದೆ.

ಪಾಟ್ನಾ: ಬಿಹಾರದ ಜಿಲ್ಲಾ ನ್ಯಾಯಾಧೀಶರೊಬ್ಬರು, ವಯೋವೃದ್ಧರೊಬ್ಬರ ದುಸ್ಥಿತಿ ಕಂಡು ಮರುಗಿದ್ದು, ಅವರ ಬಾಕಿ ಸಾಲವನ್ನು ತೀರಿಸಿದ್ದಾರೆ. ಕೇಂದ್ರ ಬಿಹಾರದ ಜೆಹಾನಾಬಾದ್ ನಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಈ ಮಾನವೀಯ ಘಟನೆ ನಡೆದಿದೆ.

ರೂ. 18,000 ಮೊತ್ತದ ಬ್ಯಾಂಕ್ ಸಾಲ ಪಾವತಿಯಲ್ಲಿ ವಿಳಂಬ ವಿಚಾರ ಇತ್ಯರ್ಥಕ್ಕಾಗಿ ರಾಜೀಂದ್ರ ಚೌಹಾನ್ ಲೋಕ ಅದಾಲತ್ ಗೆ ತೆರಳಿದ್ದರು. ಅವರು ಮನೆಯಿಂದ ತೆರಳಿದಾಗ ಅವರ ಬಳಿ ಕೇವಲ ರೂ. 5,000 ಮಾತ್ರ ಇತ್ತು. ಅವರೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬರ ಬಳಿ ರೂ. 3,000 ಇತ್ತು.

ಆದಾಗ್ಯೂ, ಅವರಿಗೆ 10,000 ರೂ. ಕೊರತೆ ಇತ್ತು. ವಯೋವೃದ್ಧರ ಈ ದುಸ್ಥಿತಿ ಗಮನಿಸಿದ ಜಿಲ್ಲಾ ನ್ಯಾಯಾಧೀಶ ರಾಕೇಶ್ ಕುಮಾರ್ ಸಿಂಗ್ ಕೂಡಲೇ ತನ್ನ ಜೀಬಿನಿಂದ ರೂ. 10,000 ಎತ್ತಿಕೊಡುವ ಮೂಲಕ ಬಾಕಿಯನ್ನು ಪೂರ್ಣಗೊಳಿಸಿದ್ದಾರೆ. ನ್ಯಾಯಾಧೀಶರು ದೇವರ ರೀತಿಯಲ್ಲಿ ಬಂದು ನನನ್ನು ಕಾಪಾಡಿದರು ಎಂದು ಚೌಹಾನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿಕೊಂಡಿದ್ದಾರೆ ಕೊಂಡಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT