ಗಿಡ ನೆಡುವ ಕಾರ್ಯಕ್ರಮ 
ವಿಶೇಷ

ಪ್ರಕೃತಿಗೆ ಕಿರು ಕಾಣಿಕೆ ನೀಡುವ ಪ್ರಯತ್ನ: 'SER' ಸಂಸ್ಥೆಯಿಂದ ಗಿಡ ನೆಡುವ ಮಹತ್ತರ ಕಾರ್ಯ

ಪ್ರಕೃತಿ ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧ. ಮನುಷ್ಯ ಪ್ರಕೃತಿಯ ಮೇಲೆ ಅವಲಂಬಿತ. ಈ ಭೂಮಿಯ ಮೇಲಿನ ಜೀವಸಂಕುಲ ಪ್ರಕೃತಿಗೆ ಪೂರಕವಾಗಿಯೇ ಬದುಕಬೇಕು ಹೊರತು ಜೀವನ ಪ್ರಕ್ರಿಯೆಯಲ್ಲಿ ಪ್ರಕೃತಿಗೆ ಹಾನಿ ಮಾಡಿದರೆ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗುತ್ತದೆ.

ಬೆಂಗಳೂರು: ಪ್ರಕೃತಿ ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧ. ಮನುಷ್ಯ ಪ್ರಕೃತಿಯ ಮೇಲೆ ಅವಲಂಬಿತ. ಈ ಭೂಮಿಯ ಮೇಲಿನ ಜೀವಸಂಕುಲ ಪ್ರಕೃತಿಗೆ ಪೂರಕವಾಗಿಯೇ ಬದುಕಬೇಕು ಹೊರತು ಜೀವನ ಪ್ರಕ್ರಿಯೆಯಲ್ಲಿ ಪ್ರಕೃತಿಗೆ ಹಾನಿ ಮಾಡಿದರೆ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗುತ್ತದೆ.

ಮನುಷ್ಯನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸುವುದು ಉತ್ತಮ. ಮೋಟೋ ಟೂರರ್ಸ್ ಮತ್ತು ಬೈಕಿಂಗ್ ಕಮ್ಯುನಿಟಿ ಫೆಡರೇಶನ್ ತಮ್ಮ ವಾರ್ಷಿಕ ಉಪಕ್ರಮವಾದ ಸೇವ್ ಅರ್ಥ್ ರೈಡ್ (SER) ನ್ನು ಆಗಸ್ಟ್ 6 ರಂದು ದೇವನಹಳ್ಳಿಯ ಶ್ರೀ ರಕುಮ್ ಬ್ಲೈಂಡ್ ಶಾಲೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಆಯೋಜಿಸಿದರು. 

ಮಾಜಿ ಪೊಲೀಸ್ ಅಧಿಕಾರಿ, ರಾಜಕಾರಣಿ ಭಾಸ್ಕರ್ ರಾವ್, ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಮತ್ತು ಅಧುರಾ ಮತ್ತು ದಿ ನೈಟ್ ಮ್ಯಾನೇಜರ್ ಸರಣಿಯಲ್ಲಿ ಕಾಣಿಸಿಕೊಂಡಿರುವ ಬಾಲ ನಟ ಶೆರ್ನಿಕ್ ಅರೋರಾ ಭಾಗವಹಿಸಿದ್ದರು. 

ಏನಿದು SER?: 2019ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇಂದು ದೇಶದ 85ಕ್ಕೂ ಹೆಚ್ಚು ನಗರಗಳಿಗೆ ಮತ್ತು ಮಲೇಷ್ಯಾ ಮತ್ತು ಸಿಂಗಾಪುರದಂತಹ ಇತರ ದೇಶಗಳಿಗೆ ವಿಸ್ತರಿಸಿದೆ. ಪರಿಸರಕ್ಕೆ ಮರಳಿ ಕೊಡುವ ಪ್ರಯತ್ನ ಇದಾಗಿದೆ ಎನ್ನುತ್ತಾರೆ ಫೆಡರೇಶನ್ ಸಂಸ್ಥಾಪಕ ಆಶಿಶ್ ಸಿಂಗ್. ಬೈಕಿಂಗ್ ಸಮುದಾಯವಾಗಿ ನಾವು ಸಾಕಷ್ಟು ವಿವಿಧ ಸ್ಥಳಗಳಿಗೆ ಹೋಗುತ್ತೇವೆ ಎನ್ನುತ್ತಾರೆ. 

ಏನಿದು ಕಾರ್ಯಕ್ರಮ: ಬೈಕ್ ಮೂಲಕ ಟ್ರಿಪ್, ಪ್ರವಾಸ ಹೋದ ಕಡೆಯೆಲ್ಲಾ ಇದರ ಕಾರ್ಯಕರ್ತರು ಗಿಡ ನೆಡುತ್ತಾರೆ. ಗಿಡ ನೆಡುವ ಬಗ್ಗೆ ಪರಿಸರ ರಕ್ಷಣೆ ಬಗ್ಗೆ ಜಾಗೃತರಾಗಿರುವುದು ನಮ್ಮ ಕರ್ತವ್ಯ. ಭಾರತ ದೇಶವೊಂದರಲ್ಲಿಯೇ 300 ಕ್ಕೂ ಹೆಚ್ಚು ಮೋಟಾರ್‌ಸೈಕಲ್ ಕ್ಲಬ್‌ಗಳು ಪ್ರತಿ ವರ್ಷ ಆಗಸ್ಟ್‌ನಲ್ಲಿ SER ನಲ್ಲಿ ಭಾಗವಹಿಸುತ್ತವೆ. ಗಿಡ ನೆಡಲು ಮಳೆಗಾಲ ಉತ್ತಮವಾಗಿರುವುದರಿಂದ ನಾವು ಮಳೆಗಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ. 

ಸಮುದಾಯವು ಸುಮಾರು 700ರಿಂದ  ಸಾವಿರ ಗಿಡಗಳನ್ನು ನೆಡಲು ಯೋಜಿಸುತ್ತಿದೆ. ಬೆಂಗಳೂರು ಹೊರವಲಯದಲ್ಲಿ ಆರು ಎಕರೆ ಸರ್ಕಾರಿ ಭೂಮಿಯಲ್ಲಿ ಗಿಡ ನೆಟ್ಟಿದ್ದೇವೆ. ಒಂದು ಭಾಗವಾಗಿದ್ದು ಅದು ಸಂಪೂರ್ಣ ಬಂಜರು. ಹತ್ತಿರದ ಗ್ರಾಮಸ್ಥರು ಕೆಲವು ಗಿಡಗಳನ್ನು ನೆಟ್ಟಿದ್ದರು. ಈಗ ನಾವು ಅದನ್ನು ಮುಂದುವರಿಸುತ್ತೇವೆ. ಮುಂದಿನ ಮೂರು ವರ್ಷಗಳ ಕಾಲ ನಾವು ಸಸಿಗಳನ್ನು ನೋಡಿಕೊಳ್ಳುತ್ತೇವೆ ಎಂದು ನಾವು ಅರಣ್ಯ ಇಲಾಖೆಯೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಸಿಂಗ್ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್, ನದಿ ಪಾತ್ರದಲ್ಲಿ ಕಟ್ಟೆಚ್ಚರ

ನಿನ್ನ ತಲೆ ಕಡಿತೀವಿ: ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ, ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

2ನೇ ಟೆಸ್ಟ್ ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ; ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ WTC ಅಂಕಪಟ್ಟಿಯಲ್ಲಿ ಮಹತ್ತರ ಬದಲಾವಣೆ!