‘ಮಾ ಸಂತೋಷಿ’ ಭವ್ಯ ದೇಗುಲ 
ವಿಶೇಷ

ಒಡಿಶಾ: ಪತ್ನಿಯ ಆಸೆ ಈಡೇರಿಸಲು ಬರೋಬ್ಬರಿ 7 ಕೋಟಿ ರೂ. ದೇಗುಲ ಕಟ್ಟಿಸಿದ ಪತಿ!

ಒಡಿಶಾದ ಉದ್ಯಮಿಯೊಬ್ಬರು ಪತ್ನಿಯ ಬಯಕೆ ಈಡೇರಿಸುವ ಸಲುವಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿದ ಅಪರೂಪದ ಘಟನೆ ವರದಿಯಾಗಿದೆ.

ಜೈಪುರ: ಒಡಿಶಾದ ಉದ್ಯಮಿಯೊಬ್ಬರು ಪತ್ನಿಯ ಬಯಕೆ ಈಡೇರಿಸುವ ಸಲುವಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿದ ಅಪರೂಪದ ಘಟನೆ ವರದಿಯಾಗಿದೆ.

ಪ್ರಸ್ತುತ ಹೈದರಾಬಾದ್​ನಲ್ಲಿ ನೆಲೆಸಿರುವ ಖೇತ್ರಬಾಸಿ ಲೆಂಕಾ ಎಂಬ ಉದ್ಯಮಿ ತಮ್ಮ ಪತ್ನಿ ವೈಜಯಂತಿ ಅವರಿಗಾಗಿ ಒಡಿಶಾದ ಜೈಪುರ ಜಿಲ್ಲೆಯ ಬಿಂಝಾರ್​ಪುರದ ಚಿಕಾನ ಗ್ರಾಮದಲ್ಲಿ ದೇವಿ ‘ಮಾ ಸಂತೋಷಿ’ ಭವ್ಯ ದೇಗುಲ ನಿರ್ಮಾಣವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ವೈಜಯಂತಿ ಅವರು ದೇವಿ ‘ಮಾ ಸಂತೋಶಿ’ಯ ಪರಮ ಭಕ್ತೆಯಾಗಿದ್ದಾರೆ. ಅವರು ತಮ್ಮ ತವರು ಗ್ರಾಮದಲ್ಲಿ ‘ಮಾ ಸಂತೋಷಿ’ ದೇಗುಲ ನಿರ್ಮಿಸಬೇಕೆಂಬ ಇಚ್ಛೆ ಹೊಂದಿದ್ದರು. ಹೀಗಾಗಿ ಲೆಂಕಾ ಅವರು ದೇಗುಲ ನಿರ್ಮಿಸಿದ್ದಾರೆ ಎಂದು ಒಡಿಶಾ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣ ಭಾರತದ ವಾಸ್ತುಶಿಲ್ಪದ ಪ್ರಕಾರ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಮಾ ಸಂತೋಷಿ ದೇವಸ್ಥಾನದಲ್ಲಿ ಶಿವ, ಗಣಪತಿ, ಹನುಮಂತ ಹಾಗೂ ನವಗ್ರಹಗಳನ್ನೂ ಪೂಜಿಸಲು ಅವಕಾಶ ಮಾಡಿಕೊಡಲಾಗಿದೆ.

2008ರಲ್ಲಿ ಆರಂಭವಾಗಿದ್ದ ದೇವಸ್ಥಾನ ನಿರ್ಮಾಣ ಕಾರ್ಯ ಇತ್ತೀಚೆಗೆ ಪೂರ್ಣಗೊಂಡಿದ್ದು, ದಂಪತಿಯ ಆಶಯದಂತೆ ಉದ್ಘಾಟನೆಯೂ ಆಗಿದೆ. ಸುಂದರವಾದ ಕೆತ್ತನೆ ಮತ್ತು ವಿನ್ಯಾಸ ಹೊಂದಿರುವ ದೇಗುಲವು 86 ಅಡಿಗಳಷ್ಟು ವಿಸ್ತಾರವಾದ ಪ್ರವೇಶದ್ವಾರವನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT