ದೆಹಲಿ ಮೂಲದ ಅರ್ಚಕಿ ನೀರು ಶರ್ಮಾ  
ವಿಶೇಷ

'ಪುರುಷರಿಗಿಂತ ನಾವೇನು ಕಮ್ಮಿ, ನಾವೇಕೆ ಮಂತ್ರ ಪಠಿಸಬಾರದು?': 2 ವರ್ಷದಲ್ಲಿ 25 ಜೋಡಿಗೆ ಮದುವೆ ಮಾಡಿಸಿದ ದೆಹಲಿಯ ಅರ್ಚಕಿ

ಅರ್ಥಶಾಸ್ತ್ರದಲ್ಲಿ ಎರಡು ಪದವಿ ಪಡೆದ ದೆಹಲಿ ಮೂಲದ ಮಹಿಳೆ ನೀರು ಶರ್ಮಾ ಅವರು ವಿವಾಹ ಸಮಾರಂಭಗಳನ್ನು ನಿರ್ವಹಿಸುವ ಮೂಲಕ ನಮ್ಮ ಸಮಾಜದಲ್ಲಿರುವ ಪಿತೃಪ್ರಭುತ್ವದ ಸಂಕೋಲೆಗಳನ್ನು ಮುರಿದಿದ್ದಾರೆ.

ನವದೆಹಲಿ: ಮದುವೆ ಎಂದಾಗ ನಮ್ಮ ಕಣ್ಣ ಮುಂದೆ ಏನು ಚಿತ್ರಣ ಬರುತ್ತದೆ ಹೇಳಿ? ಸಾಂಪ್ರದಾಯಿಕ ಉಡುಪಿನಲ್ಲಿ ಆಭರಣ ಧರಿಸಿ ಶೃಂಗಾರ ಮಾಡಿಕೊಂಡು ಕುಳಿತಿರುವ ವಧು, ಪೇಟ, ಪಂಚೆ, ಶರ್ಟ್ ಧರಿಸಿ ಕಂಗೊಳಿಸುತ್ತಿರುವ ವರ, ಅಲಂಕಾರಗೊಂಡ ಮದುವೆ ಮಂಟಪ, ಸುತ್ತಲೂ ಅತಿಥಿಗಳು, ಜನ, ಪುರೋಹಿತರ ಮಂತ್ರೋದ್ಘಾರ ಮೊಳಗುತ್ತಿರುವುದು, ನೆಂಟರಿಷ್ಟರು, ಬಂಧುಬಳಗ ಹೀಗೆ ಜನರು ಓಡಾಡುತ್ತಿರುವ ದೃಶ್ಯ ಕಣ್ಣಮುಂದೆ ಬರುತ್ತದೆ.

ಆದರೆ ಇಲ್ಲಿ ಪುರುಷ ಪುರೋಹಿತರು ಮುಂದೆ ಕುಳಿತು ಮದುವೆ ಶಾಸ್ತ್ರಗಳನ್ನು ಮಾಡುವ ಬದಲು ಅರ್ಚಕಿಯ ಮುಂದಾಳತ್ವದಲ್ಲಿ ಮದುವೆ ಕಾರ್ಯಕ್ರಮ ನೆರವೇರುತ್ತಿದೆ.

ಅರ್ಥಶಾಸ್ತ್ರದಲ್ಲಿ ಎರಡು ಪದವಿ ಪಡೆದ ದೆಹಲಿ ಮೂಲದ ಮಹಿಳೆ ನೀರು ಶರ್ಮಾ ಅವರು ವಿವಾಹ ಸಮಾರಂಭಗಳನ್ನು ನಿರ್ವಹಿಸುವ ಮೂಲಕ ನಮ್ಮ ಸಮಾಜದಲ್ಲಿರುವ ಪಿತೃಪ್ರಭುತ್ವದ ಸಂಕೋಲೆಗಳನ್ನು ಮುರಿದಿದ್ದಾರೆ. ಪುರುಷರು ಮಾತ್ರ ಪುರೋಹಿತರಾಗಿರಬೇಕೆ ಮಹಿಳೆಯರು ಆಗಬಾರದೆ ಎಂದು ಅವರು ಪ್ರಶ್ನಿಸಿದರು.

ಭಕ್ತಿಯಲ್ಲಿ ಆಳವಾಗಿ ಬೇರೂರಿರುವ ಶ್ರೀಮಂತ ಕುಟುಂಬದಲ್ಲಿ ಜನಿಸಿದ ನೀರು ಶರ್ಮಾ ಚಿಕ್ಕ ವಯಸ್ಸಿನಿಂದಲೂ ಧರ್ಮದತ್ತ ಒಲವು ತೋರುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ನಾನು ದೈವತ್ವದತ್ತ ಸೆಳೆಯಲ್ಪಟ್ಟಿದ್ದೇನೆ, ನನ್ನ ಅಜ್ಜ ದೇವಾಲಯದಲ್ಲಿ ನಾನು ಸೇವಾ ಮಾಡಲು ಪ್ರಾರಂಭಿಸಿದಾಗ ಅದು ಸ್ಪಷ್ಟವಾಯಿತು. ದೇವಾಲಯದಲ್ಲಿನ ಆ ಮುಂಚಿನ ಅನುಭವಗಳು ನನ್ನ ಹಾದಿಯನ್ನು ರೂಪಿಸಿದವು. ನಮ್ಮ ಪರಂಪರೆಗೆ ನನ್ನನ್ನು ಸಂಪರ್ಕಿಸಿದ ಪವಿತ್ರ ಆಚರಣೆಗಳ ಬಗ್ಗೆ ಆಳವಾದ ಗೌರವವನ್ನು ನನ್ನಲ್ಲಿ ಹುಟ್ಟುಹಾಕಿತು ಎಂದರು.

ಕಳೆದ ಎರಡು ವರ್ಷಗಳಲ್ಲಿ, ಅವರು ಭಾರತದಾದ್ಯಂತ 25 ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ದೆಹಲಿಯಲ್ಲಿ 4ಕ್ಕೂ ಹೆಚ್ಚು ಮದುವೆ ಮಾಡಿಸಿದ್ದಾರೆ 44 ವರ್ಷದ ನೀರು ಶರ್ಮಾ.

ಆರಂಭದಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಮತ್ತು ಸಂಸ್ಕೃತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಭಾರತೀಯರು ಮಾತ್ರ ವಿವಾಹಗಳಿಗಾಗಿ ನನ್ನನ್ನು ನೇಮಿಸಿಕೊಳ್ಳಬಹುದು ಎಂದು ಭಾವಿಸಿದ್ದೆ. ಆದರೆ ನಂತರ, ದೇವರ ಅನುಗ್ರಹದಿಂದ, ಭಾರತದಲ್ಲಿ ಬಹಳಷ್ಟು ಜನರು ನನ್ನ ಪೌರೋಹಿತ್ಯವನ್ನು ಇಷ್ಟಪಡಲು ಪ್ರಾರಂಭಿಸಿದರು ಎಂದು ನೀರು ಮಾರ್ನಿಂಗ್ ಸ್ಟ್ಯಾಂಡರ್ಡ್‌ ಪತ್ರಿಕೆ ಪ್ರತಿನಿಧಿಗೆ ಹೇಳಿದ್ದಾರೆ.

ಅರ್ಥಶಾಸ್ತ್ರದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿರುವ ನೀರು ಶರ್ಮಾ ದೆಹಲಿ ವಿಶ್ವವಿದ್ಯಾಲಯದಿಂದ ಮತ್ತು ಇನ್ನೊಂದು ಆಂಧ್ರ ವಿಶ್ವವಿದ್ಯಾಲಯದಿಂದ ಪಡೆದಿದ್ದು, ಸಾಮಾನ್ಯ ಪುರೋಹಿತರಿಗಿಂತ ಭಿನ್ನವಾಗಿರಲು ಯಾವಾಗಲೂ ಪ್ರಯತ್ನಿಸುತ್ತಾರೆ.

ಜನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಮಂತ್ರಗಳನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಸಂಗೀತದ ಮೂಲಕ ತನ್ನ ಭಕ್ತಿಯನ್ನು ವ್ಯಕ್ತಪಡಿಸುತ್ತಾನೆ. ಭಕ್ತಿ ಗಾಯಕಳಾಗಿ, ಪವಿತ್ರ ಪಠಣಗಳು, ಭಜನೆಗಳು ಮತ್ತು ಮಂತ್ರಗಳ ಶಕ್ತಿಯನ್ನು ಹಂಚಿಕೊಳ್ಳುವಲ್ಲಿ ನನಗೆ ಅಪಾರ ಸಂತೋಷವಿದೆ. ಸಂಗೀತವು ಯಾವಾಗಲೂ ನನ್ನ ಸತ್ಸಂಗ ಮೂಲಕ ದೈವಕ್ಕೆ ಸೇತುವೆಯಾಗಿದೆ ಎಂದರು.

ನನ್ನ ಜೀವನವು ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯ ಮಿಶ್ರಣವಾಗಿದ್ದು, ಯೋಗ, ಪವಿತ್ರ ಸಂಗೀತ ಮತ್ತು ವೈದಿಕ ಆಚರಣೆಗಳ ಅಭ್ಯಾಸಗಳ ಮೂಲಕ ಒಟ್ಟಿಗೆ ನೇಯಲಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT