ಯೋಗ ನಿರತ ವಿಯೆಟ್ನಾಂ ಜನರು  
ವಿಶೇಷ

ಹುಬ್ಬಳ್ಳಿಯಿಂದ ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದವರೆಗೆ ಸೂರ್ಯ ನಮಸ್ಕಾರ 'ಪ್ರಯಾಣ'

ಯೋಗ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ರಾಜೀವ್ ಕುಮಾರ್ ಸೋಮರಡ್ಡಿ, ಸಂತೋಷ್ ಉಮಚಗಿ, ಮುತ್ತಪ್ಪ ಉಮಚಗಿ, ಈರಣ್ಣ ಮಟಾದ್, ದೇವರಾಜ್ ದೇವಾಡಿಗ, ಅಪ್ಪು ಪರಂಗಿ ಮತ್ತು ವೆಂಕಟೇಶ್ ಕಳೆದ 10 ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ.

ಹುಬ್ಬಳ್ಳಿ: ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ, ಆಸನದಿಂದ ಆಸನ ಎಂದು ಸದ್ದಿಲ್ಲದೆ ಕ್ರಾಂತಿ ರೂಪುಗೊಳ್ಳುತ್ತಿದೆ. ಕಳೆದ 10 ವರ್ಷಗಳಿಂದ ಹುಬ್ಬಳ್ಳಿಯ ಏಳು ಜನರ ಗುಂಪು ಯೋಗದ ಸಂದೇಶವನ್ನು ಅಲ್ಲಿ ಪಸರಿಸುತ್ತಿದ್ದಾರೆ.

ಯೋಗ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ರಾಜೀವ್ ಕುಮಾರ್ ಸೋಮರಡ್ಡಿ, ಸಂತೋಷ್ ಉಮಚಗಿ, ಮುತ್ತಪ್ಪ ಉಮಚಗಿ, ಈರಣ್ಣ ಮಟಾದ್, ದೇವರಾಜ್ ದೇವಾಡಿಗ, ಅಪ್ಪು ಪರಂಗಿ ಮತ್ತು ವೆಂಕಟೇಶ್ ಕಳೆದ 10 ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ. ಅವರು ಹೆಚ್ಚಾಗಿ ಹೋ ಚಿ ಮಿನ್ಹ್ ನಗರ ಮತ್ತು ಬಿಯೆನ್ ಹೋವಾದಲ್ಲಿ ಕಲಿಸುತ್ತಾರೆ.

ನಾವು ಇಲ್ಲಿ 10 ವರ್ಷಗಳಿಂದ ಯೋಗ ಕಲಿಸುತ್ತಿದ್ದೇವೆ. ಇದಕ್ಕೆ ಇಲ್ಲಿನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಇಲ್ಲಿ ನಿಯಮಿತವಾಗಿ ಯೋಗ ಮಾಡುತ್ತಾರೆ ಎಂದು ಸೋಮರಡ್ಡಿ ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನದಂದು, ಹುಬ್ಬಳ್ಳಿ ಮಾರ್ಗದರ್ಶಕರು ಮೋಡಿಮಾಡಿದ ಪ್ರೇಕ್ಷಕರ ಮುಂದೆ ಯೋಗವನ್ನು ಪ್ರದರ್ಶಿಸಿದರು. ಹೋ ಚಿ ಮಿನ್ಹ್ ನಗರದಲ್ಲಿ ವಾಕಥಾನ್ ನಡೆಯಿತು. ಭಾಗವಹಿಸುವವರು ಬೆಳಗ್ಗೆ ಮತ್ತು ಸಂಜೆ 100 ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸಿದರು.

ಯೋಗ ನಿರತ ವಿಯೆಟ್ನಾಂ ಜನರು

ಹುಬ್ಬಳ್ಳಿ ಬಳಿಯ ಕುಂದಗೋಳದ ಸೋಮರಡ್ಡಿಯವರು ತಮ್ಮ ಪ್ರೌಢಶಾಲಾ ದಿನಗಳಲ್ಲಿ ಶಿವಾನಂದ ಮಠದಲ್ಲಿ ಯೋಗ ಕಲಿತಿದ್ದರು. ಒಂದು ಕಾಲದಲ್ಲಿ ಅವರ ಉತ್ಸಾಹವಾಗಿದ್ದ ಯೋಗ ಈಗ ಅವರ ವೃತ್ತಿಯಾಗಿದೆ.

ವಿಯೆಟ್ನಾಂನ ಜನರು ಯೋಗವನ್ನು ಪ್ರೀತಿಸುತ್ತಾರೆ. ಅವರಲ್ಲಿ ಸುಮಾರು ಶೇ. 90 ರಷ್ಟು ಜನರು ನಿಯಮಿತವಾಗಿ ಯೋಗ ಮಾಡುತ್ತಾರೆ ಎಂದು ಹೇಳಿದ ಸೋಮರಡ್ಡಿ, ವಿಯೆಟ್ನಾಂ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು. ಇಲ್ಲಿ ಜನರು ಆರೋಗ್ಯ ಪ್ರಜ್ಞೆ ಹೊಂದಿದ್ದಾರೆ, ಅವರ ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳುತ್ತಾರೆ ಎಂದರು.

ಯೋಗದ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವುದು ಅಗತ್ಯವಾಗಿತ್ತು. ಇದು ಇಂದಿನ ಪೀಳಿಗೆಗೆ ಅಗತ್ಯವಾಗಿದೆ ಎಂದು ಹೇಳಿದರು. ವಿವಿಧ ವರ್ಗದ ಜನರು, ಎಂಜಿನಿಯರ್‌ಗಳು, ವೈದ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಲ್ಲಿ ಯೋಗ ಕಲಿತಿದ್ದಾರೆ. ನಾನು ವಿಯೆಟ್ನಾಂನಲ್ಲಿ ಆಸ್ಟ್ರೇಲಿಯಾ, ಯುಎಸ್ ಮತ್ತು ರಷ್ಯಾದಿಂದ ವಲಸೆ ಬಂದವರಿಗೆ ಯೋಗ ಕಲಿಸಿದೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಬಂಧನ!

Asia Cup Rising Stars T20: ಓಮನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಶಬರಿಮಲೆಯಲ್ಲಿ ಜನದಟ್ಟಣೆ: ಎರಡು ದಿನದಲ್ಲಿ 2 ಲಕ್ಷ ಅಯ್ಯಪ್ಪ ಭಕ್ತರ ಭೇಟಿ; ಮಹಿಳಾ ಭಕ್ತೆ ಸಾವು!

ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅಮೆರಿಕದಿಂದ ಗಡೀಪಾರು!

POCSO case: ಯಡಿಯೂರಪ್ಪಗೆ ಸಂಕಷ್ಟ, ಡಿ. 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

SCROLL FOR NEXT