2015ರ ವಿಶ್ವಕಪ್ ಪ್ರಶಸ್ತಿಯೊಂದಿಗೆ ವೀರೇಂದ್ರ ಸೆಹವಾಗ್ 
ಕ್ರೀಡೆ

ಭಾರತಕ್ಕೆ ಬಂದ ವಿಶ್ವಕಪ್ ಟ್ರೋಫಿ

ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ...

ಮುಂಬೈ: ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಟ್ರೋಫಿ, ವಿಶ್ವದಾದ್ಯಂತ ಪರ್ಯಟನೆ ನಡೆಸುತ್ತಿದೆ. ಈಗ ಭಾರತಕ್ಕೆ ಆಗಮಿಸಿರುವ ಟ್ರೋಫಿ 6 ದಿನಗಳ ಕಾಲ ಭಾರತದಲ್ಲಿ ಪ್ರವಾಸ ಮಾಡಲಿದೆ.

ಮಂಗಳವಾರ ಮುಂಬೈಗೆ ಆಗಮಿಸಿರುವ ವಿಶ್ವಕಪ್ ಟ್ರೋಫಿ ಪ್ರತಿ ದಿನ ದೇಶದ ಪ್ರಮುಖ ನಗರಗಳಿಗೆ ತೆರಳಲಿದೆ. ಈ ಟ್ರೋಫಿ ಕ್ರಮವಾಗಿ ಬುಧವಾರ ಹೈದರಾಬಾದ್, ಗುರುವಾರ ಬೆಂಗಳೂರು, ಶುಕ್ರವಾರ ನವದೆಹಲಿ, ಶನಿವಾರ ಜಲಂದರ್ ಮತ್ತು ಭಾನುವಾರ ಆಹ್ಮದಾಬಾದ್‌ಗೆ ತೆರಳಲಿದೆ.

ಮನಿಗ್ರಾಮ್ ಕಂಪನಿ ನೇತೃತ್ವದಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಮಂಗಳವಾರ ಮುಂಬೈನ ಹೈ ಸ್ಟ್ರೀಟ್ ಫೊನಿಕ್ಸ್ ಮಾಲ್‌ಗೆ ತರಲಾಗಿತ್ತು. ಈ ವೇಳೆ ಭಾರತದ ಸ್ಫೋಟಕ ಬ್ಯಾಟ್ಸ್‌ಮಾನ್ ವೀರೇಂದ್ರ ಸೆಹವಾಗ್ ಉಪಸ್ಥಿತರಿದ್ದರು.

ಕ್ರಿಕೆಟ್ ಪ್ರೇಮಿಗಳು ಈ ಪ್ರತಿಷ್ಠಿತ ಟ್ರೋಫಿಯನ್ನು ಕಣ್ತುಂಬಿಕೊಳ್ಳಲು ಉತ್ತಮ ಅವಕಾಶವಾಗಿದ್ದು, ಇದನ್ನು ನೋಡಲು ಸಾಕಷ್ಟು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.

ಕ್ರಿಕೆಟ್ ಪ್ರಿಯರು ಈ ಆಕರ್ಷಕ ಟ್ರೋಫಿಯನ್ನು ನೋಡಲು ಇದೊಂದು ಉತ್ತಮ ಅವಕಾಶ. ಐಸಿಸಿ ಹಾಗೂ ಮನಿಗ್ರಾಮ್ ಭಾರತದಲ್ಲಿ ವಿಶ್ವಕಪ್ ಟ್ರೋಫಿ ಪ್ರವಾಸವನ್ನು ಆಯೋಜಿಸಲು ಉತ್ಸುಕವಾಗಿದೆ. ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಸಂಚರಿಸಲಿದ್ದು, ಅಭಿಮಾನಿಗಳ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸವಿದೆ ಎಂದು ಮನಿಗ್ರಾಮ್‌ನ ದಕ್ಷಿಣ ಏಷ್ಯಾದ ಸ್ಥಳೀಯ ಹಿರಿಯ ನಿರ್ದೇಶಕ ಕೌಶಿಕ್ ರಾಯ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT