2015ರ ವಿಶ್ವಕಪ್ ಪ್ರಶಸ್ತಿಯೊಂದಿಗೆ ವೀರೇಂದ್ರ ಸೆಹವಾಗ್ 
ಕ್ರೀಡೆ

ಭಾರತಕ್ಕೆ ಬಂದ ವಿಶ್ವಕಪ್ ಟ್ರೋಫಿ

ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ...

ಮುಂಬೈ: ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಟ್ರೋಫಿ, ವಿಶ್ವದಾದ್ಯಂತ ಪರ್ಯಟನೆ ನಡೆಸುತ್ತಿದೆ. ಈಗ ಭಾರತಕ್ಕೆ ಆಗಮಿಸಿರುವ ಟ್ರೋಫಿ 6 ದಿನಗಳ ಕಾಲ ಭಾರತದಲ್ಲಿ ಪ್ರವಾಸ ಮಾಡಲಿದೆ.

ಮಂಗಳವಾರ ಮುಂಬೈಗೆ ಆಗಮಿಸಿರುವ ವಿಶ್ವಕಪ್ ಟ್ರೋಫಿ ಪ್ರತಿ ದಿನ ದೇಶದ ಪ್ರಮುಖ ನಗರಗಳಿಗೆ ತೆರಳಲಿದೆ. ಈ ಟ್ರೋಫಿ ಕ್ರಮವಾಗಿ ಬುಧವಾರ ಹೈದರಾಬಾದ್, ಗುರುವಾರ ಬೆಂಗಳೂರು, ಶುಕ್ರವಾರ ನವದೆಹಲಿ, ಶನಿವಾರ ಜಲಂದರ್ ಮತ್ತು ಭಾನುವಾರ ಆಹ್ಮದಾಬಾದ್‌ಗೆ ತೆರಳಲಿದೆ.

ಮನಿಗ್ರಾಮ್ ಕಂಪನಿ ನೇತೃತ್ವದಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಮಂಗಳವಾರ ಮುಂಬೈನ ಹೈ ಸ್ಟ್ರೀಟ್ ಫೊನಿಕ್ಸ್ ಮಾಲ್‌ಗೆ ತರಲಾಗಿತ್ತು. ಈ ವೇಳೆ ಭಾರತದ ಸ್ಫೋಟಕ ಬ್ಯಾಟ್ಸ್‌ಮಾನ್ ವೀರೇಂದ್ರ ಸೆಹವಾಗ್ ಉಪಸ್ಥಿತರಿದ್ದರು.

ಕ್ರಿಕೆಟ್ ಪ್ರೇಮಿಗಳು ಈ ಪ್ರತಿಷ್ಠಿತ ಟ್ರೋಫಿಯನ್ನು ಕಣ್ತುಂಬಿಕೊಳ್ಳಲು ಉತ್ತಮ ಅವಕಾಶವಾಗಿದ್ದು, ಇದನ್ನು ನೋಡಲು ಸಾಕಷ್ಟು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.

ಕ್ರಿಕೆಟ್ ಪ್ರಿಯರು ಈ ಆಕರ್ಷಕ ಟ್ರೋಫಿಯನ್ನು ನೋಡಲು ಇದೊಂದು ಉತ್ತಮ ಅವಕಾಶ. ಐಸಿಸಿ ಹಾಗೂ ಮನಿಗ್ರಾಮ್ ಭಾರತದಲ್ಲಿ ವಿಶ್ವಕಪ್ ಟ್ರೋಫಿ ಪ್ರವಾಸವನ್ನು ಆಯೋಜಿಸಲು ಉತ್ಸುಕವಾಗಿದೆ. ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಸಂಚರಿಸಲಿದ್ದು, ಅಭಿಮಾನಿಗಳ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸವಿದೆ ಎಂದು ಮನಿಗ್ರಾಮ್‌ನ ದಕ್ಷಿಣ ಏಷ್ಯಾದ ಸ್ಥಳೀಯ ಹಿರಿಯ ನಿರ್ದೇಶಕ ಕೌಶಿಕ್ ರಾಯ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT