ಸರಿತಾ ದೇವಿ 
ಕ್ರೀಡೆ

ಆಜೀವ ನಿಷೇಧದಿಂದ ಸರಿತಾ ಪಾರು?

ಬಾಕ್ಸರ್ ಸರಿತಾ ದೇವಿ ಅವರ ಮೇಲೆ ತೂಗುತ್ತಿದ್ದ ಆಜೀವ ನಿಷೇಧದ...

ನವದೆಹಲಿ : ಬಾಕ್ಸರ್ ಸರಿತಾ ದೇವಿ ಅವರ ಮೇಲೆ ತೂಗುತ್ತಿದ್ದ ಆಜೀವ ನಿಷೇಧದ ಕರಿ ನೆರಳು ದೂರಾಗುವ ಲಕ್ಷಣಗಳು ಕಾಣಿಸಿವೆ. ಏಷ್ಯನ್ ಗೇಮ್ಸ್ ಪದಕ ಹಿಂದಿರುಗಿಸಿದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ (ಎಐಬಿಎ) ಸರಿತಾ ಮೇಲೆ ಆಜೀವ ನಿಷೇಧ ಹೇರುವುದಾಗಿ ಹೇಳಿತ್ತು. ಆದರೆ, ಸರಿತಾ ಅವರ ಮೇಲೆ ಕೆಲವು ಕಾಲಾವಧಿಯವರೆಗೆ ಅಮಾನತು ಶಿಕ್ಷೆ ವಿಧಿಸಬಹುದು ಎಂದು ಬಾಕ್ಸಿಂಗ್ ಇಂಡಿಯಾದ ಕೆಲ ಅಧಿಕಾರಿಗಳು ಸುಳಿವು ಕೊಟ್ಟಿದ್ದಾರೆ. ಸರಿತಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಐಬಿಎ ಮನವೊಲಿಸಲು, ಬಾಕ್ಸಿಂಗ್ ಇಂಡಿಯಾ ಶ್ರಮಿಸಿತ್ತು. ಈ ಹಿನ್ನೆಲೆಯಲ್ಲಿ , ಎಐಬಿಎ ಸರಿತಾ ಬಗ್ಗೆ ಮೃದು ಧೋರಣೆ ತೋರಿದೆ ಎನ್ನಲಾಗಿದೆ. ಹಾಗೊಂದು ವೇಳೆ , ಸರಿತಾ ಅವರ ಕ್ರೀಡಾ ಜೀವನಕ್ಕೆ ಜೀವದಾನ ಸಿಕ್ಕರೆ, ಆಕೆಯ ಪರವಾಗಿ ದನಿಯೆತ್ತಿದ್ದ ಸಚಿನ್ ತೆಂಡೂಲ್ಕರ್, ವಿಜೇಂದರ್ ಸಿಂಗ್, ಮೇರಿಕೋಮ್ ಅವರ ವಾದಕ್ಕೂ ಜಯ ಸಿಕ್ಕಂತಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT