ಮಿಥಾಲಿ ರಾಜ್ ಬ್ಯಾಟಿಂಗ್ (ಸಂಗ್ರಹ ಚಿತ್ರ) 
ಕ್ರೀಡೆ

ಹರಿಣಗಳ ಬೇಟೆಯಾಡಿದ ಭಾರತದ ವನಿತೆಯರು

ಭಾರತ ತಂಡದ ಆಟಗಾರ್ತಿಯರು ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಏಕೈಕ ಮಹಿಳಾ ಟಿ-20 ಪಂದ್ಯದಲ್ಲಿ...

ಬೆಂಗಳೂರು: ಭಾರತ ತಂಡದ ಆಟಗಾರ್ತಿಯರು ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಏಕೈಕ ಮಹಿಳಾ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 16 ರನ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಮಹಿಳೆಯರು 20 ಓವರುಗಳಲ್ಲಿ  5 ವಿಕೆಟ್ ನಷ್ಟಕ್ಕೆ 146 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದರು.

ಈ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರು 20 ಓವರುಗಳಲ್ಲಿ 9 ವಿಕೆಟ್  ನಷ್ಟಕ್ಕೆ 130 ರನ್  ಗಳಿಸಲಷ್ಟೇ ಶಕ್ತರಾದರು.
ಆರಂಭಿಕ ಆಟಗಾರ್ತಿ ಡ್ಯಾನ್ ವ್ಯಾನ್ ನೀಕರ್ಕ್ 47 ಎಸೆತಗಳಲ್ಲಿ 5 ಬೌಂಡರಿಗಳಿದ್ದ 46 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಾರಿಜಾನೆ ಕಪ್ಪ ಕೇವಲ 16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಒಳಗೊಂಡ 33 ರನ್ ಗಳಿಸಿ ಉತ್ತಮ ಹೋರಾಟ ನಡೆಸಿದರು. ಆದರೆ, ಇತರ ಆಟಗಾರ್ತಿಯರ ವೈಫಲ್ಯದಿಂದಾಗಿ ದಕ್ಷಿಣ ಆಫ್ರಿಕಾ ವನಿತೆಯರಿಗೆ ಅಂತಿಮವಾಗಿ ಸೋಲು ಕಾದಿತ್ತು. ಪ್ರವಾಸಿ ತಂಡ 118ರಿಂದ 123ರನ್‌ಗಳಿಗೆ ತಲುಪುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದರಿಂದ ಗೆಲವಿನ ಉತ್ತಮ ಅವಕಾಶವನ್ನು ಹಾಳು ಮಾಡಿಕೊಂಡಂತಾಯಿತು.  ಭಾರತದ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪೂನಂ ಯಾದವ್ 3 ಮತ್ತು ಏಕ್ತಾ ಬಿಷ್ತ್ 2 ವಿಕೆಟ್ ಉರುಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಸ್ಮೃತಿ ಮಂಧನ ಅರ್ಧಶತಕ ಗಳಿಸಿ ಗಮನ ಸೆಳೆದರು. ಅವರು ಕೇವಲ 42 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 52 ರನ್ ಗಳಿಸಿದರು. ಉಳಿದಂತೆ, ಆರಂಭಿಕ ಆಟಗಾರ್ತಿಯಾಗಿ ಆಡಲಿಳಿದಿದ್ದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್‌ನಲ್ಲಿ ಮಿಂಚುವ ಮೂಲಕ ಕೇವಲ 31 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 40 ರನ್ ಗಳಿಸಿದರು.

ಬೆಂಗಳೂರಿನಲ್ಲಿಯೇ ನಡೆದ ಮೂರು  ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರಿಂದ ಸೋಲುಂಡಿದ್ದ ಭಾರತದ ಆಟಗಾರ್ತಿಯರು ಟಿ-20ಯಲ್ಲಿ ಮಾತ್ರ ತಮ್ಮ ಪ್ರಭುತ್ವ ಮೆರೆಯುವಲ್ಲಿ ಸಫಲರಾದರು.

ಸಂಕ್ಷಿಪ್ತ ಸ್ಕೋರ್

ಭಾರತ 20 ಓವರುಗಳಲ್ಲಿ 5 ವಿಕೆಟ್‌ಗೆ 146

(ಸ್ಮೃತಿ ಮಂಧನ 52, ಮಿಥಾಲಿ ರಾಜ್ 40, ಶಿಖಾ ಪಾಂಡೆ 23, ಸುನೆಟ್ಟೆ ಲೋಬ್ಸರ್  29ಕ್ಕೆ 2)

ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 9 ವಿಕೆಟ್  130 (ಡ್ಯಾನ್ ವ್ಯಾನ್ ನೀಕರ್ಕ್ 46, ಮಾರಿಜಾನೆ ಕಪ್ಪ 33, ಲಿಜೆಲಿ ಲೀ 19)

ಪೂನಂ ಯಾದವ್ 18ಕ್ಕೆ 3, ಏಕ್ತಾ ಬಿಷ್ತ್ 20ಕ್ಕೆ 2, ಹರ್ಮನ್ ಪ್ರೀತ್ ಕೌರ್ 24ಕ್ಕೆ 1

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT