ಸೂಪರ್ ಓವರ್‍ನಲ್ಲಿ ಕಿಂಗ್ಸ್ ಗೆ ಸೂಪರ್ ಜಯ 
ಕ್ರೀಡೆ

ಸೂಪರ್ ಓವರ್‍ನಲ್ಲಿ ಕಿಂಗ್ಸ್ ಗೆ ಸೂಪರ್ ಜಯ

ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಆದರೆ, ನಂತರದ ಸೂಪರ್ ಓವರ್‍ನ ಅದೃಷ್ಟ ಪರೀಕ್ಷೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಯಶಸ್ಸು ಕಂಡರೆ, ರಾಜಸ್ಥಾನ ರಾಯಲ್ಸ್ ಸೋಲು ಕಾಣದೇ ವಿಧಿ ಇರಲಿಲ್ಲ...

ಅಹ್ಮದಾಬಾದ್: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಆದರೆ, ನಂತರದ ಸೂಪರ್ ಓವರ್‍ನ ಅದೃಷ್ಟ ಪರೀಕ್ಷೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಯಶಸ್ಸು ಕಂಡರೆ, ರಾಜಸ್ಥಾನ ರಾಯಲ್ಸ್ ಸೋಲು ಕಾಣದೇ ವಿಧಿ  ಇರಲಿಲ್ಲ.

ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೂಪರ್ ಓವರ್‍ನಲ್ಲಿ ಮೊದಲು ಬ್ಯಾಟ್ ಮಾಡಿ 15  ರನ್‍ಗಳಿಸಿತು. ಉತ್ತರವಾಗಿ ರಾಜಸ್ಥಾನ ರಾಯಲ್ಸ್ ಮೊದಲ 3 ಎಸೆತಗಳನ್ನು ಎದುರಿಸುವಲ್ಲಿ ಕೇವಲ 6 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು  ಸೋಲನುಭವಿಸಿತು. ಇದರೊಂದಿಗೆ ಸತತ 5 ಪಂದ್ಯಗಳಿಂದ ಗೆದ್ದು ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್, ಟೂರ್ನಿಯಲ್ಲಿ ಮೊದಲ ಸೋಲಿನ ಕಹಿ  ಅನುಭವಿಸಿದಂತಾಯಿತು.
.
ಇದಕ್ಕೂ ಮುನ್ನ ನಿಗದಿತ ಓವರುಗಳಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 191  ರನ್‍ಗಳಿಸಿತ್ತು. ಉತ್ತರವಾಗಿ 192 ರನ್‍ಗಳ ಗುರಿ ಬೆಂಬತ್ತಿದ್ದ ಕಿಂಗ್ಸ್ ಪಂಜಾಬ್ ಸಹ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್‍ಗಳನ್ನೇ  ಮಾಡುವುದರೊಂದಿಗೆ ಪಂದ್ಯ ಟೈ ಆಯಿತು. ಇದಕ್ಕೆ ಮುನ್ನ ನಿಗದಿತ ಓವರುಗಳಲ್ಲಿ ಒಂದು ಹಂತದಲ್ಲಿ ಪಂಜಾಬ್ 17 ಓವರುಗಳಲ್ಲಿ 5 ವಿಕೆಟ್  ನಷ್ಟಕ್ಕೆ 152 ರನ್ ಗಳಿಸಿದಾಗ ಸೋಲುವ ಭೀತಿಯಲ್ಲಿತ್ತು. ಆದರೆ, ಡೇವಿಡ್ ಮಿಲ್ಲರ್ (54ರನ್, 30 ಎಸೆತ, 1 ಬೌಂಡರಿ, 5 ಸಿಕ್ಸರ್) ಮತ್ತು  ಇದಕ್ಕೂ ಮುನ್ನ ಅಬ್ಬರಿಸಿದ್ದ ಶಾನ್ ಮಾರ್ಶ್ (65ರನ್, 40 ಎಸೆತ, 5 ಬೌಂಡರಿ, 3 ಸಿಕ್ಸರ್) ಪಂಜಾಬ್ ಪಾಳಯದಲ್ಲಿ ಜಯದ ಆಸೆ  ಚಿಗುರಿಸಿದರು.

ಕೊನೆಯ ಓವರಿನಲ್ಲಿ ಪಂಜಾಬ್‍ಗೆ ಗೆಲ್ಲಲು 14 ರನ್‍ಗಳು ಬೇಕಿತ್ತು. ಫಾಲ್ಕನರ್ ಎಸೆದ ಈ ಓವರಿನಲ್ಲಿ ಪಟೇಲ್ 8 ಮತ್ತು ಜಾನ್ಸನ್ 5 ರನ್  ಗಳಿಸುವುದರೊಂದಿಗೆ ಪಂದ್ಯ ಟೈ ಆಯಿತು. ಅಂತಿಮ ಎಸೆತದಲ್ಲಿ ಗೆಲ್ಲಲು 5 ರನ್‍ಗಳು ಬೇಕಿದ್ದಾಗ ಪಟೇಲ್ ಬೌಂಡರಿ ಸಿಡಿಸಿದರು. ರಾಜಸ್ಥಾನಕ್ಕೆ  ಭದ್ರ ಅಡಿಪಾಯ ಹಾಕಿಕೊಟ್ಟ ರಹಾನೆ-ವ್ಯಾಟ್ಸನ್: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 6  ವಿಕೆಟ್ ನಷ್ಟಕ್ಕೆ 191 ರನ್‍ಗಳಿಸಿತು.

ಅಜಿಂಕ್ಯ ರಹಾನೆ ಮತ್ತು ನಾಯಕ ಶೇನ್ ವ್ಯಾಟ್ಸನ್ ಮೊದಲ ವಿಕೆಟ್‍ಗೆ 11.3 ಓವರುಗಳಲ್ಲಿ 95 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ  ಒದಗಿಸಿದರು. ವ್ಯಾಟ್ಸನ್ (45ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಹಾದಿಯಲ್ಲಿ ಮುಗ್ಗರಿಸಿ ವಿಕೆಟ್ ಕೈಚೆಲ್ಲಿದರೆ, ರಹಾನೆ  ಮಾತ್ರ ಸತತ ಮೂರನೇ ಅರ್ಧಶತಕ ಪೂರೈಸಿದರು. ಅವರು 54 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‍ಗಳಿದ್ದ 74 ರನ್ಗಳಿಸಿ ಪೆವಿಲಿಯನ್  ಸೇರಿದರು. ಕರುಣ್ ನಾಯರ್ 25 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಸ್ಟುವರ್ಟ್ ಬಿನ್ನಿ 4 ಎಸೆತಗಳಲ್ಲಿ ತಲಾ 1 ಬೌಂಡರಿ, 1  ಸಿಕ್ಸರ್ ನೆರವಿನಿಂದ ಅಜೇಯ 12 ರನ್‍ಗಳಿಸಿ ತಂಡದ ಮೊತ್ತ ದ್ವಿಶತಕದ ಗಡಿಯ ಸಮೀಪ ಬಂದು ನಿಲ್ಲಲು ಕಾರಣರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT