ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯ 
ಕ್ರೀಡೆ

ಪಾಟ್ನಾ, ಬಂಗಾಳ ಸಮಬಲ

ತೀವ್ರ ಹಣಾಹಣಿಯಿಂದ ಕೂಡಿದ್ದ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯ 20-20 ಅಂಕಗಳ ರೋಮಾಂಚಕ ...

ಪಟಣ: ತೀವ್ರ ಹಣಾಹಣಿಯಿಂದ ಕೂಡಿದ್ದ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯ 20-20 ಅಂಕಗಳ ರೋಮಾಂಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಹೀಗಾಗಿ, ಎರಡೂ ಪಂದ್ಯಗಳು ತಲಾ 2 ಅಂಕ ಗಳಿಸಿವೆ.
ಅಂಕಪಟ್ಟಿಯಲ್ಲಿ ಪಾಟ್ನಾ ತಂಡದ ಸ್ಥಾನ (4ನೇ) ಬದಲಾಗಿಲ್ಲ.ಆದರೆ, ಈವರೆಗೆ ಕೊನೆ ಸ್ಥಾನದಲ್ಲಿದ್ದ ಬಂಗಾಳ ಮಾತ್ರ ಒಂದು ಸ್ಥಾನದ ಏರಿಕೆ ಕಂಡಿದೆ.ಭಾನುವಾರದ ಪಂದ್ಯದಲ್ಲಿ, ಪಾಟ್ನಾ ಪರವಾಗಿ, ಸುನಿಲ್ 4 ಅಂಕಗಳಿಸಿದರೆ, ರವಿ ದಲಾಲ್ ಹಾಗೂ ಅಮಿತ್ ಹೂಡಾ ತಲಾ 3 ಅಂಕ ಪೇರಿಸಿದರು. ಅತ್ತ, ಬಂಗಾಳ ತಂಡದ ಪರವಾಗಿ ವಿನೀತ್ ಶರ್ಮಾ , ಜುಂಗ್  ಕುನ್ ಲೀ ತಲಾ 4 ಅಂಕಗಳಿಸಿದರೆ, ವೈಜಿನ್ ಮತ್ತು ಸಚಿನ್ ಖಂಬೆ ತಲಾ  2 ಅಂಕ ಪೇರಿಸಿದರು.

ಪಲ್ಟಿ ಹೊಡೆದ ಪಲ್ಟಾನ್ಸ್  : ಪಂದ್ಯದ ಆರಂಭದಿಂದ ಅಂತ್ಯದವರೆಗೂ ಅಲ್ರೌಂಡ್ ಪ್ರದರ್ಶನ  ನೀಡುತ್ತಾ, ಎದುರಾಳಿ ತಂಡದ ವಿರುದ್ಧ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಹಾಲಿ ಚಾಂಪಿಯನ್ ಜೈಪುರ ಪಿಂಕ್  ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ ನಲ್ಲಿ ಜಯ ಸಾಧಿಸಿದೆ.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್  ಕಂಡ 35-29 ಅಂಕಗಳ ಅಂತರದಲ್ಲಿ  ಪುಣೆ ಪಲ್ಟಾನ್ಸ್ ವಿರುದ್ಧ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ 2ನೇ ಬಾರಿ ಗೆಲುವಿನ ರುಚಿ ಕಂಡಿದೆ.

ಪಂದ್ಯದ ಮೊದಲಾರ್ಧದಲ್ಲಿ ರಕ್ಷಣಾತ್ಮಕ ವಿಭಾಗದ  ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಖರ್ಸ್ ತಂಡ, ಪುಣೆ ಪಲ್ಟಾನ್ಸ್   ವಿರುದ್ಧ ಉತ್ತಮ ಮುನ್ನಡೆ ಸಾಧಿಸಿತ್ತು. ಪಂದ್ಯದ ಆರಂಭದಿಂದಲೇ ಆಲ್ರೌಂಡ್ ಪ್ರದರ್ಶನ ನೀಡಿದ ನಾಯಕ ಜಸ್ವೀರ್ ಸಿಂಗ್  ಹಾಗೂ ಮತ್ತೊಬ್ಬ ರೈಡರ್ ಸೋನು ನರ್ವಾಸ್ ತಂಡಕ್ಕೆ ಮೊದಲಾರ್ಧದಲ್ಲಿ  10 ಅಂಕಗಳನ್ನು ತಂದುಕೊಟ್ಟಿದ್ದರು. ಪಂದ್ಯದ ಎರಡನೇ ಅವಧಿಯ ಆರಂಭದಲ್ಲೂ ಜೈಪುರ ಪಿಂಕ್ ಪ್ಯಾಂಥರ್ಸ್  ತಂಡ  ತನ್ನ ನಿಯಂತ್ರಣವನ್ನು ಮುಂದುವರಿಸಿತು.  ನಿವಾಲೆ 9 ಅಂಕಗಳನ್ನು ಪಡೆದುಕೊಂಡರಾದರೂ ಪಂದ್ಯವನ್ನು ಗೆಲ್ಲುವಲ್ಲಿ ನೆರವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT