ಮಾಯಾಂಕ್ ಅಗರ್ವಾಲ್ 
ಕ್ರೀಡೆ

ಮಾಯಾಂಕ್, ಚಾಂದ್ ಮಿಂಚು

ಒಂದೆಡೆ ಆಟಗಾರರ ಅನಾರೋಗ್ಯ ಹಾಗೂ ಮತ್ತೊಂದೆಡೆ ಭಾರತ ಎ ತಂಡದ ಆರಂಭಿಕ ಬ್ಯಾಟ್ಸ್‍ಮನ್ ಕರ್ನಾಟಕದ...

ಚೆನ್ನೈ: ಒಂದೆಡೆ ಆಟಗಾರರ ಅನಾರೋಗ್ಯ ಹಾಗೂ ಮತ್ತೊಂದೆಡೆ ಭಾರತ ಎ ತಂಡದ ಆರಂಭಿಕ ಬ್ಯಾಟ್ಸ್‍ಮನ್ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಅವರ ಆಕರ್ಷಕ ಶತಕದ ಪರಿಣಾಮ ದಕ್ಷಿಣ ಆಫ್ರಿಕ ಎ ತಂಡ ತ್ರೀಕೋನ ಏಕದಿನ ಸರಣಿಯಲ್ಲಿ ಭಾರತ ಎ ತಂಡ ವಿರುದ್ಧ ಸೋಲನುಭವಿಸಿದೆ. ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಭಾರತ ಎ ತಂಡ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ  ಎ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಹರಿಣಗಳ ಪಡೆ 50 ಓವರ್‍ಗಳಲ್ಲಿ 244 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 37.4 ಓವರ್‍ಗಳಲ್ಲಿ 2 ವಿಕೆಟ್‍ಗೆ 247 ರನ್ ದಾಖಲಿಸುವ ಮೂಲಕ ಭರ್ಜರಿ ಜಯ ಸಂಪಾದಿಸಿತು. ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಈ ಎರಡು ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಹಿನ್ನೆಲೆಯಲ್ಲಿ ಈ ಪಂದ್ಯ ಉಭಯರಿಗೂ ಮಹತ್ವದ್ದಾಗಿತ್ತು. ಕ್ವಿಂಟಾನ್ ಶತಕ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ದಕ್ಷಿಣ ಆಫ್ರಿಕಾ  ತಂಡಕ್ಕೆ ಆರಂಭಿಕ ಬ್ಯಾಟ್ಸ್‍ಮನ್ ಕ್ವಿಂಟಾನ್ ಡಿ ಕಾಕ್ ಅವರ ಆಕರ್ಷಕ ಶತಕ ನೆರವಾಯಿತು.

ಆರಂಭಿಕ ಹಂತದಲ್ಲಿ ರೀಜಾ ಹೆಂಡ್ರೀಕ್ಸ್ (1), ಬರ್ನ್ (5) ಹಾಗೂ ಡೀನ್ ಎಲ್ಗರ್ (5) ಅವರ ವೈಫಲ್ಯದಿಂದಾಗಿ ದಕ್ಷಿಣ ಆಫ್ರಿಕಾ  ತಂಡ 44 ರನ್ ದಾಖಲಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮತ್ತೊಂದೆಡೆ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತ ಕ್ವಿಂಟಾನ್ 124 ಎಸೆತಗಳಲ್ಲಿ, 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 108 ರನ್ ದಾಖಲಿಸಿದರು. ಆ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಮಧ್ಯಮ ಕ್ರಮಾಂಕದಲ್ಲಿ ಒಜಿಫಿಇZ ರಮೆಲಾ (26) ಹಾಗೂ ವಿಕೆಟ್ ಕೀಪರ್ ಡೇನ್ ವಿಲಾಸ್ (50) ಸ್ವಲ್ಪ ಹೊತ್ತು ಕ್ರೀಸ್‍ನಲ್ಲಿ ನಿಂತಿದ್ದು, ತಂಡ 200ರ ಗಡಿ ದಾಟಲು ನೆರವಾದರು. ಉಳಿದಂತೆ ಜೊಂಡೊ (0), ವಿಲ್ಜೋನ್ (15), ಶೆಜಿ (1), ಲೈ (ಅಜೇಯ 12) ಹಾಗೂ ಸೊಸೊಬೆ (1) ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಭಾರತ ತಂಡದ ಪರ ಬೌಲಿಂಗ್‍ನಲ್ಲಿ ಮಧ್ಯಮ ವೇಗಿ ರಿಶಿ ಧವನ್ 4, ದೀಪ್ ಶರ್ಮಾ 2, ಕುಲಕರ್ಣಿ, ಕರಣ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.

ದ್ವಿಶತಕದ ಭರ್ಜರಿ ಜತೆಯಾಟ: ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡ, ಆರಂಭಿಕ ಬ್ಯಾಟ್ಸ್‍ಮನ್‍ಗಳ ದ್ವಿಶತಕದ ಜತೆಯಾಟದ ಮೂಲಕ ತಂಡವನ್ನುಸುಲಭವಾಗಿ ಗೆಲುವಿನ ದಡ ಸೇರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಮಾಯಾಂಕ್ ಅಗರ್ವಾಲ್ (130 ರನ್, 122 ಎಸೆತ, 16 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಉನ್ಮುಕ್ತ್ ಚಾಂದ್ (90 ರನ್, 94 ಎಸೆತ, 8ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್‍ಗೆ ದ್ವಿಶತಕದ (219 ರನ್, 34.4 ಓವರ್) ಜತೆಯಾಟವಾಡಿತು.

ದಕ್ಷಿಣ ಆಫ್ರಿಕಾ  ಬೌಲರ್‍ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಬಾರಿಸಿದ ಈ ಇಬ್ಬರು ಬ್ಯಾಟ್ಸ್‍ಮನ್‍ಗಳು ಪಂದ್ಯದಲ್ಲಿ ಗೆಲುವನ್ನು ಎದುರಾಳಿ ತಂಡದಿಂದ ಕಸಿದುಕೊಂಡಿತು. ತಂಡ ಗೆಲುವಿನ ಹೊಸ್ತಿಲಿಗೆ ಬಂದು ನಿಂತ ಹಂತದಲ್ಲಿ ಈ ಇಬ್ಬರು ಬ್ಯಾಟ್ಸ್‍ಮನ್‍ಗಳು ವಿಕೆಟ್ ಒಪ್ಪಿಸಿದರು.
ನಂತರ ಬಂದ ಕರ್ನಾಟಕದ ಆಟಗಾರರಾದ ಮನೀಷ್ ಪಾಂಡೆ (ಅಜೇಯ 9) ಹಾಗೂ ಕರುಣ್ ನಾಯರ್ (ಅಜೇಯ 4) ತಂಡವನ್ನು ಗೆಲವಿನ ದಡ ಸೇರಿಸಿದರು. ದಕ್ಷಿಣ ಆಫ್ರಿಕಾ  ಎ ತಂಡದ ಪರ ಸೊಸೊಬೆ ಹಾಗೂ ಡೀನ್ ಎಲ್ಗರ್ ತಲಾ 1 ವಿಕೆಟ್ ಪಡೆದರು.
ಕ್ವಿಂಟಾನ್ ಜಾಗ ತುಂಬಿದ ಮಂದೀಪ್:
ಭಾನುವಾರ ನಡೆದ ಪಂದ್ಯದ ವೇಳೆ ಕ್ವಿಂಟಾನ್ ಡಿ ಕಾಕ್ ಸ್ನಾಯು ಸೆಳೆತದಿಂದ ಮೈದಾನ ತೊರೆದಾಗ, ಈ ಆಟಗಾರನ ಬದಲಾಗಿ ಕಣಕ್ಕಿಳಿಯಲು ದಕ್ಷಿಣ ಆಫ್ರಿಕಾದ ಯಾವುದೇ ಹೆಚ್ಚುವರಿ ಆಟಗಾರರು ಫಿಟ್ ಆಗಿರಲಿಲ್ಲ. ಹಾಗಾಗಿ ಭಾರತ ಎ ತಂಡದ 12ನೇ ಆಟಗಾರ ಮಂದೀಪ್ ಸಿಂಗ್, ಕ್ವಿಂಟಾನ್ ಸ್ಥಾನ ತುಂಬಿದ್ದರು. ಈ ಘಟನೆ ದಕ್ಷಿಣ ಆಫಿ್ರಕಾ ತಂಡ, ಸೋಮವಾರ ಆಸೀಸ್ ವಿರುದ್ಧ ಕಣಕ್ಕಿಳಿಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲಿರುವುದಕ್ಕೆ ಸಾಕ್ಷಿಯಾಯಿತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ  ತಂಡದವೇಗಿ ಶೆಜಿ ಮೈದಾನ ತೊರೆದಾಗ ತಂಡದ ವಿಡಿಯೋ ವಿಶ್ಲೆಷಕ ಕಣಕ್ಕಿಳಿದಿದ್ದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ  ಎ 50 ಓವರ್‍ಗಳಲ್ಲಿ 244 (ಎಲ್ಗರ್ 108, ವಿಲಾಸ್ 50, ರಿಶಿ ಧವನ್ 49ಕ್ಕೆ4, ಸಂದೀಪ್ ಶರ್ಮಾ 46ಕ್ಕೆ2) ಭಾರತ ಎ 37.4 ಓವರ್‍ಗಳಲ್ಲಿ 2 ವಿಕೆಟ್‍ಗೆ 247 (ಅಗರ್ವಾಲ್ 130, ಉನ್ಮುಕ್ತ್ 90, ಸೊಸೊಬೆ 32ಕ್ಕೆ1, ಎಲ್ಗರ್ 69ಕ್ಕೆ1) ಪಂದ್ಯಶ್ರೇಷ್ಠ: ಮಾಯಾಂಕ್ ಅಗರ್ವಾಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT