ಯು ಮುಂಬಾ 
ಕ್ರೀಡೆ

ಪ್ರೊ ಕಬಡ್ಡಿ: ಮುಂದುವರಿದ ಯು ಮುಂಬಾ ಗೆಲುವಿನ ಓಟ

ಪಂದ್ಯದ ಆರಂದ್ಧಕ ಹಂತದಲ್ಲಿ ಪ್ರಬಲ ಎದುರಾಳಿ ಯು ಮುಂಬಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದರೂ ದ್ವಿತಿಯಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಪರಿಣಾಮ...

ಪಂದ್ಯದ ಆರಂದ್ಧಕ ಹಂತದಲ್ಲಿ ಪ್ರಬಲ ಎದುರಾಳಿ ಯು ಮುಂಬಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದರೂ ದ್ವಿತಿಯಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಪರಿಣಾಮ ಆತಿಥೇಯ ಪುನೇರಿ ಪಲ್ಟಾನ್ಸ್ ತಂಡ ಸೋಲನುಭವಿಸಿದೆ.  
ಸೋಮವಾರ ಇಲ್ಲಿನ ಶಿವ ಛತ್ರಪತಿ ಸ್ಪೋರ್ಟ್ಸ್  ಕಾಂಪ್ಲೆಕ್ಸ್‍ನಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಪುನೇರಿ  ಪಲ್ಟಾನ್ಸ್ ತಂಡ 34-39 ಅಂಕಗಳ ತರದಿಂದ ಯು ಮುಂಬಾ ವಿರುದ್ಧ  ಸೋಲನುಭವಿಸಿದೆ. ಮುಂಬೈ ತಂಡದ ಪರ ಈ ಪಂದ್ಯದಲ್ಲಿ ನಾಯಕ್ತವಹಿಸಿದ್ದ ಪ್ರದೀಪ್ ಕುಮಾರ್ 10 ಅಂಕ ಪಡೆದರು. ಫಜೆಲ್ ಹಾಗೂ ಪವನ್ ಕುಮಾರ್ ತಲಾ 7 ಅಂಕ ಸಂಪಾದಿಸಿದರು. ಪುಣೆ ತಂಡದ ಪರ ಅಮಿತ್ ರಾತಿ 6 ಅಂಕಗಳಿಸಿದ್ದು ಗರಿಷ್ಠವಾಯಿತು.
ಟೂರ್ನಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದ್ದರೂ ಪುಣೆ ತಂಡ ತವರಿನ ಅಭಿಮಾನಿಗಳನ್ನು ರಂಜಿಸಲು ಪಂದ್ಯದಲ್ಲಿ ಸಾಕಷ್ಟು ಪ್ರಯತ್ನಿಸಿತು. ಅಲ್ಲದೆ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಹೋರಾಟ ನಡೆಸಿತು. ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರಬಲ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 1 ಅಂಕದ ಅಂತರದಿಂದ ಮಣಿಸಿದ್ದ ಪುಣೆ ಪಡೆ, ಜೈಪುರದ ಸೆಮಿಫೈನಲ್ ಹಾದಿಗೆ ಅಡ್ಡಿಯಾಯಿತು.
ಈ ಪಂದ್ಯದಲ್ಲೂ ಅದೇ ರೀತಿಯ ಅಚ್ಚರಿ ಪ್ರದರ್ಶನ ನೀಡುವ ನಿರೀಕ್ಷೆ ಅಭಿಮಾನಿಗಳದ್ದಾಗಿತು. ಪಂದ್ಯದ ಆರಂಭಿಕ ಅವಧಿಯಲ್ಲಿ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ
ಮೂಲಕ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಪಂದ್ಯದ 6ನೇ ನಿಮಿಷದ ವೇಳೆಗೆ 3-3 ಅಂಕಗಳ ಅಂತರ ಕಾಯ್ದುಕೊಂಡಿದ್ದ ಉಭಯ ತಂಡಗಳು ನಂತರದ ಹಂತದಲ್ಲೂ ಅದೇ ಪ್ರದರ್ಶನ ನೀಡಿದವು. ಪಂದ್ಯದ ಮೊದಲಾರ್ಧದ ಅವಧಿಗೆ ಉಭಯ ತಂಡಗಳು 13-13 ಅಂಕಗಳ ಅಂತರದಲ್ಲಿ ಸಮಬಲ ಸಾಧಿಸಿದವು. ಈ ಮೂಲಕ ಪಂದ್ಯದ 20 ನಿಮಿಷಗಳ ಆಟ ಮುಕ್ತಾಯವಾದರೂ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದನ್ನು ಹೇಳಲು ಸಾಧ್ಯವಾಗಿರಲಿಲ್ಲ. 
ಇನ್ನು ದ್ವಿತಿಯಾರ್ಧದಲ್ಲಿ ಪುಣೆ ತಂಡ ಮೊದಲ ಅಂಕ ದಾಖಲಿಸಿ ಮುನ್ನಡೆ ಸಾಧಿಸಿತ್ತಾದರೂ, ಯು ಮುಂಬಾ ತಂಡ ದಿಢೀರನೆ ಆಕ್ರಮಣಕಾರಿ ಆಟ ಪ್ರದರ್ಶಿಸುವ ಮೂಲಕ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. ಪಂದ್ಯದ 35ನೇ ನಿಮಿಷದ ವೇಳೆಗೆ 32-22 ಅಂಕಗಳಿಂದ ಮೇಲುಗೈ ಸಾಧಿಸಿದ್ದ ಯು ಮುಂಬಾ ತಂಡ, ತವರಿನ ಅಭಿಮಾನಿಗಳ ಆಸೆಗೆ ತಣ್ಣೀರೆರೆಚಿತು. ಇನ್ನು ಅಂತಿಮ ಐದು ನಿಮಿಷಗಳ ಅವಧಿಯಲ್ಲಿ ಪುಣೆ ತಂಡ 12 ಅಂಕಗಳನ್ನು ದಾಖಲಿಸಿ ಹೋರಾಟ ನೀಡಿತ್ತಾದರೂ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

SCROLL FOR NEXT