ಉತ್ತರ ಪ್ರದೇಶ ಮಣಿಸಿದ ಮುಂಬೈ 
ಕ್ರೀಡೆ

ಉತ್ತರ ಪ್ರದೇಶ ಮಣಿಸಿದ ಮುಂಬೈ

ಚೊಚ್ಚಲ ಪ್ರೊ ರೆಸ್ಲಿಂಗ್ ಲೀಗ್ ಪಂದ್ಯಾವಳಿಯಲ್ಲಿ ದೈತ್ಯ ಪ್ರದರ್ಶನವನ್ನು ಮುಂದುವರಿಸಿರುವ ಮುಂಬೈ ಗರುಡಾಸ್ ತಂಡ, ಗುರುವಾರ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ತಂಡವನ್ನು 5-2 ಅಂಕಗಳ..

ಗುರ್‍ಗಾಂವ್: ಚೊಚ್ಚಲ ಪ್ರೊ ರೆಸ್ಲಿಂಗ್ ಲೀಗ್ ಪಂದ್ಯಾವಳಿಯಲ್ಲಿ ದೈತ್ಯ ಪ್ರದರ್ಶನವನ್ನು ಮುಂದುವರಿಸಿರುವ ಮುಂಬೈ ಗರುಡಾಸ್ ತಂಡ, ಗುರುವಾರ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ತಂಡವನ್ನು 5-2 ಅಂಕಗಳ ಅಂತರದಲ್ಲಿ ಮಣಿಸಿತು.

ಮುಂಬೈ ಗೆಲವು: ಎರಡನೇ ಸುತ್ತಿನಲ್ಲಿ (ಮಹಿಳೆಯರ 58 ಕೆಜಿ ವಿಭಾಗ) ಸಾಕ್ಷಿ ಮಲಿಕ್‍ಗೆ ಸಾರಿಕಾ ಕುಮಾರಿ ವಿರುದ್ಧ 3-0 ಅಂತರದ ಜಯ; ಮೂರನೇ ಸುತ್ತಿನಲ್ಲಿ (ಪುರುಷರ 57ನೇ ಕೆಜಿ ವಿಭಾಗ)ಯಲ್ಲಿ ಮುಂಬೈನ ರಾಹುಲ್ ಆವತೆ, ಜೈದೀಪ್ ಕುಮಾರ್ ವಿರುದ್ಧ ಗೆಲವು; ನಾಲ್ಕನೇ ಸುತ್ತಿನಲ್ಲಿ (ಮಹಿಳೆಯರ 53 ಕೆಜಿ) ಮುಂಬೈನ ಒಡುನಫಿಗೆ ಬಬಿತಾ ಕುಮಾರಿ ವಿರುದ್ಧ 10-0  ಅಂತರದ ತಾಂತ್ರಿಕ ಜಯ; 5ನೇ ಸುತ್ತಿನಲ್ಲಿ (ಪುರುಷರ 97 ಕೆಜಿ) ಎಲಿಜ್ದಾರ್‍ಗೆ ಸತ್ಯವಾರ್ತ್ ಕಡಿಯಾನ್ ವಿರುದ್ಧ ಜಯ; ಆರನೇ ಸುತ್ತಿನಲ್ಲಿ (ಮಹಿಳೆಯರ 69 ಕೆಜಿ) ಅಡಿಲಿನ್ ಗ್ರೇ ಅವರಿಗೆ,  ಅಲಿನಾ ಸ್ಟಾಡಿನಿಕ್ ವಿರುದ್ಧ 10-0 ಅಂತರದ ತಾಂತ್ರಿಕ ಜಯ.

ಉತ್ತರ ಪ್ರದೇಶದ ಗೆಲವು: ಮೊದಲ ಸುತ್ತಿನಲ್ಲಿ (ಪುರುಷರ 74 ಕೆಜಿ) ಪುರೇವ್ಜಾವ್ ಉನುರ್ಬಾತ್ ಅವರಿಗೆ ಪ್ರದೀಪ್ ವಿರುದ್ಧ 12-1ರ ಜಯ; ಗ್ಯಾನ್ಜೋರಿಕ್ ಅವರಿಗೆ ಅಮಿತ್ ಧಾರ್ಕರ್ ವಿರುದ್ಧ  ಗೆಲವು.

ಅಗ್ರಸ್ಥಾನಕ್ಕೆ: ಈ ಜಯದ ಮೂಲಕ ಮುಂಬೈ ತಂಡ, ಈವರೆಗಿನ ಟೂರ್ನಿಯಲ್ಲಿ ಸತತ ಮೂರು ಗೆಲವು ದಾಖಲಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತನ್ನ ಮೊದಲ ಪಂದ್ಯದಲ್ಲಿ ಮುಂಬೈ  ತಂಡ, ಪಂಜಾಬ್ ತಂಡವನ್ನು 5-2ರಿಂದ ಮಣಿಸಿತ್ತು. ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಯೋಧಾಸ್ ತಂಡದ ವಿರುದ್ಧ 4-3 ಅಂಕಗಳ ಅಂತರದಲ್ಲಿ ಗೆಲವು ಸಾಧಿಸಿತ್ತು. ಈ ಮುಖಾಮುಖಿಯಲ್ಲಿನ  ಸೋಲು ಸೇರಿದಂತೆ, ಉತ್ತರ ಪ್ರದೇಶ ತಂಡವು ಸತತ ಎರಡು ಸೋಲು ಕಂಡಂತಾಗಿದೆ. ಟೂರ್ನಿಯಲ್ಲಿನ ತನ್ನ ಆರಂಭಿಕ ಪಂದ್ಯದಲ್ಲಿ, ಬೆಂಗಳೂರು ಫೀಧಾಸ್ ವಿರುದ್ಧ ಪರಾಭವ ಹೊಂದಿದ್ದ  ಉತ್ತರ ಪ್ರದೇಶ, ತನ್ನ ಎರಡನೇ ಪಂದ್ಯದಲ್ಲಿ ದಿಲ್ಲಿ ವೀರ್ಸ್ ವಿರುದ್ಧ ಜಯ ಸಾಧಿಸಿತ್ತು. ಇದೀಗ ಪುನಃ ತನ್ನ ಮೂರನೇ ಪಂದ್ಯದಲ್ಲಿ ಸೋಲು ಕಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT