ಓಜೋನ್ 
ಕ್ರೀಡೆ

ಸಿಐಎಲ್ ಮಣಿಸಿದ ಓಜೋನ್

ಪಂದ್ಯದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಕಂಡುಬಂದ ತುರುಸಿನ ಕಾದಾಟದಲ್ಲಿ ಸಿಐಎಲ್ ಎದುರು ಇನ್ನಷ್ಟು ಆಕ್ರಮಣಕಾರಿಯಾದ ಓಜೋನ್...

ಬೆಂಗಳೂರು: ಪಂದ್ಯದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಕಂಡುಬಂದ ತುರುಸಿನ ಕಾದಾಟದಲ್ಲಿ ಸಿಐಎಲ್ ಎದುರು ಇನ್ನಷ್ಟು ಆಕ್ರಮಣಕಾರಿಯಾದ ಓಜೋನ್ ಬೆಂಗಳೂರು ಎಫ್ ಸಿ ತಂಡ 42 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.

ಸೋಮವಾರ ಇಲ್ಲಿನ ಬೆಂಗಳೂರು ಜಿಲ್ಲಾ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ  ಬಿಡಿಎಫ್ಎ ಆಶ್ರಯದ ಸೂಪರ್ ಡಿವಿಷನ್ ಪಂದ್ಯಾವಳಿಯಲ್ಲಿ ಪಂದ್ಯದ ಮೊದಲಾರ್ಧದಲ್ಲೇ ಸಿಐಎಲ್ ವಿರುದ್ಧ ಓಜೋನ್ 20 ಮುನ್ನಡೆ ಸಾಧಿಸಿ ಕೊನೆಯವರೆಗೂ ಮಿಂಚಿನ ಆಟವಾಡಿತು. ಪಂದ್ಯ ಮುಗಿಯಲು ಇನ್ನು ಕೇವಲ ಒಂದು ನಿಮಿಷ ಇದೆ ಎನ್ನುವಾಗ ದಿನೇಶ್ ಬಾರಿಸಿದ ಗೋಲು, ಓಜೋನ್ ತಂಡ ಕಂಟ್ರೋಲರ್ ಆಫ್ ಇನ್‍ಸ್ಪೆಕ್ಷನ್ ಎಲೆಕ್ಟ್ರಾನಿಕ್ಸ್ (ಸಿಐಎಲ್) ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಲು ನೆರವಾಯಿತು.

ಓಜೋನ್ ಪರ ವಿವೇಕಾನಂದ (14ನೇ ನಿ.), ಆ್ಯಂಟೊ ಕ್ಸೇವಿಯರ್ (29ನೇ ನಿ.), ಡಾಪ್ ಬಾಸ್ಕೊ (58ನೇ ನಿ.) ಮತ್ತು ದಿನೇಶ್ 89ನೇ ನಿಮಿಷಗಳಲ್ಲಿ ತಲಾ ಒಂದೊಂದು ಗೋಲು ಬಾರಿಸಿದರೆ, ಸಿಐಎಲ್ ಪರ ಸತೀಶ್ 59 ಮತ್ತು ಆರ್.ಸಿ. ಪ್ರಕಾಶ್ 75ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಹೊಡೆದರು. ಪಂದ್ಯದ 14ನೇ ನಿಮಿಷದಲ್ಲಿ ವಿವೇಕಾನಂದ ಹಾಗೂ ಆ್ಯಂಟೋ ಕ್ಸೇವಿಯರ್ (29ನೇ ನಿ.) ತಲಾ ಒಂದೊಂದು ಗೋಲು ದಾಖಲಿಸಿ ಸಿಐಎಲ್ ಮೇಲೆ ಒತ್ತಡ ಹೇರಿದರು. ಓಜೋನ್‍ನ ಈ ಆಕ್ರಮಣಕಾರಿ ಆಟಕ್ಕೆ ಪ್ರತಿ ಹೇಳಲು ಸಿಐಎಲ್‍ನ ಆಟಗಾರರು ಇನ್ನಿಲ್ಲದಂತೆ ಶ್ರಮಿಸಿದರೂ, ವಿರಾಮದ ತನಕ ಸಿಐಎಲ್ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಇನ್ನು ವಿರಾಮದ ನಂತರವೂ ಓಜೋನ್ ತನ್ನ ಗೋಲಿನ ದಾಳಿಯನ್ನು ಮುಂದುವರೆಸಿತು. ಡಾನ್ ಬಾಸ್ಕೋ ಸಿಐಎಲ್ ಗೋಲಿನ ಮೇಲೆ ದಾಳಿ ನಡೆಸಿ ಅಂತರವನ್ನು 30ಗೆ ಹೆಚ್ಚಿಸಿದರು. ಆದರೆ, ಭಾರತದ ಮಾಜಿ ಆಟಗಾರ ಆರ್.ಸಿ. ಪ್ರಕಾಶ್ ಅವರಿಂದ ಸಂಘಟಿತವಾಗಿದ್ದ ಸಿಐಎಲ್‍ನ ಯುವ  ಆಟಗಾರರು ಈ ಹಂತದಲ್ಲಿ ಇನ್ನಷ್ಟು ಛಲದಿಂದ ಕಾದಾಡಿದರು.

ಬಾಸ್ಕೋ ಬಾರಿಸಿದ ಗೋಲಿಗೆ ಉತ್ತರವಾಗಿ ಒಂದೇ ನಿಮಿಷದ ಅಂತರದಲ್ಲಿ ಸತೀಶ್ ಗೋಲು ಬಾರಿಸಿ 13ಕ್ಕೆ ಅಂತರವನ್ನು ತಗ್ಗಿಸಿದರೆ, ಪಂದ್ಯದ 75ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಪ್ರಕಾಶ್ ಗೋಲಾಗಿ ಪರಿವರ್ತಿಸುವ ಮೂಲಕ ಅಂತರವನ್ನು 23ಕ್ಕೆ ಕುಗ್ಗಿಸಿದರು. ಆದರೆ, ಮೊದಲ ಬಾರಿಗೆ ಹೊಸದಾಗಿ ಸಂಘಟಿತಗೊಂಡಿರುವ ಓಜೋನ್ ತಂಡ ಇನ್ನಷ್ಟು ವೈಭವ ಕಾಣುವಂತೆ ಪಂದ್ಯ ಮುಗಿಯುವ ಅಂತಿಮ ಕ್ಷಣದಲ್ಲಿ ದಿನೇಶ್ ಸಿಐಎಲ್‍ಗೆ ಮತ್ತೊಂದು ಪೆಟ್ಟು ನೀಡಿದರು. ಪೋಸ್ಟಲ್‍ಗೆ ಜಯ ಇನ್ನು ಇದಕ್ಕೂ ಮುನ್ನ ನಡೆದ  'ಎ' ಡಿವಿಷನ್ ಲೀಗ್‍ನಲ್ಲಿ ಪೋಸ್ಟಲ್ ಇಲಾಖೆ 21 ಗೋಲುಗಳಿಂದ ಬಿಯುಎಫ್ ಸಿ ತಂಡದ ವಿರುದ್ಧ ಜಯ ಸಾಧಿಸಿತು. ಪ್ರಥಮಾರ್ಧದ 20ನೇ ನಿಮಿಷದಲ್ಲಿ ಶರತ್ ಬಿಯುಎಫ್ ಸಿ ಪರ ಗೋಲು ತಂದಿತ್ತರೂ, ವಿರಾಮದ ನಂತರ ಸುಹಾಸ್ (36ನೇ ನಿ.) ಮತ್ತು ಇರ್ಫಾನ್ (43ನೇ ನಿ.) ತಲಾ ಒಂದೊಂದು ಗೋಲು ಹೊಡೆದು ತಂಡಕ್ಕೆ ಜಯ ತಂದಿತ್ತರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT