ಜ್ವಾಲಾಗುಟ್ಟಾ ಮತ್ತು ಗೋಪಿಚಂದ್ 
ಕ್ರೀಡೆ

ಜ್ವಾಲಾ-ಅಶ್ವಿನಿ ವಿರುದ್ಧ ಪಿತೂರಿ ಇಲ್ಲ: ಗೋಪಿಚಂದ್

ಭಾರತದ ಮಹಿಳಾ ಡಬಲ್ಸ್ ಜೋಡಿ ಜ್ವಾಲಾಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ)ದಿಂದ ಸಿಗುವ ಸಕಲ ನೆರವು ಸಿಗಲಿದೆ ....

ನವದೆಹಲಿ : ಭಾರತದ ಮಹಿಳಾ ಡಬಲ್ಸ್ ಜೋಡಿ ಜ್ವಾಲಾಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ)ದಿಂದ ಸಿಗುವ ಸಕಲ ನೆರವು ಸಿಗಲಿದೆ ಎಂದು ಭಾರತದ ಮುಖ್ಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

 ಸಿಂಗಲ್ಸ್  ಆಟಗಾರಿಗೆ ಸಿಗುವ ಮಾನ್ಯತೆ ಹಾಗೂ ಪ್ರೋತ್ಸಾಹವನ್ನು ಡಬಲ್ಸ್ ಆಟಗಾರರಿಗೆ ನೀಡುತ್ತಿಲ್ಲ. ಇದರಿಂದಲೇ ನಾವು ಒಲಿಂಪಿಕ್ಸ್ ಪೋಡಿಯಂ ಯೋಜನೆಯಿಂದ ಹೊರಗುಳಿಯುವಂತಾಗಿದೆ. ಇದಕ್ಕೆಲ್ಲಾ ರಾಷ್ಟ್ರೀಯ ಕೋಚ್ ಗೋಪಿಚಂದ್ ಕಾರಣ ಎಂದು ಇತ್ತೀಚಿನ ಕೆನಡಾ ಓಪನ್ ನಲ್ಲಿ ಚಾಂಪಿಯನ್ ಆದ ಬಳಿಕ ಮಾಧ್ಯಮಗಳಲ್ಲಿ ಜ್ವಾಲಾ-ಅಶ್ವಿನಿ ಜೋಡಿ ಆರೋಪಿಸಿತ್ತು. ಈ ಆಪಾದನೆಗಳ ಕುರಿತು ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಗೋಪಿ ಚಂದ್, ``ಜ್ವಾಲಾ ಮತ್ತು ಅಶ್ವಿನಿ ಈ ಕುರಿತು ಆಗಾಗ್ಗೆ ಇಂಥಹ ಆರೋಪಗಳನ್ನು ಮಾಡುವುದನ್ನು ಬಿಡಬೇಕು. ಅವರ ವಿರುದ್ಧ ನಾನು ಯಾವುದೇ ಪಿತೂರಿ ಮಾಡಿಲ್ಲ. ವಾಸ್ತವವಾಗಿ ಅವರ ಸಮಸ್ಯೆ ಏನು ಎಂಬುದರ ಬಗ್ಗೆ ಅವರು ಮೊದಲು ಸ್ಪಷ್ಟತೆ ತಾಳಬೇಕು. ವೃಥಾ ಟೀಕೆ ಸರಿಯಲ್ಲ'' ಎಂದರು.

ಪ್ರಸ್ತುತ ಅವರು ಯಾವ ಟೂರ್ನಿಯಲ್ಲಿ ಆಡುತ್ತಾರೋ ಅದಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಭಾರತ ಸರ್ಕಾರದಿಂದ ನೆರವು ಸಿಗುತ್ತದೆ. ಮೇಲಾಗಿ ನಾವು ಎರಡು  ತರಬೇತಿ ಶಿಬಿರಗಳನ್ನು ಇಂಡೋನೇಷ್ಯಾದ ಕೋಚ್ ಮಾರ್ಗದರ್ಶನದಲ್ಲಿ  ನಡೆಸುತ್ತಿದ್ದೇವೆ. ಇದರಲ್ಲಿ ಡಬಲ್ಸ್ ಕೋಚ್ ಕೂಡ ಇದ್ದಾರೆ. ಕಳೆದ ಕೆಲ ವರ್ಷ ಗಳಿಂದ ಅವರು ಯಾವುದಕ್ಕಾಗಿ ಬೇಡಿಕೆ ಇಟ್ಟಿದ್ದರೋ ಅದನ್ನು ಈಡೇರಿಸಲಾಗಿದೆ'' ಎಂದೂ ಗೋಪಿಚಂದ್ ಹೇಳಿದ್ದಾರೆ.

ಇನ್ನು ಟಾಪ್ ಯೋಜನೆಯಲ್ಲಿ  ಜ್ವಾಲಾ-ಅಶ್ವಿನಿ ಈರ್ವರ ಹೆಸರೂ ಇದೆ. ಸಂದೇಹ ಬೇಡ ಎಂದು ಗೋಪಿಚಂದ್ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Southern Zonal Council meet: ಜಲ ವಿವಾದಗಳ ಕುರಿತು ಮಾತುಕತೆಗೆ ಅಮಿತ್ ಶಾ ಕರೆಗೆ ರಾಜ್ಯಗಳ ಬೆಂಬಲ

ಹಿಸಾರ್ ಜಿಲ್ಲಾ ನ್ಯಾಯಾಲಯದ ಹೊರಗೆ ಗ್ಯಾಂಗ್‌ಸ್ಟರ್ ವಿನೋದ್ ಪನ್ನುಗೆ ಗುಂಡಿಕ್ಕಿ ಹತ್ಯೆ

ಎಲ್ಲರಿಗೂ ಕಾನೂನು ಒಂದೇ: ಅನುಮತಿ ಇಲ್ಲದೆ ತಮ್ಮ ಪೋಸ್ಟರ್‌ ಅಂಟಿಸಿದ್ದಕ್ಕೆ ಮೂರು FIR ದಾಖಲು!

'ಬಾಹುಬಲಿ'ಗೆ ಏನಾಯಿತು?: ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಆತಂಕ!

ಕೇಂದ್ರದಿಂದ ಮಹತ್ವದ ನಿರ್ಧಾರ: ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಪೀಠ ಸ್ಥಾಪನೆ