ಕ್ರೀಡೆ

ಚುಟುಕು ಸರಣಿಗೆ ಮಿಥಾಲಿ ಪಡೆ

Shilpa D

ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್  ವನಿತಾ ಕ್ರಿಕೆಟ್ ತಂಡದ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯನ್ನು 3-2 ರಿಂದ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮಿಥಾಲಿ ರಾಜ್  ಸಾರಥ್ಯದ ಭಾರತದ ವನಿತಾ ಕ್ರಿಕೆಟ್ ತಂಡ ಇದೀಗ ಶನಿವಾರ ಶುರುವಾಗುತ್ತಿರುವ  ಮೂರು ಚುಟುಕು ಪಂದ್ಯ ಸರಣಿಗೆ ಸನ್ನದ್ದವಾಗಿದೆ.

ಏಕದಿನ ಸರಣಿಯಲ್ಲಿನ ಆರಂಭಿಕ ವೈಫಲ್ಯವನ್ನು ಮೆಟ್ಟಿ ನಿಂತ ಭಾರತ, ಕಿವೀಸ್ ಭರ್ಜರಿ ತಿರುಗೇಟು ನೀಡಿ ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಸಫಲವಾಗಿತ್ತು.  ಇದೇ ಗೆಲುವಿನ ಓಟವನ್ನು ಟಿ-20  ಪಂದ್ಯಗಳಲ್ಲಿಯೂ ವಿಸ್ತರಿಸುವ ಇರಾದೆಯಲ್ಲಿದೆ.

ಆದರೆ ಏಕದಿನ ಸರಣಿಯಲ್ಲಿನ ಸೋಲಿನ ಬೇಗುದಿಯಿಂದ ಬೇಯುತ್ತಿರುವ ಸುಜಿ ಬೇಟ್ಸ್  ನಾಯಕತ್ವದ ಕಿವೀಸ್ ಪಡೆ ಚುಟುಕು ಸರಣಿಯನ್ನಾದರೂ ಗೆದ್ದು ದಿಟ್ಟ ಉತ್ತರ ನೀಡುವ ತವಕದಲ್ಲಿದೆ.

ಅಂದ್ಹಾಗೆ ಉಭಯರ ನಡುವಿನ ಈ ಮೂರು ಟಿ-20 ಪಂದ್ಯ ಮೊದಲು ಬೆಂಗಳೂರು ಹೊರವಲವಯದ ಆಲೂರಿನ ಕೆಎಸ್ ಸಿಎ ಮೈದಾನದಲ್ಲಿ  ನಡೆಯಬೇಕಿತ್ತಾದರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳುವಂತಾಗಿದೆ.

SCROLL FOR NEXT