ಬಿಸಿಸಿಐ 
ಕ್ರೀಡೆ

ಬಿಸಿಸಿಐ ನ್ನು ಬೆಂಬಿಡದೆ ಕಾಡುತ್ತಿದೆ 8 ರ ನಂಟು!

ಚೆನ್ನೈ ಸೂಪರ್ ಕಿಂಗ್ಸ್(ಸಿ.ಎಸ್.ಕೆ) ಹಾಗೂ ರಾಜಸ್ಥಾನ ರಾಯಲ್ಸ್(ಆರ್.ಆರ್) ತಂಡಗಳು ನಿಷೇಧಗೊಂಡಿದ್ದರೂ ಮುಂದಿನ ಎರಡು ಐಪಿಎಲ್ ಪಂದ್ಯಾವಳಿಗಳಲ್ಲಿ ಎಂಟು ತಂಡಗಳನ್ನೇ ಕಣಕ್ಕಿಳಿಸಲು ಬಿಸಿಸಿಐ ಸನ್ನಾಹ ನಡೆಸಿದೆ.

ನವದೆಹಲಿ: ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣಗಳ ಹಿನ್ನೆಲೆಯಲ್ಲಿ, ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಚೆನ್ನೈ ಸೂಪರ್ ಕಿಂಗ್ಸ್(ಸಿ.ಎಸ್.ಕೆ) ಹಾಗೂ ರಾಜಸ್ಥಾನ ರಾಯಲ್ಸ್(ಆರ್.ಆರ್) ತಂಡಗಳು ನಿಷೇಧಗೊಂಡಿದ್ದರೂ ಮುಂದಿನ ಎರಡು ಐಪಿಎಲ್ ಪಂದ್ಯಾವಳಿಗಳಲ್ಲಿ ಎಂಟು ತಂಡಗಳನ್ನೇ ಕಣಕ್ಕಿಳಿಸಲು ಬಿಸಿಸಿಐ ಸನ್ನಾಹ ನಡೆಸಿದೆ.

ಪ್ರತಿ ವರ್ಷ ಐಪಿಎಲ್ ನಲ್ಲಿ ಎಂಟು ತಂಡಗಳು ಕಣಕ್ಕಿಳಿಯುತ್ತವೆ. ಆದರೆ ಸಿ.ಎಸ್.ಕೆ ಆರ್. ಆರ್ ತಂಡಗಳನ್ನು 2 ವರ್ಷ ಕಾಲ ನಿಷೇಧಿಸಿರುವುದರಿಂದ ಮುಂದಿನ ಆವೃತ್ತಿಯಲ್ಲಿ ಕೇವಲ ಆರು ತಂಡಗಳು ಕಣಕ್ಕಿಳಿಯಲಿವೆ. ಹೀಗೆ ಆರು ತಂಡಗಳ ಐಪಿಎಲ್ ಆಡಿಸುವುದರಿಂದ ಬಿಸಿಸಿಐ ಹಲವು ಸಮಸ್ಯೆಗಳಲ್ಲಿ ಸಿಲುಕಲಿದೆ. ಟೂರ್ನಿಯ ಪ್ರಸಾರ ಹಕ್ಕುಗಳನ್ನು ಪಡೆದಿರುವ ವಿವಿಧ ಮಾಧ್ಯಮಗಳು ಈಗಾಗಲೇ ಪ್ರತಿ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸುವ 60  ಪಂದ್ಯಗಳ ನೇರಪ್ರಸಾರದ ಒಪ್ಪಂದಕ್ಕೆ ಸಹಿ ಹಾಕಿವೆ. ಈಗ ತಂಡಗಳ ಸಂಖ್ಯೆ ಕಡಿಮೆಯಾದರೆ ಬಿಸಿಸಿಗೆ ನಷ್ಟವಾಗುವುದಂತೂ ಖಚಿತ. ಹಾಗಾಗಿ ಈ ಕಷ್ಟದಿಂದ ಪಾರಾಗಲು ಎಂಟು ತಂದಗಳನ್ನೊಳಗೊಂಡ ಐಪಿಎಲ್ ನಡೆಸಲು ಚಿಂತನೆ ನಡೆಸಿವೆ. ಅರ್ಥಾತ್ ಸಿ.ಎಸ್.ಕೆ ಆರ್.ಆರ್ ಬದಲಿಗೆ ಎರಡು ಹೊಸ ಫ್ರಾಂಚೈಸಿಗಳಿಗೋ ಇಲ್ಲವೇ ಈಗಾಗಲೇ ಟೂರ್ನಿಯಲ್ಲಿದ್ದು ಹೊರಹೋಗಿರುವ ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ಪುಣೆ ವಾರಿಯರ್ಸ್ ಗೆ ಮರು ಅವಕಾಶ ಕಲ್ಪಿಸುವ ಮಾತು ಕೇಳಿಬರುತ್ತಿವೆ.

ಈ ನಿಟ್ಟಿನಲ್ಲಿ ಭಾನುವಾರ ಐಪಿಎಲ್ ಆಡಳಿತ ಮಂಡಳಿಯ ಪದಾಧಿಕಾರಿಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಸಿ.ಎಸ್.ಕೆ, ಆರ್.ಆರ್ ತಂಡಗಳನ್ನು ನಿಷೇಧಿಸಿ ಹೊರದಬಿದ್ದ ನ್ಯಾ.ಆರ್.ಎಂ ಲೋಧಾ ನೇತೃತ್ವದ ಸಮಿತಿ ತೀರ್ಪನ್ನು ಚರ್ಚಿಸಲಾಗುತ್ತದೆ. ಹಾಗೂ ಸಿ.ಎಸ್.ಕೆ, ಆರ್.ಆರ್ ತಂಡಗಳಿಂದ ತೆರವಾದ ಜಾಗವನ್ನು ಭರ್ತಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ಜೂ.15 ರ ಸಂಜೆ ಹಾಗೂ ಗುರುವಾರ ಬಳಿಗ್ಗೆ ಬಿಸಿಸಿಐ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯಾ ಹಾಗೂ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ಭೇಟಿಯಾಗಲಿದ್ದು ಈ ಭೇಟಿಯೂ ಸ್ವಾರಸ್ಯ ಕೆರಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT