ಕ್ರೀಡೆ

ಪ್ರೊ ಕಬಡ್ಡಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಹೊನ್ನಪ್ಪಗೌಡ ದೆಹಲಿ ತಂಡದ ಕೋಚ್

Vishwanath S

ನವದೆಹಲಿ: ಭಾರತ ಕಬಡ್ಡಿ ತಂಡದ ಮಾಜಿ ನಾಯಕ, ಅರ್ಜುನ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಹೊನ್ನಪ್ಪ ಸಿ ಗೌಡ ಅವರು ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ದೆಹಲಿ ದಬಂಗ್‌ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದಾರೆ.

ಪ್ರೋ ಕಬಡ್ಡಿ ಎರಡನೇ ಆವೃತ್ತಿ ಜುಲೈ 18ರಿಂದ ಆರಂಭಗೊಳ್ಳಲಿದ್ದು, ಟೂರ್ನಿಯಲ್ಲಿ ದೆಹಲಿ ತಂಡಕ್ಕೆ ಹೊನ್ನಪ್ಪ ಅವರು ಕೋಚ್ ಆಗಿ ನೇಮಕಗೊಂಡಿದ್ದಾರೆ.

ದೆಹಲಿ ದಬಂಗ್ ತಂಡದ ಕೋಟ್ ನೇಮಕ ಸಂಬಂಧ ದೆಹಲಿ ದಬಂಗ್ ತಂಡ ಮಾಲೀಕರಾದ ರಾಧಾ ಕಪೂರ್‌, ಹೊನ್ನಪ್ಪ ಗೌಡ ಅವರು ನುರಿತ ಕ್ರೀಡಾಪಟುವಾಗಿದ್ದು, ಅವರ ಅನುಭವ ನಮ್ಮ ತಂಡದ ಆಟಗಾರರಿಗೆ ನೆರವಾಗಲಿದೆ ಎಂದರು.


SCROLL FOR NEXT