Stephen Constantine 
ಕ್ರೀಡೆ

ಆಟಗಾರರಲ್ಲಿ ಫುಟ್ಬಾಲ್ ನ ಜಾಣ್ಮೆ ಕೊರತೆ ಇದೆ: ಸ್ಟೀಫನ್

2018 ರ ಫಿಫಾ ವಿಶ್ವಕಪ್ ಆರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಗುಹಾಮ್ ವಿರುದ್ಧ ಸೋಲನುಭವಿಸಿದ ಭಾರತ ತಂಡದ ಬಗ್ಗೆ ಮಾತನಾಡಿದ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್....

ತಮುನಿಂಗ್: 2018 ರ ಫಿಫಾ ವಿಶ್ವಕಪ್ ಆರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಗುಹಾಮ್ ವಿರುದ್ಧ ಸೋಲನುಭವಿಸಿದ ಭಾರತ ತಂಡದ ಬಗ್ಗೆ ಮಾತನಾಡಿದ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್, ನಮ್ಮಲ್ಲಿ ಫುಟ್ಬಾಲ್  ಕ್ರೀಡೆಯಲ್ಲಿನ ಜಾಣ್ಮೆಯ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ.
ಭಾರತ ತಂಡ ಕಳಪೆ ಪ್ರದರ್ಶನ ನೀಡಿದ್ದು, ಸದೃಢ ಎದುರಾಳಿಯ ಮುಂದೆ ಹೇಗೆ ಕಾದಾಟ ನಡೆಸಬೇಕು ಎಂಬುದರ ಬಗ್ಗೆ ಅರಿವಿಲ್ಲ ಎಂದಿದ್ದಾರೆ.
ಗುಹಾಮ್ ತಂಡ ಅಮೆರಿಕಾದ ಏಳು ಆಟಗಾರರನ್ನು ಕಣಕ್ಕಿಳಿಸಿದ್ದು, ಅದರಲ್ಲಿ ಇಬ್ಬರು ಪ್ರಮುಖ ಲೀಗ್ ಸಾಕರ್ ಆಟಗಾರರಾಗಿದ್ದಾರೆ. ಅಲ್ಲದೆ ಕ್ರೀಡೆಯಲ್ಲಿ ಅತ್ಯುತ್ತಮ  ತಂತ್ರಗಾರಿಕೆ ಪ್ರದರ್ಶಿಸಿತ್ತು. ಆದರೆ ಭಾರತದ ಇಂದಿನ ಪ್ರದರ್ಶನ ನಿರಾಸೆ ಮೂಡಿಸಿದೆ, ಎದುರಾಳಿ ತಂಡದ ಆಟಗಾರರು ಫುಟ್ಬಾಲ್ ಬಗೆಗಿನ ಉತ್ತಮ ಜ್ಞಾನ ಹೊಂದಿದ್ದರು.  ಪಂದ್ಯದಲ್ಲಿ  ಎಕರಡು ತಂಡಗಳ ಆಟಗಾರರಲ್ಲಿನ ಜ್ಞಾನದ ವ್ಯತ್ಯಾಸ ಎದ್ದು ಕಾಣುತ್ತಿತ್ತು. ಗುಹಾಮ್ ತಂಡದಲ್ಲಿ ಶೇ. 75 ರಷ್ಟು ಆಟಗಾರರು ಅಮೆರಿಕಾದಲ್ಲಿ ಹುಟ್ಟಿ ತರಬೇತಿ ಪಡೆದಿದ್ದಾರೆ. ಹಾಗಾಗಿ ತಂಡದಲ್ಲಿ ಹೆಚ್ಚಿನ ವ್ಯತ್ಯಾಸ ಮೂಡಿಸಿತು. ನಮ್ಮ ತಂಡದ ಆಟಗಾರರಲ್ಲಿ ಫುಟ್ಬಾಲ್ ಬಗೆಗಿನ ಅರಿವು ಕಡಿಮೆ ಆಗಿತ್ತು. ಪ್ರಮುಖ ಹಂತದಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ತಂಡ ಪಂದ್ಯದಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಯಿತು ಎಂದು ಅಭಿಪ್ರಾಯ ಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT