ಇಂದರ್ ಜೀತ್ 
ಕ್ರೀಡೆ

ಅಥ್ಲೆಟಿಕ್ಸ್: ಮತ್ತೆ ಮಿಂಚಿದ ಇಂದರ್, ಭಾರತಕ್ಕೆ 10 ಪದಕ

ಏಷ್ಯನ್ ಚಾಂಪಿಯನ್ ಶಾಟ್‍ಪುಟ್‍ಪಟು ಇಂದರ್ ಜಿತ್ ಪ್ರಸಕ್ತ ಏಷ್ಯನ್ ಗ್ರ್ಯಾನ್ ಪ್ರೀ ಸೀರೀಸ್‍ನಲ್ಲಿ ಮತ್ತೊಂದು ಚಿನ್ನದ ಪದಕ ದಾಖಲಿಸಿದ್ದಾರೆ...

ನವದೆಹಲಿ: ಏಷ್ಯನ್ ಚಾಂಪಿಯನ್ ಶಾಟ್‍ಪುಟ್‍ಪಟು ಇಂದರ್ ಜೀತ್ ಪ್ರಸಕ್ತ ಏಷ್ಯನ್ ಗ್ರ್ಯಾನ್ ಪ್ರೀ ಸೀರೀಸ್‍ನಲ್ಲಿ ಮತ್ತೊಂದು ಚಿನ್ನದ ಪದಕ ದಾಖಲಿಸಿದ್ದಾರೆ. ಇನ್ನು ಕರ್ನಾಟಕದ ಓಟಗಾರ್ತಿ ಎಂ.ಆರ್ ಪೂವಮ್ಮ 400 ಮೀ. ಓಟದಲ್ಲಿ ಕಂಚಿನ ಪದಕ ಪಡೆದರು.

ಗುರುವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ಭಾರತ ಒಟ್ಟು 3 ಚಿನ್ನ, 2 ಬೆಳ್ಳಿ ಹಾಗೂ 5 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ಸಂಪಾದಿಸಿದೆ. ಕೂಟದ ಆರಂಭಿಕ ದಿನ ಚಿನ್ನದ ಪದಕ ಗೆದ್ದಿದ್ದ ಇಂದರ್ ಜೀತ್, ಅಂತಿಮ ದಿನ 19.85 ಮೀ. ದೂರ ಎಸೆಯುವ ಮೂಲಕ
ಎರಡನೇ ಸ್ವರ್ಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಂದರ್ ಜೀತ್ ಜತೆಗೆ ಪುರುಷರ 800 ಮೀ. ಓಟದಲ್ಲಿ ಭಾರತದ ಭರವಸೆಯ ಓಟಗಾರ ಜಿನ್ಸನ್ ಜಾನ್ಸನ್ ಸಹ ಚಿನ್ನದ ಪದಕ ಸಂಪಾದಿಸಿದ್ದಾರೆ. 1:49.85 ನಿಮಿಷದಲ್ಲಿ ಗುರಿ ತಲುಪಿದ ಜಾನ್ಸನ್, ಅಗ್ರಸ್ಥಾನ ಪಡೆದರು. ಪುರುಷರ 400 ಮೀ. ಓಟದಲ್ಲಿ ಆರೋಕ್ಯ ರಾಜೀವ್ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿ ಕಂಚಿನ ಪದಕ ಸಂಪಾಸಿದ್ದಾರೆ.

ಮಹಿಳೆಯರ 400 ಮೀಟರ್ ಓಟದಲ್ಲಿ ಪೂವಮ್ಮ 52.72 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿ, ಮೂರನೇ ಸ್ಥಾನ ಪಡೆದರು. ಲಾಂಗ್ ಜಂಪ್ ಪಟು ಅಂಕಿತ್ ಶರ್ಮಾ 7.80 ಉದ್ದ ಜಿಗಿಯುವ ಮೂಲಕ ಬೆಳ್ಳಿ ಪದಕ ಸಂಪಾದಿಸಿದರು. ಮಹಿಳೆಯರ 800 ಮೀ. ಓಟದಲ್ಲಿ ಎಂ.ಗೋಮತಿ 2:06:25 ನಿಮಿಷದಲ್ಲಿ ಗುರಿ ಮುಟ್ಟುವ ಮೂಲರ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ 100 ಮೀ. ಹರ್ಡಲ್ಸ್‍ನಲ್ಲಿ ಗಾಯಿತ್ರಿ ಗೋವಿಂದರಾಜ್ 13.66 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು.

ಮಹಿಳೆಯರ 100 ಮೀ. ಓಟದಲ್ಲಿ 11.72 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ ಸ್ರಬಾನಿ ನಂದಾ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದರು. ಇದು ಪ್ರಸಕ್ತ ಕೂಟದಲ್ಲಿ ಎರಡನೇ ಕಂಚಿನ ಪದಕವಾಗಿದೆ. ಇನ್ನು ಅರ್ಚನಾ 12.04 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ 6ನೇ ಸ್ಥಾನ ಪಡೆದರು.

ಪುರುಷರ ಹಾಗೂ ಮಹಿಳೆಯರ 4/100 ಮಿ. ರಿಲೇನಲ್ಲಿ ಭಾರತ ತಂಡ ತಲಾ ಒಂದೊಂದು ಕಂಚಿನ ಪದಕ ಪಡೆದವು. ಪುರುಷರ ತಂಡ 39.60 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರೆ, ಮಹಿಳೆಯರ ತಂಡ 45.33 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT