ಕರ್ನಾಟಕಕ್ಕೆ ಭರ್ಜರಿ ಜಯ (ಸಂಗ್ರಹ ಚಿತ್ರ) 
ಕ್ರೀಡೆ

ಕರ್ನಾಟಕಕ್ಕೆ ಭರ್ಜರಿ ಜಯ

ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಮಿಳುನಾಡು ವಿರುದ್ಧ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ...

ಕೊಚ್ಚಿ: ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಮಿಳುನಾಡು ವಿರುದ್ಧ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 8 ವಿಕೆಟ್‍ಗಳ ಗೆಲವು ದಾಖಲಿಸಿದೆ.

ಶುಕ್ರವಾರ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆರಂಭಿಸಿತು. ನಂತರ ತಮಿಳುನಾಡು ತಂಡವನ್ನು 13.5 ಓವರ್‍ಗಳಲ್ಲಿ 61 ರನ್‍ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 9.1 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 65 ರನ್ ದಾಖಲಿಸಿ ಗೆಲವಿನ ದಡ ಸೇರಿತು. ತಮಿಳುನಾಡು ತಂಡದ ಪರ ಸೂರ್ಯಪ್ರಕಾಶ್ 24, ಶಾರುಖ್ ಖಾನ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್‍ಮನ್ ಎರಡಂಕಿ ರನ್ ದಾಖಲಿಸಲಿಲ್ಲ.

ಕರ್ನಾಟಕದ ಪರ ಬೌಲಿಂಗ್‍ನಲ್ಲಿ ಜೆ.ಸುಚಿತ್ 1 ಓವರ್ ಮಾಡಿ 2 ರನ್ ನೀಡಿ 3 ವಿಕೆಟ್ ಪಡೆದರು. ರೋನಿತ್ ಮತ್ತು ಉದಿತ್ ತಲಾ 2 ಹಾಗೂ ನವೀನ್ ಮತ್ತು ಶರತ್ ತಲಾ 1 ವಿಕೆಟ್ ಪಡೆದರು. ಕರ್ನಾಟಕದ ಪರ ಸಮರ್ಥ್ ಅಜೇಯ 24, ಮಾಯಂಕ್ 26, ಕರುಣ್ ಅಜೇಯ 10 ರನ್ ದಾಖಲಿಸಿದರು. ತಮಿಳುನಾಡು ಪರ ಆಂಥೋನಿ ದಾಸ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ತಮಿಳುನಾಡು 13.5 ಓವರ್‍ಗಳಲ್ಲಿ 61
(ಸೂರ್ಯಪ್ರಕಾಶ್ 24, ಶಾರುಖ್ ಖಾನ್ 12, ಜೆ.ಸುಚಿತ್ 2ಕ್ಕೆ3)

ಕರ್ನಾಟಕ 9.1 ಓವರ್‍ಗಳಲ್ಲಿ 65
(ಸಮರ್ಥ್ ಅಜೇಯ 24, ಮಾಯಾಂಕ್ 26, ಆಂಥೋನಿ 15ಕ್ಕೆ1)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT