ಬಿಎಫ್ ಸಿಗೆ ಸೋಲು 
ಕ್ರೀಡೆ

ಬಿಎಫ್ ಸಿಗೆ ಸೋಲು

ಪ್ರಬಲ ಎದುರಾಳಿ ವಿರುದಟಛಿ ಹೋರಾಟದ ಪ್ರದರ್ಶನ ನೀಡಿದರೂ ಬೆಂಗಳೂರು ಎಫ್ ಸಿ ಏಷ್ಯನ್ ಫುಟ್ಬಾಲ್ ಕಾನೆ#ಡರೇಷನ್ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಪೆರ್ಸಿಪುರ ಜಯಪುರ ವಿರುದ್ಧ ಸೋಲನುಭವಿಸಿದೆ...

ಬೆಂಗಳೂರು: ಪ್ರಬಲ ಎದುರಾಳಿ ವಿರುದಟಛಿ ಹೋರಾಟದ ಪ್ರದರ್ಶನ ನೀಡಿದರೂ ಬೆಂಗಳೂರು ಎಫ್ ಸಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಪೆರ್ಸಿಪುರ ಜಯಪುರ ವಿರುದ್ಧ ಸೋಲನುಭವಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 1-3 ಗೋಲುಗಳ ಅಂತರದಲ್ಲಿ ಇಂಡೋನೇಷ್ಯಾದ ಪೆರ್ಸಿಪುರ ಜಯಪುರ ವಿರುದ್ಧ ತಲೆಬಾಗಿದೆ. ಈ ಸೋಲಿನಿಂದ ಬಿಎಫ್ ಸಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವನ್ನು ತವರಿನಲ್ಲಿ ಆಡುವ ಅವಕಾಶ ಕಳೆದುಕೊಂಡಿದೆ.

ಪಂದ್ಯದ ಆರಂಭದಿಂದ ಆತಿಥೇಯ ಬೆಂಗಳೂರು ಎಫ್ ಸಿ ನಿಯಂತ್ರಣ ಸಾಧಿಸಿತಾದರೂ ನಂತರದ ಹಂತದಲ್ಲಿ ಪೆರ್ಸಿಪುರ ತಂಡ ಪ್ರಭುತ್ವ ಸಾಧಿಸಿತು. ಎರಡೂ ತಂಡಗಳು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಪಂದ್ಯದ 18ನೇ ನಿಮಿಷದಲ್ಲಿ ಪೆರ್ಸಿಪುರ ಮೊದಲು ಗೋಲು ದಾಖಲಿಸುವ ಅವಕಾಶ ಪಡೆಯಿತಾದರೂ ಯಶಸ್ವಿಯಾಗಲಿಲ್ಲ. ಈ ವೇಳೆ ಚುರುಕಿನ ಆಟ ಪ್ರದರ್ಶಿಸಿದ ಬಿಎಫ್ ಸಿ 24ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮುನ್ನಡೆ ಪಡೆಯಿತು. ನಂತರ 29ನೇ ನಿಮಿಷದಲ್ಲಿ ಪೆರ್ಸಿಪುರ ತಂಡದ ಪರ
ಪುಗ್ಲಿಯಾರ ಗೋಲು ದಾಖಲಿಸಿ ತಂಡ ಹೋರಾಟ ನಡೆಸಲು ನೆರವಾದರು. ಈ ಮೂಲಕ ಉಭಯ ತಂಡಗಳು ಪಂದ್ಯದ ಮೊದಲಾರ್ಧದಲ್ಲಿ 1-1 ಗೋಲುಗಳ ಸಮಬಲ ಸಾಧಿಸಿದವು.

ಪಂದ್ಯದ ಎರಡನೇ ಹಂತದಲ್ಲಿ ಪೆರ್ಸಿಪುರ ತಂಡ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಈ ಹಂತದಲ್ಲಿ ಬೆಂಗಳೂರು ತಂಡ ಪ್ರವಾಸಿಗರ ಆಕ್ರಮಣಕಾರಿ ಆಟಕ್ಕೆ ತಡೆಯಾಗಿ ನಿಲ್ಲಲು ಸಾಕಷ್ಟು ಪ್ರಯತ್ನ ಮಾಡಿದರಾದರೂ ಯಶಸ್ವಿಯಾಗಲಿಲ್ಲ. 72ನೇ ನಿಮಿಷದಲ್ಲಿ ಪೆರ್ಸಿಪುರ ತಂಡದ ಪರ ವಾಂಘೈ ಅಕರ್ಷಕ ಪ್ರದರ್ಶನ ನೀಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ವೇಳೆ ಹಿನ್ನಡೆ ಅನುಭವಿಸಿದ ಬಿಎಫ್ ಸಿ ಆಟಗಾರರ ಮೇಲೆ ಒತ್ತಡ ಹೆಚ್ಚಾಯಿತು. 77ನೇ ನಿಮಿಷದಲ್ಲಿ ಸೊಲೊಸ್ಸಾ ಮತ್ತೊಂದು ಗೋಲು ದಾಖಲಿಸಿದರು. ಬಿಎಫ್ ಸಿ ತಂಡದ ನಾಯಕ ಸುನೀಲ್ ಛೆಟ್ರಿ ಹಾಗೂ ಮತ್ತೊಬ್ಬ ಪ್ರಮುಖ ಸ್ಟ್ರೈಕರ್ ಯುಗೆನ್ಸನ್ ಲಿಂಗ್ಡೊ 79ನೇ ನಿಮಿಷದಲ್ಲಿ ಕಣಕ್ಕಿಳಿದಿದ್ದು, ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT