ಹಾಕಿ ಟೆಸ್ಟ್ ನ 2ನೇ ಪಂದ್ಯ 
ಕ್ರೀಡೆ

ಹಾಕಿ ಟೆಸ್ಟ್ ಸರಣಿ: 2 ನೇ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ವಿಶ್ವ ಚಾಂಪಿಯನ್ನರನ್ನು ಮಣಿಸುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡಕ್ಕೆ ಮುಖಭಂಗವಾಗಿದೆ.

ರಾಯ್ಪುರ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ವಿಶ್ವ ಚಾಂಪಿಯನ್ನರನ್ನು ಮಣಿಸುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡಕ್ಕೆ ಮುಖಭಂಗವಾಗಿದೆ. ಭಾನುವಾರ ನಡೆದ ಮುಖಾಮುಖಿಯಲ್ಲಿ ಭಾರತ ತಂಡವನ್ನು 1-2 ಗೋಲುಗಳ ಅಂತರದಿಂದ ಮಣಿಸಿದ ಆಸ್ಟ್ರೇಲಿಯಾ ತಂಡ, ಮೂರು ಪಂದ್ಯಗಳ ಸರಣಿಯಲ್ಲಿ 1-೦ ಅಂತರದ ಮುನ್ನಡೆ ಸಂಪಾದಿಸಿತು.
ಹೊಚ್ಚ ಹೊಸ ಸರ್ದಾರ್ ವಲ್ಲಭಭಾಯಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಇತ್ತಂಡಗಳು ಉತ್ತಮವಾಗಿಯೇ ಪೈಪೋಟಿ ನೀಡಿದವು. ಆದರೆ, ಭಾರತ ತಂಡದ ದೌರ್ಬಲ್ಯಗಳನ್ನು ಮೊದಲ ಪಂದ್ಯದಲ್ಲಿ ಚೆನ್ನಾಗಿ ಅರಿತಿದ್ದ ಆಸ್ಟ್ರೇಲಿಯಾ ಅದನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಆದರೂ, ಪಂದ್ಯದಲ್ಲಿ ಮೊದಲು ಗೋಲು ದಾಖಲಿಸಿದ್ದು ಭಾರತವೇ.
ಪಂದ್ಯದ ಎರಡನೇ ಕ್ವಾರ್ಟರ್ ಅವಧಿಯಲ್ಲಿ ಮಿಂಚಿನ ನಡೆ ತೋರಿದ ದೇವಿಂದರ್ ವಾಲ್ಮೀಕಿ ಅವರು, ಪಂದ್ಯದ 23ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಕೋಟೆಯನ್ನು ಬೇಧಿಸಿ ಸಾಗಿ, ಗೋಲ್ ಕೀಪರ್ ಲಿಯೋನ್ ಹೇವರ್ಡ್ ಕಣ್ತಪ್ಪಿಸಿ, ಚೆಂಡನ್ನು ಆಸೀಸ್ ಗೋಲು ಪೆಟ್ಟಿಗೆಯೊಳಗೆ ನುಗ್ಗಿಸುವಲ್ಲಿ ಯಶಸ್ವಿಯಾದರು.
ಈ ಮೂಲಕ, ಭಾರತ ತಂಡ, ಆಸೀಸ್ ವಿರುದ್ಧ 1-0 ಗೋಲ್‍ನ ಮುನ್ನಡೆ ಪಡೆಯಿತು. ಆದರೆ, ಇದಾದ ನಂತರ, ಭಾರತಕ್ಕೆ ಸಿಕ್ಕ ಕೆಲವು ಗೋಲುಗಳಿಸುವ ಅವಕಾಶಗಳನ್ನು ಎದುರಾಳಿಗಳು
ವಿಫಲಗೊಳಿಸಿದರು. ಆದರೆ, ನಾಲ್ಕನೇ ಕ್ವಾರ್ಟರ್ ಅವಧಿಯಲ್ಲಿ ಭಾರತದ ಉತ್ಸಾಹಕ್ಕೆ ಭಂಗ ತಂದ ಆಸೀಸ್, ಎರಡು ಗೋಲು ದಾಖಲಿಸಿ, ಪಂದ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. 47ನೇ ಜಾಕೋಬ್ ವೆಟ್ಟನ್ ಅವರು ತಮ್ಮ ತಂಡಕ್ಕೆ ಮೊದಲ ಗೋಲ್ ಗಳಿಸಿಕೊಟ್ಟರೆ, 48ನೇ ನಿಮಿಷದಲ್ಲಿ ಎರಾನ್ ಜಾಲೆವ್‍ಸ್ಕಿ ಅವರು 2ನೇ ಗೋಲು ಗಳಿಸಿದರು.
ಪಂದ್ಯದ ಅಂತ್ಯದವರೆಗೂ ಭಾರತದ ಕಡೆಯಿಂದ ಮತ್ತೊಂದು ಸಾಂಘಿಕ ದಾಳಿ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ, ಆಸ್ಟ್ರೇಲಿಯಾ ತಂಡ 2-1 ಅಂತರದಲ್ಲಿ ಜಯ ಸಾಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

SCROLL FOR NEXT