ಕ್ರೀಡೆ

ಸರಣಿ ಜೀವಂತವಾಗಿಡಲು ಧೋನಿ ಪಡೆ ಪಣ

ದ.ಆಫ್ರಿಕಾ ವಿರುದ್ಧ 7 ವಿಕೆಟ್ ಸೋಲನುಭವಿಸಿದ ಆತಿಥೇಯ ಭಾರತ, ಸೋಮವಾರ ನಡೆಯಲಿರುವ ಎರಡನೆ ಚುಟುಕು ಪಂದ್ಯಕ್ಕೆಅಣಿಯಾಗಿದ್ದು ಸರಣಿ ಜೀವಂತವಾಗಿಡಲು ಪಣ ತೊಟ್ಟಿದೆ.

ಕಟಕ್: ಸವಾಲಿನ ಮೊತ್ತವನ್ನು ಪೇರಿಸಿಯೂ ಮೊದಲ ಪಂದ್ಯದಲ್ಲಿ ಪ್ರವಾಸಿ ದ.ಆಫ್ರಿಕಾ ವಿರುದ್ಧ 7 ವಿಕೆಟ್ ಸೋಲನುಭವಿಸಿದ ಆತಿಥೇಯ ಭಾರತ, ಸೋಮವಾರ ನಡೆಯಲಿರುವ ಎರಡನೆ ಚುಟುಕು ಪಂದ್ಯಕ್ಕೆಅಣಿಯಾಗಿದ್ದು ಸರಣಿ ಜೀವಂತವಾಗಿಡಲು ಪಣ ತೊಟ್ಟಿದೆ.
ಇತ್ತ ಮೊದಲ ಪಂದ್ಯದ ಗೆಲುವಿನಿಂದ ಉತ್ಸಾಹದ ಬುಗ್ಗೆಯಂತಾಗಿರುವ ಫಾಫ್ ದು ಪ್ಲೆಸಿಸ್ ಸಾರಥ್ಯದ ದ.ಆಫ್ರಿಕಾ ತಂಡ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನು ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಹೀಗಾಗಿ ಮೂರು ಟಿ-20 ಪಂದ್ಯ ಸರಣಿಯನ್ನು 2 -0 ಅಂತರದಿಂದ ಪ್ರವಾಸಿ ತಂಡದ ಪಾಲಾಗುವುದನ್ನು ತಪ್ಪಿಸಲು ಶತಾಯ ಗತಾಯ ಪಂದ್ಯದಲ್ಲಿ ಗೆಲುವು ಸಾಧಿಸದೇ ಧೋನಿ ಪಡೆಗೆ ಗತ್ಯಂತರವಿಲ್ಲ. 
ಬಾಂಗ್ಲಾದೇಶ ಪ್ರವಾಸದ ಬಳಿಕ ಹೆಚ್ಚೂ ಕಮ್ಮಿ ಮೂರು ತಿಂಗಳು ವಿಶ್ರಾಂತಿ ಪಂಡೆದಿದ್ದ ನಾಯಕ ಧೋನಿ, ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಹರಿಣಗಳ ವಿರುದ್ಧದ 72 ದಿನಗಳ ಈ ಸುದೀರ್ಘ ಪ್ರವಾಸದಲ್ಲಿ ತವರಿನಲ್ಲಿ ತಂಡ ಆರಂಭದಲ್ಲೇ ಹೀಗೆ ಮುಗ್ಗರಿಸಿರುವುದು ಆಟಗಾರರ ಆತ್ಮಸ್ಥೈರ್ಯಕ್ಕೆ ಪೆಟ್ಟು ನೀಡಿದೆ. ಆದಾಗ್ಯೂ ಮಾಡು ಇಲ್ಲವೇ ಮಡಿ ಎಂಬಂತಾಗಿರುವ ಪಂದ್ಯದಲ್ಲಿ ಗೆಲುವು ಸಾಧಿಸಲು ಶಕ್ತಿ ಮೀರಿ ಹೋರಾಡಲು ಧೋನಿ ಪಡೆ ಅಣಿಯಾಗಿದೆ.
ಆರಂಭಿಕ ರೋಹಿತ್ ಶರ್ಮಾ ಸಿಡಿಸಿದ ಚೊಚ್ಚಲ ಟಿ-20 ಶತಕದೊಂದಿಗೆ ಸವಾಲಿನ ಮೊತ್ತ ಪೇರಿಸಿಯೂ ಭಾರತ ಮೊದಲ ಪಂದ್ಯದಲ್ಲಿ ಸೋಲುಂಡಿತ್ತು. ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಗಳಿಸಿದ ಅರ್ಧಶತಕವಲ್ಲದೇ, ಆಲ್ ರೌಂಡರ್ ಜೆಪಿ ಡುಮಿನಿ ಅಜೇಯ ಆಟದೊಂದಿಗೆ ಹರಿಣಗಳಿಗೆ ಕೊನೇ ಓವರ್ ನಲ್ಲಿ ಗೆಲುವು ತಂದುಕೊಟ್ಟಿದ್ದರು.    

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT