ಕ್ರೀಡಾ ಸಚಿವ ವಿಜಯ್ ಗೋಯಲ್ ಭಾರತ ಹಾಕಿ ತಂಡದ ಆಟಗಾರರರೊಂದಿಗೆ ನಿನ್ನೆ ರಿಯೊ ಡಿ ಜನೈರೊದಲ್ಲಿ
ರಿಯೊ ಡಿ ಜನೈರೊ: ಕ್ರೀಡಾ ಸಚಿವ ವಿಜಯ್ ಗೋಯಲ್ ಅವರ ಬೆಂಬಲಿಗರು ರಿಯೋ ಒಲಂಪಿಕ್ಸ್'ನ ಹಾಕಿ ಕ್ರೀಡಾಂಗಣದ ಕೆಲವು ನಿಷೇಧಿತ ಸ್ಥಳಗಳಿಗೆ ತೆರಳಿದ್ದಲ್ಲದೆ, ಅಲ್ಲಿ ಗೂಂಡಾ ವರ್ತನೆ ತೋರಿದ ಹಿನ್ನೆಲೆಯಲ್ಲಿ, ಆಯೋಜಕರು ಭಾರತದ ಕ್ರೀಡಾ ಸಚಿವರ ಪ್ರವೇಶ ಪತ್ರವನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕ್ರೀಡಾಂಗಣದ ಭದ್ರತಾ ಸಿಬ್ಬಂದಿಗಳು ಈ ಸ್ಥಳಗಳ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ವಿಜಯ್ ಗೋಯಲ್ ಬೆಂಬಲಿಗರು ಗೂಂಡಾ ವರ್ತನೆ ತೋರಿದ್ದಾರೆಂದು ರಿಯೊ ಕೂಟದ ವ್ಯವಸ್ಥಾಪಕಿ ಸಾರಾ ಪೀಟರ್'ಸನ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾ ಸಚಿವರ ಪ್ರವೇಶ ಪತ್ರವನ್ನು ರದ್ದುಗೊಳಿಸುವ ಎಚ್ಚರಿಕೆ ರಿಯೋ ಕೂಟದ ವ್ಯವಸ್ಥಾಪಕರು ನೀಡಿದ್ದಾರೆ.
ವಿಜಯ್ ಗೋಯಲ್, ರಿಯೊದ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಭಾರತೀಯ ಆಟಗಾರರ ವ್ಯವಸ್ಥೆ ಹಾಗೂ ಅಗತ್ಯಗಳ ಬಗ್ಗೆ ನಿಗಾವಹಿಸಲು ಅಲ್ಲಿಗೆ ತೆರಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos