ಬಿಸಿಸಿಐ 
ಕ್ರೀಡೆ

ಲೋಧಾ ಸಮಿತಿ ಶಿಫಾರಸು ಅನುಷ್ಠಾನಗೊಂಡರೆ ಬಿಸಿಸಿಐಗೆ 1600 ಕೋಟಿ ರು. ನಷ್ಟ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸುಧಾರಣೆಗೆಂದು ನಿವೃತ್ತ ನ್ಯಾಯಮೂರ್ತಿ ಆರ್.ಎಂ ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ಮಹತ್ವದ...

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸುಧಾರಣೆಗೆಂದು ನಿವೃತ್ತ ನ್ಯಾಯಮೂರ್ತಿ ಆರ್.ಎಂ ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ಮಹತ್ವದ ಶಿಫಾರಸುಗಳು ಯಥಾವತ್ ಆಗಿ ಅನುಷ್ಠಾನಕ್ಕೆ ತಂದದ್ದೇ ಆದಲ್ಲಿ ಬಿಸಿಸಿಐ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ.

ಆರನೇ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದಿಂದಾಗಿ ಸುಪ್ರೀಂಕೋರ್ಟ್ ಆಣತಿಯಂತೆ ಆರ್.ಎಂ ಲೋಧಾ ಅವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದರೆ ಬಿಸಿಸಿಐ 1600 ಕೋಟಿ ರು.ಗಳ ಭಾರಿ ನಷ್ಟ ಅನುಭವಿಸಬೇಕಿದೆ.

ಬಿಸಿಸಿಐನ ಬ್ಯಾಲೆನ್ಸ್ ಶೀಟ್(ಆಯವ್ಯಯ ಪತ್ರ)ನ ಪ್ರಕಾರ ಕೇವಲ ಬಿಸಿಸಿಐನ ಕಾರ್ಯಚರಣೆಯ ಅಂದಾಜು ಮೊತ್ತ 2000 ಕೋಟಿ ರು. ಎನ್ನಲಾಗಿದ್ದು, ಈ ಪೈಕಿ ಅತಿಹೆಚ್ಚಿನ ಆದಾಯ ಪಂದ್ಯದ ನೇರಪ್ರಸಾರ ಹಾಗೂ ಜಾಹೀರಾತು ಮೂಲಗಳಿಂದಲೇ ಹರಿದುಬರುತ್ತಿದೆ. ಆದರೆ ಲೋಧ ಸಮಿತಿ ಪಂದ್ಯದ ಭೋಜನ, ಚಹಾ ಇಲ್ಲವೇ ಡ್ರಿಂಕ್ಸ್ ವಿರಾಮದ ವೇಳೆಯಲ್ಲಷ್ಟೇ ಜಾಹೀರಾತು ಪ್ರಸಾರಕ್ಕೆ ಅನುಮತಿ ನೀಡಿದ್ದು ಇದು ಕಾರ್ಯಗತಗೊಂಡರೆ ಬಿಸಿಸಿಐನ ಆದಾಯ 400 ಕೋಟಿ ರು.ಗೆ ತಗ್ಗಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT