ಕರ್ನಾಟಕ ವಾಲಿಬಾಲ್ ತಂಡ 
ಕ್ರೀಡೆ

ಕರ್ನಾಟಕಕ್ಕೆ ಸತತ ಎರಡನೇ ಜಯ

ಪಂದ್ಯದಲ್ಲಿ ಪ್ರಭುತ್ವಯುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಪುರುಷರ ವಾಲಿಬಾಲ್ ತಂಡ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಶಿಪ್ ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿದೆ...

ಬೆಂಗಳೂರು: ಪಂದ್ಯದಲ್ಲಿ ಪ್ರಭುತ್ವಯುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಪುರುಷರ ವಾಲಿಬಾಲ್ ತಂಡ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಶಿಪ್ ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿದೆ.

ಸೋಮವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ
ಕರ್ನಾಟಕ ತಂಡ 3-0 (25-19, 25-23, 27-25) ಸೆಟ್‍ಗಳ ಅಂತರದಲ್ಲಿ ಜಯಿಸಿತು. ತೀವ್ರ
ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ಯಾವುದೇ ಹಂತದಲ್ಲೂ ನಿಯಂತ್ರಣ ಕಳೆದುಕೊಳ್ಳದೇ ಆಡುವ ಮೂಲಕ ಜಯ ಸಾಧಿಸಿತು.

ಕರ್ನಾಟಕ ತಂಡದ ಪರ ನಾಯಕ ಕಾರ್ತಿಕ್, ಭರತ್ ಮತ್ತು ಶರತ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಜಯದೊಂದಿಗೆ ಕರ್ನಾಟಕ ತಂಡ ಸತತ ಎರಡನೇ ಜಯ ಸಾಧಿಸಿದ್ದು, ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಆರಂಭದಲ್ಲಿ ಸುಲಭ ಮುನ್ನಡೆ ಸಾಧಿಸಿದ ಕರ್ನಾಟಕ ಆಟಗಾರರು 25-19 ಅಂತರದ ಮೇಲುಗೈ ಸಾಧಿಸಿದರು. ನಂತರ ಎದುರಾಳಿಗಳಿಂದ ತೀವ್ರ ಪೈಪೋಟಿ ಎದುರಿಸಬೇಕಾದ ಪರಿಣಾಮ ಎರಡನೇ ಸೆಟ್‍ನಲ್ಲಿ 25-23 ಅಂತರದ ರೋಚಕ ಮುನ್ನಡೆ ಪಡೆದರು. ಮೂರನೇ ಸೆಟ್‍ನಲ್ಲಿ ನೀಡಿದ ಸರ್ವೀಸಸ್
ಆಟಗಾರರು ಮತ್ತಷ್ಟು ಹೋರಾಟ ನೀಡಿದ ಪರಿಣಾಮ ರಾಜ್ಯ ತಂಡ 27-25ರ ಮುನ್ನಡೆ ಪಡೆಯಬೇಕಾಯಿತು.

ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡ 3-1 (20-25, 25-20, 26-24, 25-19) ಸೆಟ್‍ಗಳ ಅಂತರದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿತು. ಪಂದ್ಯದ
ಆರಂಭದಲ್ಲಿ ತಂಡ ನಿರಾಸೆ ಅನುಭವಿಸಿದರೂ ನಂತರ ಚೇತರಿಕೆ ಕಂಡಿತು. ಆರಂಭದಲ್ಲಿ
ಮುಗ್ಗರಿಸಿದ ತಮಿಳುನಾಡು ತಂಡ 20-25 ಅಂತರದ ಹಿನ್ನಡೆ ಅನುಭವಿಸಿತು. ಎರಡನೇ
ಸೆಟ್‍ನಲ್ಲಿ ತನ್ನ ಲಯ ಕಂಡುಕೊಂಡ ತಮಿಳುನಾಡು 25-20ರ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸಮಬಲ ಸಾಧಿಸಿತು. ನಂತರದ ಎರಡು ಸೆಟ್‍ಗಳಲ್ಲೂ ಬಿಗಿ ಹಿಡಿತ ಸಾಧಿಸಿ ಪಂದ್ಯವನ್ನು ಗೆದ್ದುಕೊಂಡಿತು. ಇನ್ನು ಮಹಿಳೆಯರ ವಿಭಾಗದ ಪಂದ್ಯದಲ್ಲಿ ರೈಲೇಸ್ ತಂಡ ಪಂಜಾಬ್ ವಿರುದ್ಧ 3-0 (25-9, 25-3, 25-10) ಸೆಟ್‍ಗಳಿಂದ ಸುಲಭ ಜಯ
ತನ್ನದಾಗಿಸಿಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT